6
  • Latest

ರಸ್ತೆ ನಿರ್ಮಾಣಕ್ಕೆ ಮುಹೂರ್ತ – ಶಾಲೆ ಅಂಗನವಾಡಿ ಅಭಿವೃದ್ಧಿಗೆ ಸಂಕಲ್ಪ: ಗುಡ್ಡಳ್ಳಿಗೆ ಜಿಲ್ಲಾಧಿಕಾರಿ ಬಂದಿದ್ದು ಸಾರ್ಥಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆ ನಿರ್ಮಾಣಕ್ಕೆ ಮುಹೂರ್ತ – ಶಾಲೆ ಅಂಗನವಾಡಿ ಅಭಿವೃದ್ಧಿಗೆ ಸಂಕಲ್ಪ: ಗುಡ್ಡಳ್ಳಿಗೆ ಜಿಲ್ಲಾಧಿಕಾರಿ ಬಂದಿದ್ದು ಸಾರ್ಥಕ!

ಕಲಾವಿದ ವಿಶ್ರಮ ಗೌಡರ ಶ್ರಮಕ್ಕೆ ಡೀಸಿ ಮೆಚ್ಚುಗೆ | ಬಂದೂಕು ಹಿಡಿದು ತಾಲೀಮು ನಡೆಸಿದ IAS ಅಧಿಕಾರಿ

AchyutKumar by AchyutKumar
in ಸ್ಥಳೀಯ

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕುಗ್ರಾಮಗಳ ಪಟ್ಟಿಯಲ್ಲಿರುವ ಗುಡ್ಡಳ್ಳಿಗೆ ವಿವಿಧ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಮುಂದಾಗಿದ್ದಾರೆ. ಶುಕ್ರವಾರ ಗುಡ್ಡಳ್ಳಿಗೆ ದಿಢೀರ್ ಭೇಟಿ ನೀಡಿದ ಅವರು ಜನರ ಸಮಸ್ಯೆ ಆಲಿಸಿದರು. ಅದಾದ ನಂತರ ಅಭಿವೃದ್ಧಿ ಚಟುವಟಿಕೆಯ ಬಗ್ಗೆ ಚರ್ಚಿಸಿ ವಾಗ್ದಾನ ಮಾಡಿದರು.

ಕಾರವಾರದಿಂದ 3.5 ಕಿಮೀ ದೂರವಿದ್ದರೂ ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಸರಿಯಾಗಿರಲಿಲ್ಲ. ಎರಡು ವರ್ಷದ ಹಿಂದೆ 1.2ಕಿಮೀ ರಸ್ತೆ ನಿರ್ಮಿಸಿ ಕಡೀಕರಣ ಮಾಡುವುದಕ್ಕಾಗಿ ಅನುದಾನ ಮೀಸಲಿಟ್ಟಿದ್ದರೂ ಮಳೆ ಹಾಗೂ ಇನ್ನಿತರ ಕಾರಣದಿಂದ ಕೆಲಸ ಆಗಿರಲಿಲ್ಲ. ಗುತ್ತಿಗೆ ಪಡೆದಿರುವ ಸಿದ್ಧಾರ್ಥ ನಾಯ್ಕ ಅವರು ರಸ್ತೆ ಕಾಮಗಾರಿ ಶುರು ಮಾಡಿದಾಗ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿತ್ತು. ಆ ಅವಧಿಯಲ್ಲಿ ರಸ್ತೆಗೆ ಹಾಕಲು ತಂದಿರಿಸಿದ ಜಲ್ಲಿ ಕಲ್ಲುಗಳು ಸಹ ನೀರು ಪಾಲಾಗಿದ್ದವು. ಹೀಗಾಗಿ `ಗುಡ್ಡಳ್ಳಿ ಸಂಪರ್ಕಕ್ಕೆ ಡಾಂಬರೀಕರಣವೊ0ದೇ ದಾರಿ’ ಎಂದು ಗುತ್ತಿಗೆದಾರ ಸಿದ್ದಾರ್ಥ ನಾಯ್ಕ ಅವರು ಪತ್ರ ಬರೆದಿದ್ದರು.

ಇದಾದ ನಂತರ ಗ್ರಾಮದ ಜನರು ಸಹ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಊರಿನ ಸಮಸ್ಯೆ ಬಗ್ಗೆ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಸ್ವತಃ ಗುಡ್ಡಳ್ಳಿಗೆ ತೆರಳಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಲ್ಲಿನವರ ಸಮಸ್ಯೆ ಆಲಿಸಿದರು. ಊರಿನ ಜನ ಶಾಲೆ, ಅಂಗನವಾಡಿ ಹಾಗೂ ರಸ್ತೆ ಸಮಸ್ಯೆ ಬಗ್ಗೆ ಅವರಿಗೆ ಮನವರಿಕೆ ಮಾಡಿದರು. `ಅರ್ದಕ್ಕೆ ನಿಂತಿರುವ ರಸ್ತೆಯನ್ನು ಒಂದು ತಿಂಗಳಿನ ಒಳಗೆ ಪೂರ್ಣಗೊಳಿಸಿ’ ಎಂದು ಈ ವೇಳೆ ಲಕ್ಷ್ಮೀಪ್ರಿಯಾ ಅವರು ಲೋಕೋಪಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರೊಂದಿಗೆ ಜನರ ಬೇಡಿಕೆಯಂತೆ ಅಂಗನವಾಡಿ ಕಟ್ಟಡ ನಿರ್ಮಾಣ ಹಾಗೂ ಶಾಲೆಗೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಸಹ ಅವರು ಸಮ್ಮತಿ ಸೂಚಿಸಿದರು.

ಗುಡ್ಡಳ್ಳಿಯಲ್ಲಿರುವ ವಿಶ್ರಮ ಗೌಡ ಅವರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅಲ್ಲಿನ ವಿಗ್ರಹಗಳನ್ನು ವೀಕ್ಷಿಸಿದರು. ವಿಶ್ರಮ ಗೌಡ ಅವರು ತಯಾರಿಸಿದ ಬಂದೂಕು ಮಾದರಿಯನ್ನು ಕೈಯಲ್ಲಿ ಹಿಡಿದು ತಾಲೀಮು ನಡೆಸಿದರು. ಕಲಾವಿದನ ಶ್ರಮಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮಕ್ಕಳ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದು, ಇದರಿಂದ ಅಲ್ಲಿನ ಮಕ್ಕಳು ಖುಷಿ ಹಂಚಿಕೊ0ಡರು.

ShareSendTweetShare
Previous Post

ನೆರೆ ಜಿಲ್ಲೆ ಪೊಲೀಸರಿಗೆ ನೆರವಾದ 112!

Next Post

ಆನೆ ಬಂದರೂ ಬಾರದ ಅರಣ್ಯಾಧಿಕಾರಿಗಳು: ಅಪಾಯಕಾರಿ ಸನ್ನಿವೇಶದಲ್ಲಿಯೂ ಸೆಲ್ಪಿಗೆ ಮುಗಿಬಿದ್ದ ಪ್ರವಾಸಿಗರು!

Next Post

ಆನೆ ಬಂದರೂ ಬಾರದ ಅರಣ್ಯಾಧಿಕಾರಿಗಳು: ಅಪಾಯಕಾರಿ ಸನ್ನಿವೇಶದಲ್ಲಿಯೂ ಸೆಲ್ಪಿಗೆ ಮುಗಿಬಿದ್ದ ಪ್ರವಾಸಿಗರು!

ಸಾಲ ಮಾಡಿ ಶಬರಿಮಲೆಗೆ ಹೋದ ರಿಕ್ಷಾ ಚಾಲಕನಿಗೆ ಸಂಕಷ್ಟ!

ಬೈಕಿಗೆ ಗುದ್ದಿದ ಲಾರಿ: ಸ್ಥಳದಲ್ಲಿಯೇ ಮಹಿಳೆ ಸಾವು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.