6
  • Latest

ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಹಾರಿ ಜೇನು | ಬಾಯಿಗೆ ಸಿಹಿ: ಆರೋಗ್ಯಕ್ಕೆ ಕಹಿ!

AchyutKumar by AchyutKumar
January 18, 2025
in ಸ್ಥಳೀಯ
advt advt advt
ADVERTISEMENT

ಮರದಿಂದ ತಾಜಾ ಇಳಿಸಿದ ಜೇನುತುಪ್ಪ ಎಂದು ಬಿಂಬಿಸಿ ಕೆಮಿಕಲ್ ಮಿಶ್ರಣದ ಸಿಹಿ ಮಾರಾಟ ಮಾಡುತ್ತಿದ್ದವರನ್ನು ಅಂಕೋಲಾದ ಜನ ಬೆಂಡೆತ್ತಿದ್ದಾರೆ.

ಅಂಕೋಲಾ ಕುಂಬರಕೇರಿ ರಸ್ತೆಯ ಮರವೊಂದಕ್ಕೆ ಜೇನು ಕುಟುಂಬವೊoದು ಗೂಡು ಕಟ್ಟಿತ್ತು. ಬಿಹಾರ ಮೂಲದ ಒಂದಷ್ಟು ಹುಡುಗರು ಇದನ್ನು ನೋಡಿದ್ದರು. ಶುಕ್ರವಾರ ಆ ಮರದಲ್ಲಿದ್ದ ಜೇನುಹುಳಕ್ಕೆ ಬೆಂಕಿ ಹಾಕಿದ ಆ ದುಷ್ಕರ್ಮಿಗಳು `ಈಗ ತಾನೇ ತೆಗೆದ ತುಪ್ಪ’ ಎಂದು ಬಿಂಬಿಸಿ ಪ್ರತಿ ಕೆಜಿಗೆ 600ರೂ ದರದಲ್ಲಿ ದ್ರಾವಣ ಮಾರಾಟ ಮಾಡುತ್ತಿದ್ದರು. ಸುಮಾರು 50 ಕೆಜಿ ಮೀರಿ ವ್ಯಾಪಾರವಾದರೂ ಅವರಲ್ಲಿದ್ದ ಜೇನುತುಪ್ಪ ಖಾಲಿ ಆಗಿರಲಿಲ್ಲ!

Advertisement. Scroll to continue reading.
ADVERTISEMENT
ADVERTISEMENT

ಒಂದು ಜೇನುಗೂಡಿನಿಂದ ಈ ಪ್ರಮಾಣದಲ್ಲಿ ಜೇನು ತುಪ್ಪ ಸಿಕ್ಕಿರುವ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದರು. ಜೇನುತುಪ್ಪ ಖಾಲಿ ಆದ ಹಾಗೇ ಬೇರೆ ಕಡೆಯಿಂದ ಅದನ್ನು ತರುತ್ತಿರುವುದನ್ನು ಪತ್ತೆ ಮಾಡಿದರು. ಬಿಹಾರಿಗಳ ಬೆನ್ನತ್ತಿ ಹೋದ ಸ್ಥಳೀಯರಿಗೆ ಅನತಿ ದೂರದಲ್ಲಿ ರಿಕ್ಷಾವೊಂದು ಕಂಡಿದ್ದು, ಅಲ್ಪ ಪ್ರಮಾಣದ ಜೇನುತುಪ್ಪಕ್ಕೆ ಅಪಾರ ಪ್ರಮಾಣದಲ್ಲಿ ಕೆಮಿಕಲ್ ದ್ರಾವಣ ಬೆರೆಸುತ್ತಿರುವುದು ಕಾಣಿಸಿತು. ಅದನ್ನು ಮತ್ತೆ ಜೇನು ಮರದ ಅಡಿ ತಂದು ಸ್ವಾಭಾವಿಕವಾಗಿ ಸಿದ್ಧವಾದ ಜೇನು ತುಪ್ಪ ಎಂದು ಬಿಂಬಿಸಿ ಮಾರುತ್ತಿದ್ದರು.

Advertisement. Scroll to continue reading.

ಈ ಬಗ್ಗೆ ಕುಂಬಾರಕೇರಿಯ ಪ್ರದೀಪ ನಾಯ್ಕ ಪೊಲೀಸರಿಗೆ ತಿಳಿಸಿದರು. ಪೋಲಿಸ್ ಸಿಬ್ಬಂದಿ ಆಶಿಪ್ ಕುಂಕುರ, ಶ್ರೀಕಾಂತ ಕಟಬರ ಜೊತೆ ಒಂದಷ್ಟು ಯುವಕರು ರಿಕ್ಷಾ ಸುತ್ತ ಜಮಾಯಿಸಿ ಬಿಹಾರಿಗಳ ಕಳ್ಳ ವ್ಯಾಪಾರಕ್ಕೆ ಕಡ್ಡಿ ಮಾಡಿದರು. `ತಾವು ಖರೀದಿಸಿದ ಜೇನುತುಪ್ಪ ಅಸಲಿಯಲ್ಲ’ ಎಂದು ಅರಿತ ಮಹಿಳೆಯರು ಅಲ್ಲಿಗೆ ಬಂದು ಕಳ್ಳ ವ್ಯಾಪಾರಿಗಳನ್ನು ಜಾಡಿಸಿದರು. `ನಮ್ಮ ಹಣ ನಮಗೆ ಕೊಡಿ’ ಎಂದು ಪಟ್ಟು ಹಿಡಿದರು.

ನಿಜವಾದ ಜೇನುತುಪ್ಪ ಎಂಬು ಬಿಂಬಿಸಿ ಕೆಮಿಕಲ್ ಮಿಶ್ರಣ ಮಾರಾಟ ಮಾಡುತ್ತಿದ್ದವರಿಗೆ ಕೆಲವರು ಕೊರಳ ಪಟ್ಟಿ ಹಿಡಿದು ಪ್ರಶ್ನಿಸಿದರು. ಮೋಸ ಮಾಡಿದವರನ್ನು ಸುಮ್ಮನೆ ಬಿಡಬಾರದು ಎಂದು ಇನ್ನು ಕೆಲವರು ಎರಡು ಏಟು ಬಾರಿಸಿದರು. ಪುರಸಭೆ ಆರೋಗ್ಯಾಧಿಕಾರಿ ವಿಷ್ಣು ಗೌಡ ಆಗಮಿಸಿ ಕೆಮಿಕಲ್ ಮಿಶ್ರಣದ ಜೇನುತುಪ್ಪದ ಮಾದರಿ ಪಡೆದರು. ಇದನ್ನು ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರಕ್ಕೆ ಕಳುಹಿಸುವುದಾಗಿ ಅವರು ಹೇಳಿದ್ದಾರೆ.

ShareSendTweetShare
ADVERTISEMENT
Previous Post

ಬೈಕಿಗೆ ಗುದ್ದಿದ ಕಾರಿ: ಆಚಾರಿ ಕೆಲಸಗಾರ ಸಾವು!

Next Post

ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!

Next Post
A yoga teacher by name: What he did was intoxicating!

ಸಿಗರೇಟಿನ ಸಿಸದಲ್ಲಿ ಗಾಂಜಾ ಅಮಲು: ಸಿಕ್ಕಿಬಿದ್ದ ರಾಪ್ಟಿಂಗ್ ಗೈಡ್!

ನಿಲ್ಲಿಸಿದ ಕಾರಿಗೆ ಆಂಬುಲೆನ್ಸ ಡಿಕ್ಕಿ!

ಶಾಲಾ ಬಾಲಕನಿಗೆ ಗುದ್ದಿದ ಖಾಸಗಿ ಬಸ್ಸು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.