ವೇಗವಾಗಿ ಬಂದ ಕಾರು ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಹಿಂಬದಿ ಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಶಿರಸಿ-ಸಿದ್ದಾಪುರ ರಸ್ತೆಯ ತ್ಯಾಗಲಿ ತಿರುವಿನಲ್ಲಿ ಜನವರಿ 17ರಂದು ಈ ಅಪಘಾತ ನಡೆದಿದೆ. ಧಾರವಾಡ ತಿಮ್ಮಾಪುರದ ಹನುಮಂತ ಗೌಡ ಎಂಬಾತರು ಶಿರಸಿಯಿಂದ ಸಿದ್ದಾಪುರ ಕಡೆ ವೇಗವಾಗಿ ಕಾರು ಓಡಿಸುತ್ತಿದ್ದರು. ಕಸ್ತೂರಿ ಬಾ ಕನ್ನಡ ಉರ್ದುಶಾಲೆ ಬಳಿ ಮರ ಕೆತ್ತನೆ ಕೆಲಸ ಮಾಡುವ ಪೈಜುಲ್ಲಾ ಅಬ್ದುಲ್ ಸತ್ತಾರ್ ಜೂಡಿದಾರ ಸಿದ್ದಾಪುರದಿಂದ ಶಿರಸಿ ಕಡೆ ಹೊರಟಿದ್ದರು. ತ್ಯಾಗಲಿ ತಿರುವಿನಲ್ಲಿ ಕಾರು ಬೈಕಿಗೆ ಗುದ್ದಿತು.
ಪರಿಣಾಮ ಬೈಕು ಓಡಿಸುತ್ತಿದ್ದ ಫೈಜುಲ್ಲಾ ಜೊತೆ ಹಿಂಬದಿ ಸವಾರ ಸೌದ್ ಅಹ್ಮದ್ ಶಕೂರು ಚೂಡಿದಾರ ಸಹ ಗಾಯಗೊಂಡರು. ಇಬ್ಬರನ್ನು ಪಂಡಿತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಫೈಜುಲಾ ಅಲ್ಲಿ ಕೊನೆ ಉಸಿರೆಳೆದರು. ಕಾರು ಚಾಲಕನ ಅತಿ ವೇಗ ಈ ಅಪಘಾತಕ್ಕೆ ಕಾರಣವಾದ ಬಗ್ಗೆ ಪೇಂಟಿAಗ್ ಕೆಲಸ ಮಾಡುವ ಅಜಮದ್ ಹುಸೇನ್ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.





