`ಹೊನ್ನಾವರದ ಸಾಲ್ಕೋಡ ಗ್ರಾಮ ಸಮೀಪದ ಕೊಂಡುಕುಳಿ ಗ್ರಾಮದಲ್ಲಿ ಹಸುವಿನ ತಲೆ ಕಡಿದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಬೇಕು’ ಎಂದು ಉತ್ತರ ಕನ್ನಡ ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ್ ಅರ್ಗೇಕರ್ ಹೇಳಿದ್ದಾರೆ.
`ಗ್ರಾಮೀಣ ಭಾಗದ ಜನ ತಾವು ಸಾಕಿದ ಹಸುಗಳನ್ನು ಮೇವಿಗಾಗಿ ಅರಣ್ಯ ಪ್ರದೇಶಕ್ಕೆ ಕಳುಹಿಸುತ್ತಾರೆ. ದುಷ್ಕರ್ಮಿಗಳು ಸಂಚು ರೂಪಿಸಿ ಮಾಂಸಕ್ಕಾಗಿ ಹಸುವಿನ ರುಂಡ ಕೊಯ್ದು, ಕರುವಿನ ದೇಹವನ್ನು ಬಿಸಾಡಿದ್ದಾರೆ. ಹೈನುಗಾರಿಕೆ ನಡೆಸುವವರಿಗೆ ಇದರಿಂದ ದೊಡ್ಡ ಆಘಾತವಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಮಾಡಬೇಕು’ ಎಂದವರು ಆಗ್ರಹಿಸಿದ್ದಾರೆ.
`ಈ ಹಿಂದೆಯೂ ಸಹ ಜಿಲ್ಲೆಯಲ್ಲಿ ದನ ಕಳ್ಳತನ ಹೆಚ್ಚಾಗಿತ್ತು. ವಾಹನಗಳಲ್ಲಿ ಬಂದು ದನಗಳನ್ನು ಕದ್ದು ಸಾಗಿಸುತ್ತಿದ್ದರು. ಇದೀಗ ಸಾಕಿದ ಹಸುಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು ಆರೋಪಿಗಳನ್ನ ಬಂಧಿಸದೇ ಇದ್ದರೆ ಇಂತಹ ಕೃತ್ಯ ಮುಂದುವರೆಯಲಿದೆ. ಇದರಿಂದ ಕೋಮು ಸಂಘರ್ಷದ ಸಾಧ್ಯತೆಗಳು ಹೆಚ್ಚಿದೆ’ ಎಂದವರು ಹೇಳಿದ್ದಾರೆ.
`ಹಿಂದೂಗಳ ಭಾವನೆಗೆ ಧಕ್ಕೆ ತರುವಂತೆ ಮಾಡಿದವರ ಬಂಧನ ಆಗದೇ ಇದ್ದರೆ ಹೋರಾಟ ಅನಿವಾರ್ಯ’ ಎಂದು ಸಂಘಟನೆಯ ಪ್ರಮುಖರಾದ ರೋಷನ್ ಹರಿಕಂತ್ರ. ಪ್ರದೀಪ್ ಶೆಟ್ಟಿ, ಸುದೇಶ್ ನಾಯ್ಕ ಎಚ್ಚರಿಕೆ ನೀಡಿದ್ದಾರೆ.




