6
  • Latest

ಲಾರಿ ಪಲ್ಟಿ: ತರಕಾರಿ ಗಾಡಿಯಲ್ಲಿದ್ದ 23 ಜನ ಬದುಕಿರುವುದೇ ಪವಾಡ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಲಾರಿ ಪಲ್ಟಿ: ತರಕಾರಿ ಗಾಡಿಯಲ್ಲಿದ್ದ 23 ಜನ ಬದುಕಿರುವುದೇ ಪವಾಡ!

AchyutKumar by AchyutKumar
January 22, 2025
in ವಿಡಿಯೋ
advt advt advt
ADVERTISEMENT

ಯಲ್ಲಾಪುರದ ಅರಬೈಲ್ ಬಳಿ ಬುಧವಾರ ನಸುಕಿನಲ್ಲಿ ಲಾರಿ ಪಲ್ಟಿಯಾಗಿದ್ದರಿಂದ 10 ಜನ ಸಾವನಪ್ಪಿದ್ದಾರೆ. 19 ಜನ ಗಾಯಗೊಂಡಿದ್ದಾರೆ. ಮತ್ತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತರಕಾರಿ ಮೂಟೆಗಳ ಮೇಲೆ‌ ಮಲಗಿದ್ದ ಅನೇಕರು ನಿದ್ರೆಯ ಮಂಪರಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಮೈಮೇಲೆ ಮೂಟೆಗಳು ಬಿದ್ದಿದ್ದರಿಂದ ಉಸಿರಾಡಲು ಸಮಸ್ಯೆ ಅನುಭವಿಸುತ್ತಿದ್ದವರನ್ನು ಆ ಊರಿನ ಕೆಲವರು ರಕ್ಷಿಸಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರಿನ 33 ವ್ಯಾಪಾರಿಗಳು ಸೇರಿ ಮಂಗಳವಾರ ರೈತರಿಂದ ತರಕಾರಿ ಖರೀದಿಸಿದ್ದರು. ಕುಮಟಾ, ಹೊನ್ನಾವರ ಹಾಗೂ ಗೋಕರ್ಣದ ಸಂತೆಯಲ್ಲಿ ಅದನ್ನು ಮಾರಿ ಬದುಕು ನಡೆಸಲು ನಿರ್ಧರಿಸಿದ್ದರು. ತರಕಾರಿ ತುಂಬಿದ ಲಾರಿಯಲ್ಲಿ ವ್ಯಾಪಾರಿಗಳು ಕೂತು ಕುಮಟಾಗೆ ಹೋಗುತ್ತಿದ್ದರು. ಬುಧವಾರ ನಸುಕಿನ ವೇಳೆ ಯಲ್ಲಾಪುರದ ಅರಬೈಲ್ ಬಳಿ ಲಾರಿ ಪಲ್ಟಿಯಾಯಿತು. ಪರಿಣಾಮ 9 ಜನ ಸ್ಥಳದಲ್ಲಿಯೇ ಸಾವನಪ್ಪಿದರು. ಆಸ್ಪತ್ರೆಗೆ ತರುವಾಗ ಇನ್ನೊಬ್ಬರು ಕೊನೆ ಉಸಿರೆಳೆದರು.

Advertisement. Scroll to continue reading.
ADVERTISEMENT
ADVERTISEMENT

ಲಾರಿ ಅಡಿಗೆ ಬಿದ್ದು ಹೊರಳಾಡುತ್ತಿದ್ದ ಕೆಲವರನ್ನು ಗುಳ್ಳಾಪುರದ ಶೇಖರ ಡಕ್ಕೊಳ್ಳಿ, ಮಂಜು ಕಾಗೇ, ರಾಘು ಬಾಂದೇಕರ, ಪವನ ಗುಳ್ಳಾಪುರ ಹಾಗೂ ಬಾಲಕೃಷ್ಣ ನಾಯ್ಕ ಅರಬೈಲ್ ಮೇಲೆತ್ತಿ ಬದುಕಿಸಿದರು. ಪಿಐ ರಮೇಶ ಹಾನಾಪುರ ಪೊಲೀಸ್ ಸಿಬ್ಬಂದಿ ಹರೀಶ ನಾಯ್ಕ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ಗಾಯಾಳುಗಳನ್ನು ಐದು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸಿದರೆ ಐದು ಶವಗಳನ್ನು ಅಲ್ಲಿನ ವಿಜಯ ಸಿದ್ದಿ ಎಂಬಾತರು ತಮ್ಮ ಪಿಕ್ ಅಪ್ ವಾಹನದಲ್ಲಿ ಹಾಕಿಕೊಂಡು ಬಂದು ಆಸ್ಪತ್ರೆಗೆ ತಲುಪಿಸಿದರು.

Advertisement. Scroll to continue reading.

ಫಯಾಜ್‌ ಜಮಖಂಡಿ (45), ವಾಸಿಮ್‌ ಮುಡಿಗೇರಿ (25) ಇಜಜ್‌ ಮುಲ್ಲಾ (20) ಸಾದುಕ್‌ ಪರಾಸ್‌ (30), ಗುಲಾಮ್‌ ಜವಳಿ, ಇಮ್‌ತಿಯಾಜ್‌ ಮುಡಗೇರಿ (40) ಅಲ್ಪಾಜ್‌ ಮಂಡಕಿ (25) ಜಿಲಾನಿ ಜಕಾತಿ (20), ಅಸ್ಲಾಂ ಬೇಣ್ಣಿ (24), ಜಲಾಲ್‌ ತಾರಾ (30) ಸಾವನಪ್ಪಿದವರು. ಇನ್ನೂ 7 ಜನರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ.‌ ಗಂಭೀರ ಗಾಯಗೊಂಡ 12 ಜನರನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತ ಹೇಗಾಯ್ತು? ಲಾರಿಯ ಕ್ಯಾಬೀನ್’ನಲ್ಲಿ ಕೂತಿದ್ದ ರಿಯಾಜ್ ಅಹ್ಮದ್ ಹೇಳಿದ್ದೇ‌ನು? ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಒಂದು ಅಪಘಾತ: 9ಕ್ಕೂ ಅಧಿಕ ಸಾವು | ಸಂತೆಗೆ ಹೊರಟವರು ಶವವಾದರು!

Next Post

ಸಾವಿನ ಊರಾದ ಸವಣೂರು: ಸಾವನಪ್ಪಿದ ಕುಟುಂಬದವರಿಗೆ 3 ಲಕ್ಷ ರೂ ತುರ್ತು ಪರಿಹಾರ!

Next Post

ಸಾವಿನ ಊರಾದ ಸವಣೂರು: ಸಾವನಪ್ಪಿದ ಕುಟುಂಬದವರಿಗೆ 3 ಲಕ್ಷ ರೂ ತುರ್ತು ಪರಿಹಾರ!

ದಾತ್ರಿ ನಗರ | ನಿವೇಶನದಾರರಿಗೆ ನೀರು ಕುಡಿಸುವವರಾರು?

accident It is a crime to transport traders in a cargo truck!

ಅಪಘಾತ | ಸರಕು ಸಾಗಾಣಿಕಾ ಲಾರಿಯಲ್ಲಿ ವ್ಯಾಪಾರಿಗಳನ್ನು ಸಾಗಿಸಿದ್ದು ಅಪರಾಧ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.