6
  • Latest

ಲಾರಿ ಪಲ್ಟಿ: ತರಕಾರಿ ಗಾಡಿಯಲ್ಲಿದ್ದ 23 ಜನ ಬದುಕಿರುವುದೇ ಪವಾಡ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಲಾರಿ ಪಲ್ಟಿ: ತರಕಾರಿ ಗಾಡಿಯಲ್ಲಿದ್ದ 23 ಜನ ಬದುಕಿರುವುದೇ ಪವಾಡ!

AchyutKumar by AchyutKumar
in ವಿಡಿಯೋ

ಯಲ್ಲಾಪುರದ ಅರಬೈಲ್ ಬಳಿ ಬುಧವಾರ ನಸುಕಿನಲ್ಲಿ ಲಾರಿ ಪಲ್ಟಿಯಾಗಿದ್ದರಿಂದ 10 ಜನ ಸಾವನಪ್ಪಿದ್ದಾರೆ. 19 ಜನ ಗಾಯಗೊಂಡಿದ್ದಾರೆ. ಮತ್ತೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತರಕಾರಿ ಮೂಟೆಗಳ ಮೇಲೆ‌ ಮಲಗಿದ್ದ ಅನೇಕರು ನಿದ್ರೆಯ ಮಂಪರಿನಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ಮೈಮೇಲೆ ಮೂಟೆಗಳು ಬಿದ್ದಿದ್ದರಿಂದ ಉಸಿರಾಡಲು ಸಮಸ್ಯೆ ಅನುಭವಿಸುತ್ತಿದ್ದವರನ್ನು ಆ ಊರಿನ ಕೆಲವರು ರಕ್ಷಿಸಿದ್ದಾರೆ.

ADVERTISEMENT

ಹಾವೇರಿ ಜಿಲ್ಲೆಯ ಸವಣೂರಿನ 33 ವ್ಯಾಪಾರಿಗಳು ಸೇರಿ ಮಂಗಳವಾರ ರೈತರಿಂದ ತರಕಾರಿ ಖರೀದಿಸಿದ್ದರು. ಕುಮಟಾ, ಹೊನ್ನಾವರ ಹಾಗೂ ಗೋಕರ್ಣದ ಸಂತೆಯಲ್ಲಿ ಅದನ್ನು ಮಾರಿ ಬದುಕು ನಡೆಸಲು ನಿರ್ಧರಿಸಿದ್ದರು. ತರಕಾರಿ ತುಂಬಿದ ಲಾರಿಯಲ್ಲಿ ವ್ಯಾಪಾರಿಗಳು ಕೂತು ಕುಮಟಾಗೆ ಹೋಗುತ್ತಿದ್ದರು. ಬುಧವಾರ ನಸುಕಿನ ವೇಳೆ ಯಲ್ಲಾಪುರದ ಅರಬೈಲ್ ಬಳಿ ಲಾರಿ ಪಲ್ಟಿಯಾಯಿತು. ಪರಿಣಾಮ 9 ಜನ ಸ್ಥಳದಲ್ಲಿಯೇ ಸಾವನಪ್ಪಿದರು. ಆಸ್ಪತ್ರೆಗೆ ತರುವಾಗ ಇನ್ನೊಬ್ಬರು ಕೊನೆ ಉಸಿರೆಳೆದರು.

ಲಾರಿ ಅಡಿಗೆ ಬಿದ್ದು ಹೊರಳಾಡುತ್ತಿದ್ದ ಕೆಲವರನ್ನು ಗುಳ್ಳಾಪುರದ ಶೇಖರ ಡಕ್ಕೊಳ್ಳಿ, ಮಂಜು ಕಾಗೇ, ರಾಘು ಬಾಂದೇಕರ, ಪವನ ಗುಳ್ಳಾಪುರ ಹಾಗೂ ಬಾಲಕೃಷ್ಣ ನಾಯ್ಕ ಅರಬೈಲ್ ಮೇಲೆತ್ತಿ ಬದುಕಿಸಿದರು. ಪಿಐ ರಮೇಶ ಹಾನಾಪುರ ಪೊಲೀಸ್ ಸಿಬ್ಬಂದಿ ಹರೀಶ ನಾಯ್ಕ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು. ಗಾಯಾಳುಗಳನ್ನು ಐದು ಆಂಬುಲೆನ್ಸ ಮೂಲಕ ಆಸ್ಪತ್ರೆಗೆ ಸಾಗಿಸಿದರೆ ಐದು ಶವಗಳನ್ನು ಅಲ್ಲಿನ ವಿಜಯ ಸಿದ್ದಿ ಎಂಬಾತರು ತಮ್ಮ ಪಿಕ್ ಅಪ್ ವಾಹನದಲ್ಲಿ ಹಾಕಿಕೊಂಡು ಬಂದು ಆಸ್ಪತ್ರೆಗೆ ತಲುಪಿಸಿದರು.

Advertisement. Scroll to continue reading.

ಫಯಾಜ್‌ ಜಮಖಂಡಿ (45), ವಾಸಿಮ್‌ ಮುಡಿಗೇರಿ (25) ಇಜಜ್‌ ಮುಲ್ಲಾ (20) ಸಾದುಕ್‌ ಪರಾಸ್‌ (30), ಗುಲಾಮ್‌ ಜವಳಿ, ಇಮ್‌ತಿಯಾಜ್‌ ಮುಡಗೇರಿ (40) ಅಲ್ಪಾಜ್‌ ಮಂಡಕಿ (25) ಜಿಲಾನಿ ಜಕಾತಿ (20), ಅಸ್ಲಾಂ ಬೇಣ್ಣಿ (24), ಜಲಾಲ್‌ ತಾರಾ (30) ಸಾವನಪ್ಪಿದವರು. ಇನ್ನೂ 7 ಜನರಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು, ಅವರು ಚೇತರಿಸಿಕೊಂಡಿದ್ದಾರೆ.‌ ಗಂಭೀರ ಗಾಯಗೊಂಡ 12 ಜನರನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತ ಹೇಗಾಯ್ತು? ಲಾರಿಯ ಕ್ಯಾಬೀನ್’ನಲ್ಲಿ ಕೂತಿದ್ದ ರಿಯಾಜ್ ಅಹ್ಮದ್ ಹೇಳಿದ್ದೇ‌ನು? ಇಲ್ಲಿ ನೋಡಿ..

Advertisement. Scroll to continue reading.
Previous Post

ಒಂದು ಅಪಘಾತ: 9ಕ್ಕೂ ಅಧಿಕ ಸಾವು | ಸಂತೆಗೆ ಹೊರಟವರು ಶವವಾದರು!

Next Post

ಸಾವಿನ ಊರಾದ ಸವಣೂರು: ಸಾವನಪ್ಪಿದ ಕುಟುಂಬದವರಿಗೆ 3 ಲಕ್ಷ ರೂ ತುರ್ತು ಪರಿಹಾರ!

Next Post

ಸಾವಿನ ಊರಾದ ಸವಣೂರು: ಸಾವನಪ್ಪಿದ ಕುಟುಂಬದವರಿಗೆ 3 ಲಕ್ಷ ರೂ ತುರ್ತು ಪರಿಹಾರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ