6
  • Latest

ಆ ದಿನ ಕೂಲಿ ಕಾರ್ಮಿಕ.. ಇದೀಗ ನಿವೃತ್ತ ಸೈನಿಕ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆ ದಿನ ಕೂಲಿ ಕಾರ್ಮಿಕ.. ಇದೀಗ ನಿವೃತ್ತ ಸೈನಿಕ!

AchyutKumar by AchyutKumar
in ದೇಶ - ವಿದೇಶ

ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ತಮ್ಮ 25 ವರ್ಷದ ಸೇವೆ ಪೂರೈಸಿ ಸೇನೆಯಿಂದ ನಿವೃತ್ತರಾಗಲಿದ್ದಾರೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿಯ ಬೆಂಗಲೆಯವರಾದ ಕಾಶಿನಾಥ ನಾಯ್ಕ ಅವರು ಬಿಎ ಓದಿದ್ದಾರೆ. ಮೊದಲು ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅದಾದ ನಂತರ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ನಿರಂತರ ಪ್ರಯತ್ನದ ಫಲವಾಗಿ ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ಅವರು ಸೇನೆ ಸೇರಿದ್ದರು. ಆಗ ಅಲ್ಲಿನ ಕ್ರೀಡಾ ವಿಭಾಗ ಅವರನ್ನು ಆಕರ್ಷಿಸಿತು. ಆ ಅವಧಿಯಲ್ಲಿ ಅವರಿಗೆ ಅಲ್ಲಿ ಯಾವುದೇ ವಿಶೇಷ ತರಬೇತುದಾರರು ಇರಲಿಲ್ಲ. ಆಗ ಅಲ್ಲಿನ ಸೈನಾಧಿಕಾರಿಗಳ ಮಾರ್ಗದರ್ಶನದಲ್ಲಿ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದರು.

ಕ್ರೀಡಾ ವಿಭಾಗದಲ್ಲಿಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು ನಿರಜ್ ಚೋಪ್ರಾ ಅವರಿಗೆ ಕಾಶಿನಾಥ ನಾಯ್ಕ ಅವರು ಗುರುವಾಗಿದ್ದರು. ಜಾವಲಿನ್ ಎಸೆತದಲ್ಲಿ ಚಾಣಾಕ್ಷತನ ಪಡೆದಿರುವ ಕಾಶಿನಾಥ ನಾಯ್ಕ ಅವರು ಸೈನಿಕ ವೃತ್ತಿಯಲ್ಲಿ ಸಹ ಅಷ್ಟೇ ಶಿಸ್ತಿನಿಂದ ಇರುತ್ತಿದ್ದರು. 2010ರಲ್ಲಿ ಜರುಗಿದ 19ನೇ ಕಾಮನ್ ವೆಲ್ತ್ ಪಂದ್ಯಾಟದಲ್ಲಿ ಕಂಚು ಪದಕವನ್ನು ಅವರು ಗೆದ್ದಿದ್ದಾರೆ. ಆರ್ಮಿ ಕ್ರೀಡಾ ತರಬೇತಿ ಶಿಬಿರದಲ್ಲಿ ಅಥ್ಲೇಟಿಕ್ ತರಬೇತುದಾರರಾಗಿ ಈಗ ಗೋಡಪಡಿ, ಪೂಣೆಯಲ್ಲಿ ಸಹ ಅವರು ಕ್ರೀಡಾ ತರಬೇತದಾರನಾಗಿದ್ದಾರೆ. ಅವರ ಪ್ರತಿಭೆಗೆ 2012ರಲ್ಲಿ ಎಕಲವ್ಯ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯೋತ್ಸವ, 2023ರಲ್ಲಿ ಗುರು ವಿದ್ಯಾರಣ್ಯ ಪ್ರಶಸ್ತಿಗಳು ಸಿಕ್ಕಿವೆ. ಈವರೆಗೆ ಕಾಶೀನಾಥ ನಾಯ್ಕ ಅವರು 19 ಅಂತರಾಷ್ಟಿçÃಯ ಕ್ರೀಡಾ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. 2010ರಲ್ಲಿ ದಕ್ಷಿಣಾ ಏಷ್ಯಾ ಕ್ರೀಡಾ ಕೂಟದಲ್ಲಿ ಬಂಗಾರ ಪದಕ, 2008ರಲ್ಲಿ ಏಷಿಯನ್ ಗ್ರಾಂಡ್ ಪೀಕ್ಸ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

Advertisement. Scroll to continue reading.

ಸೇನೆಯಲ್ಲಿದ್ದುಕೊoಡೇ ಅವರು 2013ರಿಂದ ಆರ್ಮಿ ಕ್ರೀಡಾ ತರಬೇತಿ ಸಂಸ್ಥೆಯ ತರಬೇತದಾರರಾಗಿದ್ದು, ಅಂತರರಾಷ್ಟ್ರೀಯ ಕ್ರೀಡಾ ಪಟುಗಳಾದ ನಿರಜ ಚೋಪ್ರ, ಅಣ್ಣು ರಾಣಿ, ರಾಜೇಶ ಕುಮಾರ ಬಿಂದ್, ದೇವೆಂದರ ಸಿಂಗ, ಸಮರ್ಜಿತ ಸಿಂಗ್, ಅಮಿತ್ ಕುಮಾರ ರಾಹಿತ್ ಯಾದವ, ಮನು ಡಿ ಪಿ, ಅನಿಲ್ ಕುಮಾರ, ಉತ್ತಮ ಪಾಟೀಲ್ ಮೊದಲಾದವರಿಗೆ ವಿಶೇಷ ತರಬೇತಿ ನೀಡಿದ್ದಾರೆ. ಜನವರಿ 31ರಂದು ಅವರು ಸೇನೆಯಿಂದ ನಿವೃತ್ತರಾಗಲಿದ್ದಾರೆ.

Advertisement. Scroll to continue reading.

`ಅತ್ಯಂತ ಹಿಂದುಳಿದ ಪ್ರದೇಶದಿಂದ ಬಂದು ಉನ್ನತ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು, ಸೈನಿಕ ಮತ್ತು ಕ್ರೀಡಾ ತರಬೇತಿದಾರ ಕಾಶಿನಾಥ ನಾಯ್ಕ ಅವರ ಸಾಧನೆ ಅಪಾರ. ಅವರಲ್ಲಿನ ಕೌಶಲ್ಯವನ್ನು ಸರ್ಕಾರ ಮುಂದೆಯೂ ಬಳಕೆಗೆಪಡೆಯಬೇಕು’ ಎಂದು ಸ್ಪಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

Previous Post

ಶ್ರೀಮಾತಾ | ಡ್ರೈವಿಂಗ್ ಸ್ಕೂಲ್ ಮಾಲಕರ ವಾಹನಕ್ಕೆ ಬೆಂಕಿ!

Next Post

ಸಿದ್ದರಾಮಣ್ಣ ಘೋಷಣೆ: ಬಿಜೆಪಿಗೆ ಮತ್ತೆ ಹೆಗಡೆರ ಸಾರಥ್ಯ!

Next Post

ಸಿದ್ದರಾಮಣ್ಣ ಘೋಷಣೆ: ಬಿಜೆಪಿಗೆ ಮತ್ತೆ ಹೆಗಡೆರ ಸಾರಥ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ