ಸಾರ್ವಜನಿಕರನ್ನು ಭಯಪಡಿಸುವ ಮಾಟ-ಮಂತ್ರಗಳ ಪ್ರಭಾವ ಶಿರಸಿ ಹಾಗೂ ಸುತ್ತಮುತ್ತಲು ಹೆಚ್ಚಾಗಿದೆ. ಕುಳವೆ ರಸ್ತೆಯಲ್ಲಿ ಸಹ ಗುರುವಾರ ಮಾಟ-ಮಂತ್ರದ ಕುರುಹುಗಳು ಕಾಣಿಸಿದವು.
ಕುಳವೆ ರಸ್ತೆಯಲ್ಲಿರುವ ಸ್ಮಶಾನ ಎದುರಿನ ಕಚ್ಚಾ ರಸ್ತೆಯಲ್ಲಿ ವಾಮಾಚಾರ ನಡೆಸಿರುವ ಬಗ್ಗೆ ಜನ ಮಾತನಾಡಿಕೊಂಡರು. ಇದಕ್ಕೆ ಸಾಕ್ಷಿಯಾಗಿ ರಸ್ತೆಯ ಮೇಲೆ ದೊಡ್ಡದಾಗಿ ಕುಂಕುಮ ಹರಡಿಕೊಂಡಿತ್ತು. ಅಲ್ಲಲ್ಲಿ ಒಂದಷ್ಟು ಲಿಂಬುಗಳು ಸಹ ಸರಿದಾಡುತ್ತಿದ್ದವು. ಕೆಂಪು ಬಣ್ಣದ ಬಟ್ಟೆಯ ಚೂರುಗಳು ಜನರನ್ನು ಭಯಗೊಳಿಸಿದವು.
ಈ ಮಾರ್ಗವಾಗಿ ಸಂಚರಿಸಬೇಕಿದ್ದ ಜನ ಕುಂಕುಮ-ಲಿoಬು ನೋಡಿ ಮರಳಿ ಮನೆಗೆ ಹೋದರು. ಕೆಲವರು ಧೈರ್ಯ ಮಾಡಿ ಪೇಟೆ ಕಡೆ ಬಂದರಾದರೂ ಇಡೀ ದಿನ ಚಂಚಲ ಮನಸ್ಥಿತಿಯನ್ನು ಹೊಂದಿದ್ದರು. ಅಮವಾಸೆ ರಾತ್ರಿ ವಾಮಾಚಾರ ನಡೆಸಿರುವ ಬಗ್ಗೆ ಕೆಲವರು ಮಾತನಾಡಿದರು.
ಸ್ಮಶಾನ ಎದುರಿನ ಕಚ್ಚಾ ರಸ್ತೆಯಲ್ಲಿ ವಾಮಾಚಾರ ಮಾಡಿದ್ದು ಯಾರು? ಯಾವ ಉದ್ದೇಶಕ್ಕೆ ಹೀಗೆ ಮಾಡಲಾಗಿದೆ? ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಸಂಜೆಯ ವೇಳೆಗೆ ಊರಿನ ವಾತಾವರಣ ಸಹಜ ಸ್ಥಿತಿಗೆ ಮರಳಿದ್ದು, ಅದೇ ರಸ್ತೆ ಮಾರ್ಗವಾಗಿ ಜನ ಎಂದಿನoತೆ ಓಡಾಟ ನಡೆಸಿದರು.






