6
  • Latest

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

AchyutKumar by AchyutKumar
February 1, 2025
in ದೇಶ - ವಿದೇಶ
advt advt advt
ADVERTISEMENT

ಕಳೆದ ವಾರ ಅರಬೈಲ್ ಘಟ್ಟದಲ್ಲಿ ನಡೆದ ದುರಂತದಿoದ 10 ಜನ ಸಾವನಪ್ಪಿದ ಬೆನ್ನಲ್ಲೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಚಟುವಟಿಕೆಯ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಹೆದ್ದಾರಿ ಅಗಲೀಕರಣದ ಜೊತೆ `ರೈಲು ಮಾರ್ಗದ ಪ್ರಯಾಣ ಸುರಕ್ಷಿತ’ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ.

ಈ ಚರ್ಚೆಗೂ ಮೊದಲೇ ಭಾರತೀಯ ವನ್ಯಜೀವಿ ಸಂಸ್ಥೆಯ 15ಕ್ಕೂ ಅಧಿಕ ತಜ್ಞರು ಯಲ್ಲಾಪುರದಿಂದ ಬಾಳೆಗುಳಿವರೆಗಿನ ಕಾಡು ಸುತ್ತಾಟದಲ್ಲಿ ತೊಡಗಿದ್ದಾರೆ. ಇಲ್ಲಿನ ಮಣ್ಣಿನ ಗುಣ, ವನ್ಯಜೀವಿಗಳ ಚಲನವಲನ, ಅಪರೂಪದ ಗಿಡ-ಮರಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಕಳೆದ 25 ವರ್ಷಗಳಿಂದಲೂ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ನೆನೆಗುದಿಗೆ ಬಿದ್ದಿದೆ. ರೈಲ್ವೇ ಯೋಜನೆ ಬೇಕು-ಬೇಡ ಎನ್ನುವುದರ ಬಗ್ಗೆ ರಾಷ್ಟಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಒಮ್ಮೆ `ರೈಲ್ವೆ ಬೇಕು’ ಎನ್ನುವವರು ಮುನ್ನಡೆ ಸಾಧಿಸಿದರೆ ಇನ್ನೊಮ್ಮೆ `ರೈಲ್ವೆ ಯೋಜನೆ ಬೇಡ’ ಎನ್ನುವವರು ಮುನ್ನಡೆ ಸಾಧಿಸುತ್ತಿದ್ದಾರೆ.

ADVERTISEMENT
ADVERTISEMENT

ಈ ನಡುವೆ ಕಳೆದ ಒಂದು ತಿಂಗಳಿನಿoದ ಯಲ್ಲಾಪುರ – ಅಂಕೋಲಾ ತಾಲೂಕಿನಲ್ಲಿ ರೈಲ್ವೆ ಹಳಿ ಹಾದುಹೋಗಬಹುದಾದ ಅರಣ್ಯ ಪ್ರದೇಶದಲ್ಲಿ ಡೆಹರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆಯವರು ಬೀಡು ಬಿಟ್ಟಿದ್ದಾರೆ. 15ಕ್ಕೂ ಅಧಿಕ ಜನ ಇಲ್ಲಿ ಸಂಚಾರ ನಡೆಸಿದ್ದಾರೆ. ಸಸ್ಯ ಸಂಕುಲಗಳ ಅಧ್ಯಯನ ನಡೆಸುತ್ತಿರುವ ಅವರು ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಬರುವುದರಿಂದ ಜಿಲ್ಲೆಗೆ ಬಂದಿರುವ ತಜ್ಞರು ಇಲ್ಲಿನ ಅಪರೂಪದ ಪ್ರಬೇಧಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪ್ರತಿ 1ಕಿಮೀ ಅಂತರದಲ್ಲಿ ಕ್ಯಾಮರಾ ಅಳವಡಿಸಿ ಅಲ್ಲಿ ಓಡಾಡುವ ಪ್ರಾಣಿಗಳ ಸಾಕ್ಷಿ ಸಂಗ್ರಹಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.

`ಹುಬ್ಬಳ್ಳಿ-ಅoಕೋಲಾ ರೈಲ್ವೆ ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯ ಹಾನಿಯಾಗಲಿದೆ’ ಎಂದು ಪರಿಸರ ಸಂಘಟನೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. `ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಗೆ ಅಭ್ಯಂತರ ಇಲ್ಲ’ ಎಂದು 2016ರಲ್ಲಿ ಹಸಿರು ಪೀಠ ಹೇಳಿತ್ತು. ಅದಾಗಿಯೂ ಪುನಃ ಹೈಕೋರ್ಟ್ನಲ್ಲಿ ದಾವೆ ಸಲ್ಲಿಕೆಯಾಗಿದ್ದು, ವನ್ಯಜೀವಿ ಮಂಡಳಿಯ ಸಹಾಯದೊಂದಿಗೆ ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಹೈ ಕೋರ್ಟ ರೈಲ್ವೆ ಇಲಾಖೆಗೆ ಸೂಚಿಸಿತ್ತು.

ಹೀಗಾಗಿ ನೈರುತ್ಯ ರೈಲ್ವೆಯ ಎಂಜಿನಿಯರಿAಗ್ ವಿಭಾಗ ಸಹ ಯಲ್ಲಾಪುರ-ಅಂಕೋಲಾ ಭಾಗದಲ್ಲಿ ಸರ್ವೇ ನಡೆಸಿದೆ. ಹಳಿ ಬರುವ ಕ್ಷೇತ್ರಗಳನ್ನು ಪರಿಶೀಲಿಸಿದೆ.

ShareSendTweetShare
ADVERTISEMENT
Previous Post

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

Next Post

ಹೆಬ್ಬಲಸು ಸೇತುವೆ ಮೇಲೆ ಹಗ್ಗ ಜಗ್ಗಾಟ: ದಾಖಲೆ ಲಭ್ಯವಿಲ್ಲ.. ಕೆಲಸ ನಿಲ್ಲುತ್ತಿಲ್ಲ!

Next Post

ಹೆಬ್ಬಲಸು ಸೇತುವೆ ಮೇಲೆ ಹಗ್ಗ ಜಗ್ಗಾಟ: ದಾಖಲೆ ಲಭ್ಯವಿಲ್ಲ.. ಕೆಲಸ ನಿಲ್ಲುತ್ತಿಲ್ಲ!

ದಿನವಿಡೀ ಕಾದರೂ ಬಾಗಿಲು ತೆರೆಯದ ಸರ್ಕಾರಿ ಕಚೇರಿ!

DC interested in empowering Anganwadis: Nutritional treatment for malnourished children!

ಗಣಕಯಂತ್ರ ಪರೀಕ್ಷೆ: ಶಿರಸಿ - ಕುಮಟಾದಲ್ಲಿ ನಿಷೇಧಾಜ್ಞೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.