6
  • Latest

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರೆಸಾರ್ಟಿನಲ್ಲಿ ಅಧಿಕಾರಿಗಳ ಮೋಜು-ಮಸ್ತಿ!

AchyutKumar by AchyutKumar
February 1, 2025
in ಸ್ಥಳೀಯ
advt advt advt
ADVERTISEMENT

ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನಡೆಯಬೇಕು ಎಂಬುದು ಸರ್ಕಾರದ ಉದ್ದೇಶ. ಆದರೆ, ಯಲ್ಲಾಪುರದ ತಾಲೂಕು ಪಂಚಾಯತ ಅಧಿಕಾರಿ-ಸಿಬ್ಬಂದಿ ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ರೆಸಾರ್ಟಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾರೆ. ತಮ್ಮ ಮೇಲಧಿಕಾರಿಗಳನ್ನು ರೆಸಾರ್ಟಿಗೆ ಕರೆಯಿಸಿ ಅವರ ಸೇವೆ ಮಾಡಿ, ಪ್ರಶಂಸೆಯ ಪ್ರಶಸ್ತಿಯನ್ನೂ ಪಡೆದಿದ್ದಾರೆ!

Advertisement. Scroll to continue reading.

ಯಲ್ಲಾಪುರದಲ್ಲಿ ಸರ್ಕಾರಿ ಕಾರ್ಯಕ್ರಮ ಆಯೋಜನೆಗೆ ಉತ್ತಮ ಕಟ್ಟಡಗಳಿವೆ. ತಾಲೂಕು ಪಂಚಾಯತ ಆವರಣದಲ್ಲಿನ ಸಭಾ ಭವನ ಸಹ ಅತ್ಯಂತ ಅಚ್ಚುಕಟ್ಟಾಗಿದೆ. ಹೀಗಾಗಿ ಶಾಸಕ-ಸಚಿವರು ಬಂದರೂ ಇಲ್ಲಿಯೇ ಅಧಿಕಾರಿಗಳ ಸಭೆ ನಡೆಸುತ್ತಾರೆ. ಆದರೆ, ಶಾಸಕ-ಸಚಿವರಿಗಿಂತಲೂ ಐಷಾರಾಮಿ ಬದುಕು ಬಯಸಿದ ಅಧಿಕಾರಿಗಳು ಖಾಸಗಿ ರೆಸಾರ್ಟಿಗೆ ತೆರಳಿ ಕಾರ್ಯಕ್ರಮ ನಡೆಸಿದ್ದಾರೆ. ರೆಸಾರ್ಟಿನಲ್ಲಿ ಮೋಜು ಮಸ್ತಿ ನಡೆಸಲು ಉದ್ದೇಶಿಸಿದ ಅಧಿಕಾರಿಗಳಿಗೆ ಸರ್ಕಾರದ ಅಧೀನದಲ್ಲಿರುವ `ಡಮಾಮಿ ಹೋಂ ಸ್ಟೇ’ ಸಹ ನೆನಪಾಗಿಲ್ಲ!

Advertisement. Scroll to continue reading.
ADVERTISEMENT
ADVERTISEMENT

ಮೊನ್ನೆ ಯಲ್ಲಾಪುರದ ರೆಸಾರ್ಟವೊಂದರಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ತರಬೇತಿ ನೆಪದಲ್ಲಿ ಅಧಿಕಾರಿಗಳ ಆಟ-ಊಟ ನಡೆದಿದೆ. ಅದಾದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧಿಕಾರಿ-ಸಿಬ್ಬಂದಿ ಪರಸ್ಪರ ಪ್ರಶಸ್ತಿ-ಸನ್ಮಾನ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಕೊನೆಗೆ `ಅವರು ಇವರಿಗೆ ಪ್ರಶಸ್ತಿ ನೀಡಿದರು. ಇವರು ಅವರಿಗೆ ಪ್ರಶಸ್ತಿ ನೀಡಿದರು’ ಎಂಬ ಭಾಷಣ ಮಾಡಿ ಕಾರ್ಯಕ್ರಮ ಮುಗಿಸಿದ್ದಾರೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ಸರ್ಕಾರದ ಹೆಸರಿನ ಜೋತೆ ಲಾಂಚನವೂ ಇದ್ದು, ಕಾರ್ಯಕ್ರಮದ ಎಲ್ಲಾ ವೆಚ್ಚವನ್ನು ಸರ್ಕಾರಿ ನೆರವಿನಿಂದ ಯೋಜನೆ ಅನುಷ್ಠಾನ ಮಾಡಿದ ಸ್ವಯಂ ಸೇವಾ ಸಂಸ್ಥೆಯ ತಲೆಗೆ ಕಟ್ಟಿದ್ದಾರೆ.

ShareSendTweetShare
ADVERTISEMENT
Previous Post

ನರಭಕ್ಷಕ ಚಿರತೆಯ ಅಟ್ಟಹಾಸ: ಆ ವ್ಯಾಘ್ರ ಅತ್ಯಂತ ಭಯಾನಕ!

Next Post

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

Next Post

ಹುಬ್ಬಳ್ಳಿ-ಅಂಕೋಲಾ: ಎಲ್ಲಿಯವರೆಗೆ ಬಂತು ಚುಕುಪುಕು ರೈಲು?

ಹೆಬ್ಬಲಸು ಸೇತುವೆ ಮೇಲೆ ಹಗ್ಗ ಜಗ್ಗಾಟ: ದಾಖಲೆ ಲಭ್ಯವಿಲ್ಲ.. ಕೆಲಸ ನಿಲ್ಲುತ್ತಿಲ್ಲ!

ದಿನವಿಡೀ ಕಾದರೂ ಬಾಗಿಲು ತೆರೆಯದ ಸರ್ಕಾರಿ ಕಚೇರಿ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.