ರಸ್ತೆಯಲ್ಲಿ ಅಡ್ಡಾಡುತ್ತಿದ್ದ ನಾಯಿ ಬೈಕಿಗೆ ಅಡ್ಡ ಬಂದ ಪರಿಣಾಮ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಮಹೇಶ ನಾಯ್ಕ ಕರೆಂಟ್ ಕಂಬಕ್ಕೆ ಬೈಕ್ ಗುದ್ದಿ ಸಾವನಪ್ಪಿದ್ದಾರೆ.
ಕುಮಟಾ ತಾಲೂಕಿನ ಕೂಜಳ್ಳಿಯ ಮಹೇಶ ನಾಯ್ಕ (50) ಅವರು ಹೊನ್ನಾವರದ ಚಂದಾವರ ಬಳಿಯ ಮುಂಡಿಗೆಜಡ್ಡಿ ಬಳಿ ವಾಸವಾಗಿದ್ದರು. ಅಲ್ಲಿ ಅವರು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಫೆ 3ರಂದು ಚಂದಾವರದಿAದ ಹೊನ್ನಾವರ ಕಡೆ ಅವರು ಬೈಕ್ ಓಡಿಸುತ್ತಿದ್ದರು.
ಹೆಬ್ಬಾನಕೇರಿ ಉಪ್ಪಳೆ ಕ್ರಾಸಿನ ಬಳಿ ಅವರ ಬೈಕಿಗೆ ನಾಯಿಯೊಂದು ಅಡ್ಡ ಬಂದಿತು. ಬೈಕು ವೇಗವಾಗಿ ಚಲಿಸುತ್ತಿದ್ದು, ನಾಯಿಗೆ ಬೈಕ್ ಗುದ್ದುವುದನ್ನು ಅವರು ತಪ್ಪಿಸಿದರು. ಆದರೆ, ಆ ಬೈಕು ಎದುರಿಗಿದ್ದ ಕರೆಂಟ್ ಕಂಬಕ್ಕೆ ಜೋರಾಗಿ ಡಿಕ್ಕಿಯಾಯಿತು.
ಪರಿಣಾಮ ಮಹೇಶ ನಾಯ್ಕ ಅವರು ಗಂಭೀರ ಪ್ರಮಾಣದಲ್ಲಿ ಗಾಯ ಮಾಡಿಕೊಂಡರು. ಅವರನ್ನು ಸ್ಥಳೀಯರು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದರು. ಕುಟುಂಬದವರು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಕಡೆ ಕರೆದೊಯ್ದರು. ಆದರೆ, ಕಾಸರಕೋಡು ಬಳಿ ಮಹೇಶ ನಾಯ್ಕ ಉಸಿರಾಟ ನಿಲ್ಲಿಸಿದರು.
ಕೂಜಳ್ಳಿಯ ವಿನಾಯಕ ನಾಯ್ಕ ಈ ಬಗ್ಗೆ ಹೊನ್ನಾವರ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರು.




