2022ರಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 122 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆ 1.98 ಕೋಟಿ ರೂ ಪರಿಹಾರ ವಿತರಿಸಿದೆ. 88 ಪ್ರಕರಣಗಳ ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
`ಪ ಜಾತಿ ಹಾಗೂ ಪ ಪಂಗಡದವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಸಮಗ್ರ ತನಿಖೆ ನಡೆಸಿ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿö್ಮಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. `ದೌರ್ಜನ್ಯ ಪ್ರಕರಣಗಳ ಕುರಿತಂತೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿಸಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳ ಸೂಕ್ತ ತನಿಖೆ ನಡೆಯಬೇಕು’ ಎಂದವರು ಸೂಚಿಸಿದ್ದಾರೆ.
`ಎಸ್ಸಿ ಹಾಗೂ ಎಸ್ಟಿ ಸ್ಮಶಾನ ಭೂಮಿ ಒತ್ತುವರಿಯಾಗದಂತೆ ಎಚ್ಚರವಹಿಸಬೇಕು. ಅವುಗಳಿಗೆ ಕಪೌಂಡ್ ನಿರ್ಮಿಸಿ, ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಅವರು ಸೂಚಿಸಿದರು. `ಎಲ್ಲಾ ಇಲಾಖೆಗಳಲ್ಲಿ ಪ ಜಾತಿ ಹಾಗೂ ಪಂಗಡದವರಿಗೆ ಮೀಸಲಿರುವ ಹಣವನ್ನು ಸೂಕ್ತ ರೀತಿ ಬಳಸಬೇಕು. ಸಿದ್ದಿ ಸಮುದಾಯದವರಿಗೆ ವಿತರಿಸುವ ಪೌಷ್ಠಿಕ ಆಹಾರ ಆಯಾ ತಿಂಗಳಿನಲ್ಲಿಯೇ ವಿತರಣೆಯಾಗಬೇಕು’ ಎಂದರು.
ಪೌರ ಕಾರ್ಮಿಕರಿಗೆ ಅನ್ಯ ಕೆಲಸ
ಪೌರ ಕಾರ್ಮಿಕ ಹುದ್ದೆಗೆ ನೇಮಕವಾದವರಿಗೆ ಬೇರೆ ಕೆಲಸ ನೀಡುವ ಬಗ್ಗೆ ಜಿಲ್ಲಾಡಳಿತಕ್ಕೆ ದೂರುಗಳು ಸಲ್ಲಿಕೆಯಾಗಿದೆ. ಈ ಹಿನ್ನಲೆ `ಪೌರ ಕಾರ್ಮಿಕರನ್ನು ಅವರ ಕೆಲಸಗಳಿಗೆ ಮಾತ್ರ ನಿಯೋಜಿಸಬೇಕು’ ಎಂದು ಡೀಸಿ ಸೂಚಿಸಿದ್ದಾರೆ. ಈ ಬಗ್ಗೆ ಎಲ್ಲಾ ಸ್ಥಳೀಯ ಸಂಸ್ಥೆಯವರು ಪರಿಶೀಲಿಸಿ ಲಿಖಿತ ವರದಿ ಸಲ್ಲಿಸುವಂತೆ ಹೇಳಿದ್ದಾರೆ.
ಇದರೊಂದಿಗೆ `ಕಿಮ್ಸ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿತರಿಸಿದ ಲಾಪ್ಟಾಪ್ ಗುಣಮಟ್ಟ ಸರಿಯಿಲ್ಲದ ಬಗ್ಗೆ ಆಕ್ಷೇಪವಿದೆ. ಇದನ್ನು ಗಮನಿಸಿ ಸರಬರಾಜು ಮಾಡಿದ ಸಂಸ್ಥೆಯಿAದ ಹೊಸ ಲಾಪ್ಟಾಪ್ ವಿತರಿಸಬೇಕು. ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭದಲ್ಲಿಯೇ ಕಲಿಕಾ ಉಪಕರಣ ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅಧೀನ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಸರ್ಕಾರಿ ಅಭಿಯೋಜಕಿ ಸುನಿತಾ ನಾಗೇಕರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಕ್ರಿಮ್ಸ್ನ ಡೀನ್ ಡಾ ಪೂರ್ಣಿಮಾ, ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ದೀಪಕ್ ಕುಡಾಳಕರ್, ಯಮುನಾ ಗಾಂವಕರ್ ಇದ್ದರು.





