6
  • Latest

ಅಣ್ಣನಿಗೆ ಕಪಾಳಮೋಕ್ಷ: ನರ್ಸ ಮನೆ ಮೇಲೆ ಕಲ್ಲು ತೂರಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಣ್ಣನಿಗೆ ಕಪಾಳಮೋಕ್ಷ: ನರ್ಸ ಮನೆ ಮೇಲೆ ಕಲ್ಲು ತೂರಾಟ!

AchyutKumar by AchyutKumar
in ಸ್ಥಳೀಯ

ನರ್ಸ ಕಾವ್ಯಾ ಅಂಬಿಗ ಹಾಗೂ ಅವರ ತಾಯಿ ಶಶಿಕಲಾ ಅಂಬಿಗ ಅವರನ್ನು ಮನೆಯಲ್ಲಿ ಕೂಡಿ ಹಾಕಿದ ದುಷ್ಕರ್ಮಿಗಳು ಕಾವ್ಯ ಅವರ ಅಣ್ಣ ಮಣಿಕಂಠ ಅಂಬಿಗ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಬೆದರಿದ ಕಾವ್ಯ ಅಂಬಿಗ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ಕುಮಟಾದ ಧಾರೇಶ್ವರದಲ್ಲಿ ಕಾವ್ಯ ಅಂಬಿಗ ಅವರು ತಮ್ಮ ಕುಟುಂಬದವರ ಜೊತೆ ವಾಸವಾಗಿದ್ದಾರೆ. ನರ್ಸ ಆಗಿ ಸೇವೆಯಲ್ಲಿರುವ ಅವರ ಮನೆಯಲ್ಲಿ ತಂದೆ ಮಂಜುನಾಥ ಅಂಬಿಗ, ತಾಯಿ ಶಶಿಕಲಾ ಅಂಬಿಗ ಹಾಗೂ ಅಣ್ಣ ಮಣಿಕಂಠ ಅಂಬಿಗ ಜೊತೆಗಿರುತ್ತಾರೆ. ಹೀಗಿರುವಾಗ ಮಣಿಕಂಠ ಅಂಬಿಗ ಅವರು ಫೆ 3ರ ರಾತ್ರಿ ತಮ್ಮ ಸ್ನೇಹಿತ ಕುಮಾರ ಅಂಬಿಗ ಜೊತೆ ಮನೆ ಮುಂದೆ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಅದೇ ಊರಿನ ನಿಶಾಂತ ಅಂಬಿಗ ಹಾಗೂ ರಾಜು ಅಂಬಿಗ ಎಂಬಾತರು ಮಣಿಕಂಠ ಅಂಬಿಗ ಅವರ ಕೆನ್ನೆಗೆ ಬಾರಿಸಿದರು. ಕೆಟ್ಟ ಶಬ್ದಗಳಿಂದ ನಿಂದಿಸಿದರು.

ಇದನ್ನು ನೋಡಿದ ಕಾವ್ಯ ಅಂಬಿಗ ಹಾಗೂ ಶಶಿಕಲಾ ಅಂಬಿಗ ಅವರು ಹೊಡೆದಾಟ ತಪ್ಪಿಸಲು ಬಂದರು. ಆಗ, ಮಹಿಳೆಯರಿಬ್ಬರ ಮೈ ಮುಟ್ಟಿದ ದುಷ್ಕರ್ಮಿಗಳು ಮಾನ ಕಳೆಯುವ ಪ್ರಯತ್ನ ನಡೆಸಿದರು. ಜೊತೆಗೆ ಆ ಇಬ್ಬರನ್ನು ಮನೆಯೊಳಗೆ ಕೂಡಿ ಹಾಕಿ, ಮನೆ ಮೇಲೆ ಕಲ್ಲು ಎಸೆದರು. ನಂತರ ಮಣಿಕಂಠ ಅಂಬಿಗ ಅವರ ತಲೆಯನ್ನು ಕಲ್ಲಿನಿಂದ ಜಜ್ಜಿ ಗಾಯಪಡಿಸಿದರು.

ದುಷ್ಕರ್ಮಿಗಳು ಕಲ್ಲು ತೂರಿದ ಕಾರಣ ಮನೆಯ ಹಂಚುಗಳು ಒಡೆದವು. ಈ ವೇಳೆ `ಮನೆಯಿಂದ ಹೊರ ಬಂದರೆ ಸಾಯಿಸುವೆ’ ಎಂದು ಬೆದರಿಸಿದರು. ಅವರು ಹೋದ ನಂತರ ಕುಟುಂಬದವರು ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಇದಾದ ಮೇಲೆ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದರು. ಕಾವ್ಯ ಅಂಬಿಗ ಅವರು ನೀಡಿದ ದೂರಿನ ಅನ್ವಯ ಪೊಲೀಸರು ನಿಶಾಂತ ಅಂಬಿಗ ಹಾಗೂ ರಾಜು ಅಂಬಿಗ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ShareSendTweetShare
Previous Post

ಜೂಜುಕೋರರ ವಿರುದ್ಧ ಕಠಿಣ ಕ್ರಮ

Next Post

ರಾತ್ರಿಯಿಡೀ ಪೀಡಿಸುವ ಸಾಲ ಸಿಬ್ಬಂದಿ: ತಹಶೀಲ್ದಾರರ ಮುಂದೆ ಮಹಿಳೆಯರ ಅಳಲು!

Next Post

ರಾತ್ರಿಯಿಡೀ ಪೀಡಿಸುವ ಸಾಲ ಸಿಬ್ಬಂದಿ: ತಹಶೀಲ್ದಾರರ ಮುಂದೆ ಮಹಿಳೆಯರ ಅಳಲು!

ರಕ್ಷಿತಾಗೆ ಪೊಲೀಸರ ಶ್ರೀರಕ್ಷೆ: ತಾಯಿ ಮಡಿಲು ಸೇರಿದ ಯಲ್ಲಾಪುರ ಯುವತಿ!

ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.