ಐದಾರು ಯುವತಿಯರಿಗೆ ಅಶ್ಲೀಲ ಸಂದೇಶ ರವಾನಿಸಿ ಪೆಟ್ಟು ತಿನ್ನದೇ ಬಜಾವಾಗಿದ್ದ ವಿ-ನಾಯಕ ಇದೀಗ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯೊಬ್ಬರನ್ನು ಸರಸಕ್ಕೆ ಕರೆದು ಸಿಕ್ಕಿ ಬಿದ್ದಿದ್ದಾರೆ. ವಿ-ನಾಯಕನ ಉಪಟಳ ಸಹಿಸದ ಸಂತ್ರಸ್ತೆ ಕನ್ನಿಕಾವೇಣಿ (ಸಂತ್ರಸ್ತೆ ಹೆಸರು ಬದಲಿಸಿದೆ) ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಅಂಕೋಲಾ ತಾಲೂಕಿನ ಕನಕನಳ್ಳಿಯಲ್ಲಿ ನಡೆಯುವ ರಾಜಕೀಯ ಸಭೆಗೆ ಬರುತ್ತಿದ್ದ ಅದೇ ಊರಿನ ವಿ-ನಾಯಕ ಸಂಘಟನೆ ಹೆಸರಿನಲ್ಲಿ ಬುಡಕಟ್ಟು ಸಮುದಾಯದ ಮಹಿಳೆಯ ಫೋನ್ ನಂ ಪಡೆದಿದ್ದ. `ನೀನು ನಾನು ಒಂದೇ ಪಕ್ಷ. ಒಂದೇ ಕುಟುಂಬದoತೆ’ ಎಂದು ಆತ ಮಾತು ಶುರು ಮಾಡಿದ್ದ. ಪುರೋಹಿತ್ಯ ಕೆಲಸಕ್ಕೆ ಹೋಗುವಾಗ ಎದುರು ಸಿಕ್ಕ ಆ ಮಹಿಳೆಗೆ ಹಾಯ್-ಬಾಯ್ ಮಾಡುತ್ತಿದ್ದ. `ನಾನು ನಿನ್ನ ದೊಡ್ಡ ಅಭಿಮಾನಿ’ ಎಂದೇ ಆತ ಪದೇ ಪದೇ ಫುಸಲಾಯಿಸುತ್ತಿದ್ದ. ಮದುವೆಯಾಗಿ ಮಕ್ಕಳನ್ನು ಹೊಂದಿರುವ ಆ ಕೃಷ್ಣವೇಣಿ ಈತನ ಮಾತಿಗೆ ಮರಳಾಗಿರಲಿಲ್ಲ.
ಅದಾಗಿಯೂ ಬೆಂಬಿಡದೇ ಕಾಡುತ್ತಿದ್ದ ವಿ-ನಾಯಕ `ನೀನೇ ನನ್ನ ಬೆಳ್ಳಿ.. ನೀನೆ ನನ್ನ ಬಂಗಾರ’ ಎನ್ನುತ್ತ ಆಕೆಯ ಹಿಂದೆ ಬಿದ್ದಿದ್ದ. ರಾತ್ರಿಯಿಡಿ ಕೆಟ್ಟದಾಗಿ ವಾಟ್ಸಪ್ ಮೆಸೆಜ್ ಮಾಡುವುದನ್ನು ಆತ ರೂಢಿಸಿಕೊಂಡಿದ್ದ. ತನ್ನ ಗುಪ್ತಾಂಗದ ಫೋಟೋವನ್ನು ಕಳುಹಿಸಿದ ವಿ-ನಾಯಕ `ನೀನು ಕಳುಹಿಸು’ ಎಂದು ಪೀಡಿಸಲು ಶುರು ಮಾಡಿದ್ದ. ಆತನ ಕಾಟ ತಾಳಲಾರದ ಕೃಷ್ಣವೇಣಿ ಮೊದಲು ಎಚ್ಚರಿಕೆ ನೀಡಿದರು. ಆದರೂ, ಆತ ಸುದಾರಿಸಿಕೊಳ್ಳದ ಕಾರಣ ಧೈರ್ಯ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರು.
`ನಾವಿಬ್ಬರೂ ಮದುವೆ ಆಗೋಣ.. ಓಡಿ ಹೋಗೋಣ’ ಎಂದೆಲ್ಲ ಆತ ಮಾಡಿದ ಮೆಸೆಜುಗಳನ್ನು ಮಹಿಳಾ ಪೊಲೀಸರ ಮುಂದಿಟ್ಟರು. ಈ ವೇಳೆಗೆ `ಆತ ಈ ಹಿಂದೆ ಸಹ ಹೀಗೆ ಮಾಡಿದ್ದ’ ಎಂದು ಇನ್ನಿತರರು ಸಾಕ್ಷಿ ಹೇಳಿದರು. ಆದರೆ, ಆ ವಿ-ನಾಯಕ ಮಾತ್ರ `ನಾನವನಲ್ಲ.. ನಾನವನಲ್ಲ’ ಎನ್ನುತ್ತಿದ್ದ. `ನನ್ನ ಮೊಬೈಲ್ ಹ್ಯಾಕ್ ಆಗಿದೆ. ಆ ಸಿಮ್ ನನ್ನದಲ್ಲ’ ಎಂದು ವಾದಿಸುತ್ತಿದ್ದ. ಆದರೆ, ಅದನ್ನು ಯಾರೂ ನಂಬುವ ಹಾಗಿರಲಿಲ್ಲ.
`ಕ್ಷಮೆ ಕೇಳಿದರೆ ಬಿಟ್ಟು ಬಿಡುವೆ’ ಎಂದು ಕೃಷ್ಣವೇಣಿ ಹೇಳಿದರೂ ಅದಕ್ಕೆ ವಿ-ನಾಯಕ ಒಪ್ಪಲಿಲ್ಲ. ಮಾಡಿದ ತಪ್ಪಿಗೆ ಬಹಿರಂಗವಾಗಿ ಕ್ಷಮೆ ಕೇಳಲು ಆತ ಸಿದ್ಧವಿರಲಿಲ್ಲ. `ತನ್ನಂತೆ ಬೇರೆಯವರಿಗೆ ಆತನಿಂದ ಹಿಂಸೆ ಆಗಬಾರದು’ ಎಂದು ನಿರ್ಧರಿಸಿದ ಕೃಷ್ಣವೇಣಿ ನಡೆದಿದ್ದನ್ನೆಲ್ಲ ಬರೆದು ಪೊಲೀಸರ ಮುಂದಿರಿಸಿದ್ದಾರೆ.





