ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವ ವಾಹನ ಕಾರ್ಮಿಕನಿಗೆ ಗುದ್ದಿದ ಪರಿಣಾಮ ದೂರದ ಊರಿನಿಂದ ದುಡಿಯಲು ಬಂದಿದ್ದ ಜಸ್ತಿ ಮಂಡಲ್ (49) ಸಾವನಪ್ಪಿದ್ದಾರೆ.
ಪ ಬಂಗಾಲದ ಜಸ್ತಿ ಮಂಡಲ್ ಅವರು ಎಲ್ & ಟಿ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಕಂಪನಿ ಕೆಲಸಕ್ಕೆ ಹೋಗಲು ಅವರು ಕಾರವಾರ-ಸದಾಶಿವಗಡ ಹೆದ್ದಾರಿಯಲ್ಲಿ ನಿಂತಿದ್ದರು. ಸಂಕ್ರಿಭಾಗ ಕಡೆಯಿಂದ ಎಲ್ & ಟಿ ಕಂಪನಿಯ ಬಸ್ಸನ್ನು ಚಲಾಯಿಸಿಕೊಂಡು ಬಂದ ಚೆಂಡಿಯಾದ ಅಜೇಯ ನಾಗೇಕರ ಹೆದ್ದಾರಿ ಬಳಿ ಒಮ್ಮೆಗೆ ಬಸ್ಸನ್ನು ಎಡಕ್ಕೆ ತಿರುಗಿಸಿದರು.
ಆಗ ಬಸ್ಸು ಬಸ್ಸು ಹತ್ತಲು ಕಾಯುತ್ತಿದ್ದ ಜಸ್ತಿ ಮಂಡಲ್ ಅವರಿಗೆ ಗುದ್ದಿತು. ನೆಲಕ್ಕೆ ಬಿದ್ದ ಜಸ್ತಿ ಮಂಡಲ್ ಅವರ ಮೇಲೆ ಬಸ್ಸಿನ ಹಿಂದಿನ ಟಯರ್ ಹತ್ತಿತು. ರಕ್ತದ ಮಡುವಿನಲ್ಲಿ ಬಿದ್ದ ಅವರನ್ನು ಇತರೆ ಕಾರ್ಮಿಕರು ಆಸ್ಪತ್ರೆಗೆ ಸಾಗಿಸಿದರು. ಆದರೆ, ವೈದ್ಯರು ಈಗಾಗಲೇ ಜಸ್ತಿ ಮಂಡಲ್ ಸಾವನಪ್ಪಿರುವ ಬಗ್ಗೆ ಘೋಷಿಸಿದರು.





