ರೋಷನ್ ಪಾಲೇಕರ್ ಎಂಬ ವ್ಯಾಪಾರಿ ಹಾಗೂ ಸೂರಜ್ ರೇವಣಕರ್ ಎಂಬ ಉದ್ಯೋಗಿ ಸೇರಿ ಮಣಿಕಂಠ ರೇವಣಕರ್ ಎಂಬ ಕಾಲೇಜು ವಿದ್ಯಾರ್ಥಿಗೆ ಗಾಂಜಾ ನಶೆ ಏರಿಸಿದ್ದಾರೆ. ಶಿವಾನಿ ಹೋಟೇಲ್ ಬಳಿ ಗಾಂಜಾ ಗುಂಗಿನಲ್ಲಿದ್ದ ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿರಸಿ ಶಿವಾನಿ ಹೊಟೇಲ್ ಬಳಿ ಗಾಂಜಾ ಗುಂಗಿನಲ್ಲಿದ್ದ ಮೂವರು ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಸಿ ಅಯ್ಯಪ್ಪನಗರದ ರೋಷನ್ ಪ್ರದೀಪ ಪಾಲೇಕರ್ (24) ವ್ಯಾಪಾರಿ. ಈತನ ಸ್ನೇಹಿತ ಶಿರಸಿ ಡಿಪೋ ಎದುರಿನ ಸೂರಜ ಉದಯ ರೇವಣಕರ (22) ದಿವಿಗಿ ಕಂಪನಿಯಲ್ಲಿ ಮಿಶನ್ ಆಪರೇಟರ್. ಈ ಇಬ್ಬರು ಸೇರಿ ಕಸ್ತೂರಿಬಾನಗರದ ಸೋನಿಯಾ ಗಲ್ಲಿಯ ಮಣಿಕಂಠ ಸತೀಶ ರೇವಣಕರ (18) ಎಂಬಾತರಿಗೂ ಗಾಂಜಾ ಹುಚ್ಚು ಹಿಡಿಸಿದ್ದರು.
ಗುರುವಾರ ಈ ಮೂವರು ಸೇರಿ ನಶೆಯಲ್ಲಿದ್ದಾಗ ಶಿರಸಿ ಹೊಸಮಾರುಕಟ್ಟೆ ಪೋಲೀಸ ಠಾಣೆ ಉಪನಿರೀಕ್ಷಕಿ ರತ್ನಾ ಕುರಿ ದಾಳಿ ಮಾಡಿದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಯಿತು. ಈ ಹಿನ್ನಲೆ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿದರು.





