ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಕಾಣೆಯಾಗಿದ್ದ ಹುಡುಗಿಯನ್ನು ಪೊಲೀಸರು ಹುಡುಕಿ ಆಕೆಯ ತಾಯಿಗೆ ಒಪ್ಪಿಸಿದ್ದಾರೆ. `ತಾಯಿ ಬಿಟ್ಟು ಎಲ್ಲಿಯೂ ಹೋಗಬೇಡ’ ಎಂದು ಬುದ್ದಿಮಾತನ್ನು ಹೇಳಿದ್ದಾರೆ!
ಯಲ್ಲಾಪುರದ ಕಿರವತ್ತಿ ಬಳಿಯ ಜಯಂತಿನಗರದ ರಕ್ಷಿತಾ ಚಂದಾವರ (20) ಶನಿವಾರ ಶಿರಸಿಗೆ ಬಂದಿದ್ದರು. ಹಳೆ ಬಸ್ ನಿಲ್ದಾಣದ ಬಳಿಯಿರುವ ಅಂಗಡಿಗೆ ಹೋಗಿ ಬರುವುದಾಗಿ ಅವರ ತಾಯಿ ಲತಾ ಚಂದಾವರ ಬಳಿ ಹೇಳಿ ಹೋದವರು ಅಲ್ಲಿಂದ ಕಾಣೆಯಾಗಿದ್ದರು. ಅಂಗಡಿಗೆ ಹೋದ ಹುಡುಗಿ ಎಷ್ಟು ಹೊತ್ತು ಕಳೆದರೂ ಮರಳದ ಕಾರಣ ಅವರ ತಾಯಿ ಆತಂಕಕ್ಕೆ ಒಳಗಾಗಿದ್ದರು.
`ಮಗಳನ್ನು ಹುಡುಕಿಕೊಡಿ’ ಎಂದು ಲತಾ ಅವರು ಪೊಲೀಸ್ ದೂರು ನೀಡಿದ್ದರು. ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ ನಂತರ ರಕ್ಷಿತಾ ಸಿಕ್ಕಿದರು. ತಾಯಿ-ಮಗಳನ್ನು ಒಂದು ಮಾಡಿದ ಪಿಎಸ್ಐ ನಾಗಪ್ಪ ಬಿ ಅವರು ಈ ಪ್ರಕರಣವನ್ನು ಇಲ್ಲಿಗೆ ಮುಗಿಸಿದರು.




