ಜಾತ್ರೆ ಅಂಗವಾಗಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರು ಜನ ಸಿಕ್ಕಿ ಬಿದ್ದಿದ್ದಾರೆ.
ಹೊನ್ನಾವರದ ಹೊಸಾಕುಳಿ ಜಾತ್ರೆ ವೇಳೆ ಕೃಷ್ಣ ಸುಬ್ರಾಯ ಹೆಗಡೆ ಹೊಸಾಕುಳಿ ಸಾಣ್ಮನೆ, ಪ್ರವೀಣ ನಾಗೇಶ ನಾಯ್ಕ ಹೊಸಾಕುಳಿ ತಗಟಕೇರಿ, ರಮೇಶ ಮಾರು ಮುಕ್ರಿ ಹೊಳೆಗದ್ದೆ, ರವಿ ಶಂಭು ಹೆಗಡೆ ವಿಲಾಯ್ತಿ, ಸುಬ್ರಹ್ಮಣ್ಯ ಹಮ್ಮು ಗೌಡ ಹೊಸಾಕುಳಿ, ವಿನಯ ಬಾಲಕೃಷ್ಣ ನಾಯ್ಕ ಸಾಲಕೋಡ ಇಸ್ಪೀಟ್ ಆಡುತ್ತಿದ್ದರು. ಉಮಾಮಹೇಶ್ವರ ದೇವಸ್ಥಾನದ ಹತ್ತಿರ ಪೊಲೀಸರು ಅವರು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ನಡೆಸಿದರು.
ಜೂಜಾಟದ ವೇಳೆ ಆರೋಪಿತರು ಇಸ್ಪಿಟ್ ಎಲೆಗಳೊಂದಿಗೆ ಹಣವನ್ನು ಹರಡಿಕೊಂಡಿದ್ದರು. ಹೀಗಾಗಿ ದಾಳಿ ಸಂದರ್ಭದಲ್ಲಿ 3100 ರೂ ನಗದು, ಇಸ್ಪೀಟ್ ಎಲೆಗಳು ಸಿಕ್ಕವು. ಹೊನ್ನಾವರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.





