ಗ್ರಾಮ ಪಂಚಾಯತ ವ್ಯವಹಾರ, ರಸೀದಿ ಪುಸ್ತಕಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕರ ವಸೂಲಿಗಾರನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಬಾರಿಸಿದ್ದು, ಆ ನೋವನ್ನು ಸಹಿಸದ ನಾರಾಯಣ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ.
ಹೊನ್ನಾವರದ ಖರ್ವಾ ಗ್ರಾಮ ಪಂಚಾಯತದಲ್ಲಿ ನಾರಾಯಣ ಗೌಡ (56) ಅವರು ಕರ ವಸೂಲಿಗಾರರಾಗಿದ್ದಾರೆ. ಫೆ 7ರಂದು ಗ್ರಾಮ ಪಂಚಾಯತಗೆ ಆಗಮಿಸಿದ ತನೋಜಕುಮಾರ ನಾಯ್ಕ ಎಂಬಾತದು ವಿವಿಧ ಲೆಕ್ಕಪತ್ರಗಳ ಬಗ್ಗೆ ವಿಚಾರಿಸಿದ್ದಾರೆ. ಕರ ವಸೂಲಿ ಹಾಗೂ ರಸೀದಿಗಳ ಬಗ್ಗೆ ತನೋಜಕುಮಾರ ನಾಯ್ಕ ಪ್ರಶ್ನಿಸಿದ್ದಾರೆ.
ಮೊದಲು ಸರಿಯಾಗಿಯೇ ಉತ್ತರಿಸಿದ ನಾರಾಯಣ ಗೌಡ ನಂತರ ಸೂಕ್ತ ಸ್ಪಂದನೆ ನೀಡಿಲ್ಲ. ಇದರಿಂದ ಸಿಟ್ಟಾದ ತನೋಜಕುಮಾರ ನಾಯ್ಕ ನಾರಾಯಣ ಗೌಡರ ಕೆನ್ನೆಗೆ ಬಾರಿಸಿದ್ದಾರೆ. ಜೊತೆಗೆ ಕೆಟ್ಟ ಶಬ್ದಗಳಿಂದ ನಾರಾಯಣ ಗೌಡರನ್ನು ನಿಂದಿಸಿದ್ದಾರೆ. ಸಂಜೆಯವರೆಗೂ ಇದೇ ವಿಷಯದ ಬಗ್ಗೆ ನಾರಾಯಣ ಗೌಡ ಅಲ್ಲಿ-ಇಲ್ಲಿ ಚರ್ಚೆ ನಡೆಸಿದ್ದು, ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
`ಅನಗತ್ಯವಾಗಿ ನಿಂದಿಸಿ ಕೆನ್ನೆಗೆ ಬಾರಿಸಿದ ತನೋಜಕುಮಾರ ವಿರುದ್ಧ ತನಿಖೆ ನಡೆಸಬೇಕು’ ಎಂದು ನಾರಾಯಣ ಗೌಡ ಪೊಲೀಸ್ ಪ್ರಕರಣ ದಾಖಲಿಸಿದರು.





