ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಕೂಡಿಟ್ಟ ಅತ್ತೆ ಅದೇ ಹಣದಲ್ಲಿ ತಮ್ಮ ಸೊಸೆಗೆ ಕಪಾಟು ಕೊಡಿಸಿದ್ದಾರೆ!
ಯಲ್ಲಾಪುರದ ಆನಗೋಡಿನ ಕೆಳಗಿನಪಾಲಿನಲ್ಲಿ ವಾಸವಾಗಿರುವ ಭಾಗೀರಥಿ ಭಟ್ಟ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ 2 ಸಾವಿರ ರೂ ಹಣ ಜಮಾ ಆಗುತ್ತಿದೆ. ಮೊದಲ ಕೆಲ ತಿಂಗಳಿನ ಹಣವನ್ನು ಗೃಹ ಬಳಕೆಗೆ ಉಪಯೋಗಿಸಿದ ಅವರು ಕಳೆದ ಆರು ತಿಂಗಳ ಹಣವನ್ನು ಕಾಯ್ದಿರಿಸಿದ್ದರು.
ಹುಟ್ಟುಹಬ್ಬದ ನೆನಪಿಗಾಗಿ ಭಾಗೀರಥಿ ಭಟ್ಟ ಅವರು ಸೊಸೆಗೆ ಕಪಾಟನ್ನು ಉಡುಗರೆಯಾಗಿ ಕೊಟ್ಟಿದ್ದಾರೆ. ಭವಾನಿ ಭಟ್ಟ ಅವರಿಗೂ ಕಪಾಟಿನ ಅಗತ್ಯವಿದ್ದು, ಇದನ್ನು ಅರಿತು ಅತ್ತೆ 13 ಸಾವಿರ ರೂ ಬೆಲೆಯ ಕಪಾಟನ್ನು ಕೊಡಿಸಿದಕ್ಕಾಗಿ ಭವಾನಿ ಭಟ್ಟ ಅವರು ಸಂತಸ ಹಂಚಿಕೊoಡಿದ್ದಾರೆ.





