6
  • Latest

ಶಿರಸಿ | ಆಸ್ಪತ್ರೆ ಫೋನು ರಿಂಗಣಿಸಿದ ಪ್ರಧಾನಿ ಮೋದಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಶಿರಸಿ | ಆಸ್ಪತ್ರೆ ಫೋನು ರಿಂಗಣಿಸಿದ ಪ್ರಧಾನಿ ಮೋದಿ!

AchyutKumar by AchyutKumar
in ದೇಶ - ವಿದೇಶ, ಸ್ಥಳೀಯ

ಆಯುರ್ವೇದ ಆಸ್ಪತ್ರೆಯ ಹಳೆಯ ಲ್ಯಾಂಡ್‌ಲೈನ್ ಸಂಪರ್ಕ ಸ್ಥಗಿತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಅದನ್ನು ರಿಪೇರಿ ಮಾಡಲಾಗಿದೆ!

ADVERTISEMENT

ಶಿರಸಿಯ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿ ಡಾ ರವಿಕಿರಣ ಪಟವರ್ಧನ್ ಅವರು ಆಯುರ್ವೇದ ಆಸ್ಪತ್ರೆ ಹೊಂದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಅವರು 08384-225836 ಸಂಖ್ಯೆಯ ಬಿಎಸ್‌ಎನ್‌ಎಲ್ ಫೋನ್ ಸಂಪರ್ಕ ಪಡೆದಿದ್ದಾರೆ. ಅನೇಕ ರೋಗಿಗಳು ಈ ಸಂಖ್ಯೆಗೆ ಫೋನ್ ಮಾಡಿ ಬರುತ್ತಾರೆ. ಕೆಲವರು ಫೋನ್ ಮೂಲಕವೇ ಸಲಹೆ ಪಡೆಯುತ್ತಾರೆ.

ಆದರೆ, ಕಳೆದ ಜುಲೈ ತಿಂಗಳಿನಲ್ಲಿ ಅವರ ಫೋನು ಹಾಳಾಗಿತ್ತು. ಬಿಎಸ್‌ಎನ್‌ಎಲ್ ಕಚೇರಿಗೆ ದೂರು ನೀಡಿದರೂ ಸ್ಪಂದಿಸಿರಲಿಲ್ಲ. ಖಾಸಗಿ ಸಹಭಾಗಿತ್ವದ FTTH ಸಂಪರ್ಕ ಪಡೆಯುವಂತೆ ಅಲ್ಲಿನ ಅಧಿಕಾರಿಗಳೇ ಸಲಹೆ ನೀಡಿದ್ದು, ಫೋನ್ ನಂ ಬದಲಾಗುವ ವಿಷಯ ಅರಿತು ಡಾ ರವಿಕಿರಣ ಪಟವರ್ಧನ್ ಅವರು ಅದಕ್ಕೆ ಮನಸ್ಸು ಮಾಡಿರಲಿಲ್ಲ. ಅದಾದ ನಂತರ ಸಾಕಷ್ಟು ಸಲ ದೂರು ಕೊಟ್ಟರೂ ಬಿಎಸ್‌ಎನ್‌ಎಲ್ ಆ ಸಂಖ್ಯೆಯ ಸಂಪರ್ಕವನ್ನು ಸರಿ ಮಾಡಿರಲಿಲ್ಲ.

Advertisement. Scroll to continue reading.

ಈ ನಡುವೆ ಡಾ ರವಿಕಿರಣ ಪಟವರ್ಧನ ಅವರು ಸ್ಥಳೀಯ ಸಂಸದರ ಕಚೇರಿಗೆ ದೂರು ನೀಡಿದರು. ಅವರ ಸೂಚನೆ ಮೇರೆಗೆ ಒಮ್ಮೆ BSNL ಅಧಿಕಾರಿಗಳು ಸಂಪರ್ಕ ಸರಿಪಡಿಸಿದರು. ಆದರೆ, ಪೂರ್ಣ ಪ್ರಮಾಣದಲ್ಲಿ ಫೋನ್ ಸರಿಯಾಗಿರಲಿಲ್ಲ. ಡಿಸೆಂಬರ್ ಅಂತ್ಯಕ್ಕೆ ಮತ್ತೆ ಸಂಪರ್ಕ ಕಡಿತಗೊಂಡಿತು. ಆಗ, ಬಿಎಸ್‌ಎನ್‌ಎಲ್ ಸಂಸ್ಥೆಯ ವಾಟ್ಸಪ್ ದೂರು ವಿಭಾಗದ ಮೂಲಕ ದುರಸ್ತಿಗೆ ಅರ್ಜಿ ಸಲ್ಲಿಸಿದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

Advertisement. Scroll to continue reading.

ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಗೆ ಡಾ ರವಿಕಿರಣ ದೂರು ಸಲ್ಲಿಸಿದರು. `ನಾನು ವೈದ್ಯನಾಗಿದ್ದು, ಅನೇಕ ರೋಗಿಗಳು ಸಂಪರ್ಕಿಸಲು ಲ್ಯಾಂಡ್‌ಲೈನ್ ಬಳಸುತ್ತಾರೆ’ ಎಂದವರು ವಿವರಿಸಿದರು. ಆಗ ಬಿಎಸ್‌ಎನ್‌ಎಲ್ ಅಧಿಕಾರಿಗಳು ಡಾ ರವಿಕಿರಣ ಅವರನ್ನು ಸಂಪರ್ಕಿಸಿ `ಕಂಬ ಹಾಳಾಗಿದೆ. ಕೇಬಲ್ ಸರಿಯಿಲ್ಲ’ ಎಂಬ ಸಬೂಬು ನೀಡಿದ್ದರು. ಆದರೆ, ಅದಕ್ಕೆ ಒಪ್ಪದ ಅವರು `ಗ್ರಾಹಕನಿಗೆ ನೀಡಬೇಕಾದ ಸೇವೆ ನೀಡಿ’ ಎಂದು ಪಟ್ಟು ಹಿಡಿದರು.

ಈ ಹಂತದಲ್ಲಿ ಅವರು ಪ್ರಧಾನಮಂತ್ರಿ ಕಾರ್ಯಾಲಯದ ವೆಬ್‌ಸೈಟ್ ಮೂಲಕ ಫೆಬ್ರುವರಿ 5ರ ದೂರು ಸಲ್ಲಿಸಿದರು. ದೂರು ನೀಡಿದ 33 ಗಂಟೆ ಅವಧಿಯಲ್ಲಿ ಅವರ ಲ್ಯಾಂಡ್ ಲೈನ್ ಮೊದಲಿನಂತೆ ಸದ್ದು ಮಾಡಿತು. ಮೋದಿ ಕಾರ್ಯಾಲಯದ ಸೂಚನೆ ಮೇರೆಗೆ ಬಿಎಸ್‌ಎನ್‌ಎಲ್ ತಂಡದವರೇ ಆಗಮಿಸಿ ಹಳೆಯ ಲ್ಯಾಂಡ್‌ಲೈನ್ ದುರಸ್ಥಿ ಮಾಡಿದರು.

Previous Post

ನಿರಾಶ್ರಿತ ಜಿಲ್ಲೆ ಜನರಿಗೆ ಇಲ್ಲ ಭೂಮಿ ಹಕ್ಕು!

Next Post

ಲಾರಿ ಮಾಲಕ ಸಂಘಕ್ಕೂ ಮಾಧವ ನಾಯಕರೇ ಅಧ್ಯಕ್ಷ!

Next Post

ಲಾರಿ ಮಾಲಕ ಸಂಘಕ್ಕೂ ಮಾಧವ ನಾಯಕರೇ ಅಧ್ಯಕ್ಷ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ