ಪ್ರವಾಸಿಗರು ಸೇದಿ ಬಿಸಾಡಿದ ಸಿಗರೇಟಿನ ತುಂಡು ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಕುಮಟಾ ತಾಲೂಕಿನ ಗೋಕರ್ಣದ ಗೋಗರ್ಭದ ಬಳಿ ಭಾನುವಾರ ಬೆಂಕಿ ಹೊತ್ತಿ ಉರುಯುತ್ತಿರುವುದನ್ನು ನೋಡಿದ ಜನ ಅದನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ.
ಸಾರ್ವಜನಿಕ ಪ್ರದೇಶಗಳಲ್ಲಿ ಬೀಡಿ-ಸಿಗರೇಟು ಸೇದುವುದು ಅಪರಾಧ ಎಂಬ ಅರಿವಿದ್ದರೂ ಪ್ರವಾಸಿಗರು ಗುಡ್ಡದ ತಪ್ಪಲಿನಲ್ಲಿ ರಾಜಾರೋಷವಾಗಿ ಮಾದಕ ವ್ಯಸನದಲ್ಲಿ ತೊಡಗುತ್ತಾರೆ. ಅದರಂತೆ ಭಾನುವಾರ ಪ್ರವಾಸಕ್ಕೆ ಬಂದವರು ಸಿಗರೇಟು ಸೇದಿ ಬಿಸಾಡಿದ ಪರಿಣಾಮ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಗಂಟೆಗಳ ಕಾಲ ಹರಸಾಹಸ ಪಟ್ಟರೂ ಬೆಂಕಿ ಆರಿಸಲು ಸಾಧ್ಯವಾಗಿಲ್ಲ.
ಕುಡ್ಲೆ ಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ಈ ಅಗ್ನಿ ಅವಘಡ ನಡೆದಿದೆ. ಖಾಸಗಿಯವರ ಜಾಗದಲ್ಲಿ ಹೆಚ್ಚಿನ ಬೆಂಕಿ ಹೊತ್ತಿಕೊಂಡಿದ್ದು, ಅದರು ಅರಣ್ಯ ಇಲಾಖೆ ಭೂಮಿಗೂ ವ್ಯಾಪಿಸಿದೆ. ಈ ಹಿನ್ನಲೆ ಅರಣ್ಯ ಸಿಬ್ಬಂದಿ ಸಹ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಕೊನೆಗೆ ಎಲ್ಲರೂ ಸೇರಿ ಬೆಂಕಿ ಹತೋಟಿಗೆ ತಂದರು.
ಬೆoಕಿ ಕಂಡ ಜನ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದರು. ಕುಮಟಾದಿಂದ ಅಗ್ನಿಶಾಮಕ ವಾಹನ ಆಗಮಿಸುವ ವೇಳೆಗೆ ಅಲ್ಲಿದ್ದವರೇ ಬೆಂಕಿ ಆರಿಸಿದ್ದರು.




