6
  • Latest

ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!

AchyutKumar by AchyutKumar
February 21, 2025
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ ಪತ್ತೆಯಾಗಿದೆ. ಕಚೇರಿಯಲ್ಲಿ ಮಂಚ-ಹಾಸಿಗೆಯನ್ನಿರಿಸಿದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಅವರು ಸರಿಯಾಗಿ ಉತ್ತರಿಸಿದ ಕಾರಣ ಅವರ ಅಮಾನತಿಗೆ ಸಚಿವ ಎಚ್ ಕೆ ಪಾಟೀಲ ಸೂಚಿಸಿದ್ದಾರೆ!

ಕಾರವಾರದ ಆರ್ ಟಿ ಓ ಕಚೇರಿ ಅಂಚಿನ ಪ್ರದೇಶದಲ್ಲಿ ಹಿಂದಿನಿAದಲೂ ಪ್ರವಾಸೋದ್ಯಮ ಇಲಾಖೆಯ ಕಚೇರಿಯಿದೆ. ಆ ಕಚೇರಿಯ 500ಮೀ ದೂರದಲ್ಲಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ ಬಾಡಿಗೆ ಮನೆಯನ್ನು ಸಹ ಹೊಂದಿದ್ದಾರೆ. ಅದಾಗಿಯೂ ಕಚೇರಿಯ ಪಕ್ಕದ ಕೋಣೆಯಲ್ಲಿ ಅವರು ಹಾಸಿಗೆ-ದಿಂಬುಗಳನ್ನಿರಿಸಿಕೊoಡ ಆರೋಪ ಎದುರಿಸುತ್ತಿದ್ದಾರೆ. ಈ ವಿಷಯ ಅಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಮುಜುಗರಕ್ಕೂ ಕಾರಣವಾಗಿದೆ. ಜಯಂತ ಅವರು ಬೆಂಗಳೂರಿಗೆ ತರಬೇತಿಗೆ ತೆರಳಿದ ವೇಳೆ ಉಪವಿಭಾಗಾಧಿಕಾರಿ ಕನಿಷ್ಕ ಅವರು ಸರ್ಕಾರಿ ಕಚೇರಿಯಲ್ಲಿ ಮಂಚ-ಹಾಸಿಗೆ ಇರುವುದನ್ನು ಪತ್ತೆ ಮಾಡಿದ್ದಾರೆ!

ADVERTISEMENT
ADVERTISEMENT

`ಜೊಯಿಡಾದ ರಾಮನಗರದಲ್ಲಿ ಪ್ರವಾಸೋದ್ಯಮ ಇಲಾಖೆ ಹುಬ್ಬಳ್ಳಿಯ ಸಾಯಿ ಕನ್ಸಕ್ಷನ್ ಅವರಿಗೆ 25 ವರ್ಷದ ಅವಧಿಗೆ ಜಾಗವನ್ನು ಲೀಸ್ ನೀಡಿತ್ತು. ನಿಯಮ ಉಲ್ಲಂಘನೆ ಕಾರಣ 2018ರಲ್ಲಿ ಸಾಯಿ ಕನ್ಸಕ್ಷನ್ ಮೇಲೆ ದಾಳಿ ನಡೆಸಲಾಗಿದ್ದು, ಆ ವೇಳೆ ಅಲ್ಲಿದ್ದ ಮಂಚವನ್ನು ವಶಕ್ಕೆ ಪಡೆದು ಪ್ರವಾಸೋದ್ಯಮ ಕಚೇರಿಯಲ್ಲಿರಿಸಲಾಗಿದೆ’ ಎಂದು ಜಯಂತ್ ದಾಖಲೆಗಳನ್ನು ಒದಗಿಸಿದ್ದಾರೆ. ಆದರೆ, ಆ ದಿನ ಒಟ್ಟು 10 ಮಂಚಗಳನ್ನು ವಶಕ್ಕೆ ಪಡೆದ ಬಗ್ಗೆ ದಾಖಲೆಗಳಲ್ಲಿ ನಮೂದಾಗಿದ್ದು, ಎಲ್ಲವನ್ನು ಕ್ರಮಬದ್ಧವಾಗಿರಿಸಿ ಸೀಲ್ ಮಾಡಿದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ, ಸೀಲ್ ಆದ ಉಳಿದ ಮಂಚ, ಹಾಸಿಗೆ, ಸಿಸಿ ಕ್ಯಾಮರಾ, ಫ್ಯಾನು, ಟೇಬಲು, ಟಿವಿ, ಬಕೇಟು, ಕಂಪ್ಯುಟರ್, ಪ್ರಿಡ್ಜ್ ಸೇರಿ ನೂರಾರು ಸಾಮಗ್ರಿಗಳು ಎಲ್ಲಿ ಹೋದವು? ಎಂಬುದು ಯಾರಿಗೂ ಗೊತ್ತಾಗಿಲ್ಲ.

ರಾಮನಗರದಲ್ಲಿ ವಶಕ್ಕೆ ಪಡೆದ ಎಲ್ಲಾ ವಸ್ತುಗಳನ್ನು ಸೀಲ್ ಮಾಡಿರುವ ಬಗ್ಗೆ ಪಂಚನಾಮೆಯಲ್ಲಿ ಬರೆಯಲಾಗಿದೆ. ಆದರೆ, ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ಕಾಣಿಸಿದ ಮಂಚ ಸೀಲ್ ಮಾಡಿದ ಸ್ಥಿತಿಯಲ್ಲಿರಲಿಲ್ಲ. ಅದು ಬಳಕೆ ಮಾಡುತ್ತಿರುವ ರೀತಿ ಗೋಚರವಾಗಿರುವುದರಿಂದ ಇನ್ನಷ್ಟು ಅನುಮಾನ ಹುಟ್ಟಿಕೊಂಡಿದೆ. ಇನ್ನೂ ಜಯಂತ್ ಅವರ ಮಾತೃ ಇಲಾಖೆ ಪ್ರವಾಸೋದ್ಯಮ ಅಲ್ಲ. ಅವರು ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾಗಿದ್ದು, ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರಭಾರಿ ಅಧಿಕಾರಿಯಾಗಿದ್ದಾರೆ.

Advertisement. Scroll to continue reading.
Advertisement. Scroll to continue reading.

 

 

ShareSendTweetShare
ADVERTISEMENT
Previous Post

ಹೆಮ್ಮೆಯ ಕನ್ನಡತಿ: ಮಹಿಳಾ ಸಾಧಕರಿಗೆ ಟಿವಿ-9 ಗೌರವ!

Next Post

ಭಕ್ತರ ನಡುವೆ ಮಾರಾಮಾರಿ: ಪುಣ್ಯಕ್ಷೇತ್ರಕ್ಕೆ ಬಂದು ಪಾಪಿಗಳಾದರು!

Next Post

ಭಕ್ತರ ನಡುವೆ ಮಾರಾಮಾರಿ: ಪುಣ್ಯಕ್ಷೇತ್ರಕ್ಕೆ ಬಂದು ಪಾಪಿಗಳಾದರು!

ಬೈಕಿಗಿಂತಲೂ ದುಬಾರಿ ಈ ದಂಡ!

ಕಾಂಡ್ಲಾ ಕಾಡಿಗೆ ಕೊಡಲಿ ಏಟು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.