6
  • Latest

ಪ್ರೇಮ ವಿವಾಹಕ್ಕೆ ವಿರೋಧ: ಮಗಳು-ಅಳಿಯನಿಗೆ ಚಾಕು ಚುಚ್ಚಿ ವಿಷ ಸೇವಿಸಿದ ಶಂಕರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ್ರೇಮ ವಿವಾಹಕ್ಕೆ ವಿರೋಧ: ಮಗಳು-ಅಳಿಯನಿಗೆ ಚಾಕು ಚುಚ್ಚಿ ವಿಷ ಸೇವಿಸಿದ ಶಂಕರ!

AchyutKumar by AchyutKumar
in ಸ್ಥಳೀಯ

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಕಾರಣ ಕವನ ಎಂಬಾತರಿಗೆ ಅವರ ತಂದೆ ಶಂಕರ್ ಅವರು ಚಾಕು ಚುಚ್ಚಿದ್ದಾರೆ. ಇದನ್ನು ತಪ್ಪಿಸಲು ಬಂದ ಅಳಿಯ ಮನೋಜ ಅವರಿಗೂ ಚಾಕು ಚುಚ್ಚಿ, ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ADVERTISEMENT

ಶಿರಸಿ ತಾಲೂಕಿನ ಬನವಾಸಿಯ ರಂಗಾಪುರ ಬಳಿಯ ಮನೋಜ ಕಮಾಟೆ ಅವರು ಅದೇ ಊರಿನ ಕವನ ಅವರನ್ನು ಪ್ರೀತಿಸುತ್ತಿದ್ದರು. ಮೂರು ತಿಂಗಳ ಹಿಂದೆ ಕವನ ಹಾಗೂ ಮನೋಜ್ ಮದುವೆ ಆಗಿದ್ದರು. ನೋಂದಣಾಧಿಕಾರಿ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದರು. ಆದರೆ, ಈ ವಿವಾಹಕ್ಕೆ ಯುವತಿ ಮನೆಯವರ ಒಪ್ಪಿಗೆ ಇರಲಿಲ್ಲ. ಮನೋಜರನ್ನು ವಿವಾಹವಾಗುವುದನ್ನು ಕವನರ ತಂದೆ ವಿರೋಧಿಸಿದ್ದರು.

ವಿವಾಹದ ನಂತರ ಕೆಲ ಕಾಲ ಮುನಿಸಿಕೊಂಡಿದ್ದ ಯುವತಿ ತಂದೆ ಶಂಕರ ಕಮ್ಮಾರ್ ಕ್ರಮೇಣ ಸರಿಯಾಗಿದ್ದರು. ಆಗಾಗ ಮಗಳನ್ನು ಮಾತನಾಡಿಸಲು ಬರುತ್ತಿದ್ದರು. ಮಂಗಳವಾರ ಮಗಳನ್ನು ಮನೆಗೆ ಕರೆದೊಯ್ಯುವ ಬಗ್ಗೆ ಅಳಿಯನಲ್ಲಿ ಹೇಳಿಕೊಂಡಿದ್ದರು. ಊರಿನ ಜಾತ್ರೆ ಮುಗಿದ ನಂತರ ಪತ್ನಿಯನ್ನು ತವರಿಗೆ ಕಳುಹಿಸುವುದಾಗಿ ಮನೋಜ್ ಹೇಳಿದ್ದರು. ಅದಕ್ಕೆ ಶಂಕರ್ ಅವರು ಆ ವೇಳೆ ಯಾವುದೇ ಪ್ರತಿಕ್ರಿಯೆ ನೀಡರಲಿಲ್ಲ.

Advertisement. Scroll to continue reading.

ಬುಧವಾರ ಬೆಳಗ್ಗೆ ಮತ್ತೆ ಆಗಮಿಸಿದ ಶಂಕರ್, `ನಿಮ್ಮ ವಿವಾಹ ನೋಂದಣಿಗೆ ಸಾಕ್ಷಿಯಾಗಿ ಸಹಿ ಹಾಕಿದವರು ಯಾರು?’ ಎಂದು ಪ್ರಶ್ನಿಸಿದರು. ಆಗ, ಕವನ ಅವರು ಏನೂ ಮಾತನಾಡಲಿಲ್ಲ. ಮನೋಜ್ ಅವರು ಸುಮ್ಮನಿದ್ದರು. ಇದರಿಂದ ಸಿಟ್ಟಾದ ಶಂಕರ್ ಮಗಳ ಕುತ್ತಿಗೆಗೆ ಚಾಕು ಹಿಡಿದರು. ಮಗಳು ಗರ್ಭಿಣಿ ಎಂಬುದರ ಬಗ್ಗೆ ಅರಿವಿಲ್ಲದೇ ಗಾಯಗೊಳಿಸಿದರು. ಇದನ್ನು ತಪ್ಪಿಸಲು ಬಂದ ಮನೋಜ್ ಅವರಿಗೂ ಚಾಕು ಚುಚ್ಚಿದರು.

Advertisement. Scroll to continue reading.

ಇದೆಲ್ಲವೂ ಮುಗಿದ ನಂತರ ಶಂಕರ್ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದರು. ಅಸ್ವಸ್ಥಗೊಂಡ ಮೂವರನ್ನು ಅಲ್ಲಿನವರು ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರೂ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.

Previous Post

ಉತ್ತರ ಕನ್ನಡ | ಈ ಜಿಲ್ಲೆಯಲ್ಲಿದೆ ಪಂಚ ಆತ್ಮಲಿಂಗ ಕ್ಷೇತ್ರ!

Next Post

ಭಕ್ತಿ ಪ್ರವಾಸಕ್ಕೆ ಅಡ್ಡಿ: ಪುಂಡ-ಪೋಕರಿಗಳಿಗೆ ಬೈಕ್ ತಳ್ಳುವ ಶಿಕ್ಷೆ!

Next Post

ಭಕ್ತಿ ಪ್ರವಾಸಕ್ಕೆ ಅಡ್ಡಿ: ಪುಂಡ-ಪೋಕರಿಗಳಿಗೆ ಬೈಕ್ ತಳ್ಳುವ ಶಿಕ್ಷೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ