ಭಟ್ಕಳದ ಮದೀನಾ ಕಾಲೋನಿಗೆ ನುಗ್ಗಿದ ಆರು ಜನ ದುಷ್ಕರ್ಮಿಗಳು ಆಕೀಪ್ ಅಧೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬೆದರಿದ ವಿದ್ಯಾರ್ಥಿ ಆಕೀಪ್ 16 ದಿನದ ನಂತರ ಪೊಲೀಸ್ ದೂರು ನೀಡಿದ್ದಾರೆ.
ಮದೀನಾ ಕಾಲೋನಿಯ 2ನೇ ಕ್ರಾಸ್ ಆಕೀಪ್ ಅದೀಮ್ (19) ವಾಸವಾಗಿದ್ದಾರೆ. ಫೆ 10ರ ರಾತ್ರಿ 10.30ಕ್ಕೆ ಅವರ ಮನೆ ಬಳಿ ಆರು ಜನ ಆಗಮಿಸಿದ್ದು, ಏಕಾಏಕಿ ಹಲ್ಲೆ ಮಾಡಿದ್ದಾರೆ. ಆ ಆರು ಜನರಲ್ಲಿ ಮೂವರು ಪರಿಚಿತರಾಗಿದ್ದರು. ಉಳಿದ ಮೂವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಹೀಗಾಗಿ ಪರಿಚಿತರಾದ ಭಟ್ಕಳದ ವಹಾಬ್, ಇರ್ಷಾದ್ ಹಾಗೂ ಉಜೈದ್ ಎಂಬಾತರ ಹೆಸರು ಉಲ್ಲೇಖಿಸಿ ಆಕೀಪ್ ಪೊಲೀಸ್ ದೂರು ನೀಡಿದ್ದಾರೆ. ಪರಿಚಯವಿಲ್ಲದ ಮತ್ತೆ 3 ಜನರೊಂದಿಗೆ ಆಗಮಿಸಿ ಹಲ್ಲೆ ನಡೆದ ಬಗ್ಗೆ ಅವರು ಆರೋಪಿಸಿದ್ದಾರೆ. ಈ ಹೊಡೆದಾಟಕ್ಕೆ ಕಾರಣ ಗೊತ್ತಾಗಿಲ್ಲ.
ಭಟ್ಕಳ ಶಹರ ಠಾಣೆ ಪೊಲೀಸರು ಫೆ 26ರಂದು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿತರ ಹುಡುಕಾಟ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.




