6
  • Latest

ದೃಢೀಕರಣ ನೀಡಲು ಹಿಂದೇಟು: ಪಿಡಿಓ ವಿರುದ್ಧ ಮತ್ತೊಂದು ದೂರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೃಢೀಕರಣ ನೀಡಲು ಹಿಂದೇಟು: ಪಿಡಿಓ ವಿರುದ್ಧ ಮತ್ತೊಂದು ದೂರು!

AchyutKumar by AchyutKumar
in ಸ್ಥಳೀಯ

ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಮೂಜಿಬ್ ಉಸ್ಮಾನ್ ಷರೀಫ್ ಎಂಬಾತರು ಲೋಕಾಯುಕ್ತ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಯಾವುದೇ ಹಿಂಬರಹ ನೀಡದಿರುವುದೇ ದೂರಿನ ಸಾರಾಂಶ!

ADVERTISEMENT

ಜನತಾ ಪ್ಲೋಟಿನ ಮಾಸೂರು ಕ್ರಾಸಿನಲ್ಲಿ ಮೂಜಿಬ್ ಉಸ್ಮಾನ್ ಷರೀಫ್ ಅವರ ಮನೆಯಿದೆ. ಮನೆ ಪಕ್ಕದಲ್ಲಿ ಅವರು ಶೆಡ್ ನಿರ್ಮಿಸಿ ಗ್ಯಾರೇಜ್ ನಡೆಸುತ್ತಾರೆ. ಈ ಗ್ಯಾರೇಜಿಗೆ ಅನುಮತಿ ಅಥವಾ ದೃಢೀಕರಣ ಕೋರಿ ಅವರು ಹೊಲನಗದ್ದೆ ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿದ್ದಾರೆ. ಗ್ಯಾರೇಜ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸುವುದಾಗಿ ಹೇಳುವ ಪಿಡಿಓ ನಾಗರಾಜ ನಾಯ್ಕ ಅವರು ನಿತ್ಯ ಅದೇ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ, ಒಮ್ಮೆಯೂ ಗ್ಯಾರೇಜ್ ಪರಿಶೀಲನೆಗೆ ಬಂದಿಲ್ಲ!

ಯಾವುದೇ ಕಚೇರಿಗೆ ಅರ್ಜಿ ಸಲ್ಲಿಕೆಯಾದ ನಂತರ 15 ದಿನಗಳ ಒಳಗೆ ಹಿಂಬರಹ ನೀಡಬೇಕು ಎಂಬುದು ನಿಯಮ. ಆದರೆ, ಇಲ್ಲಿ ಮೂರು ವರ್ಷ ಕಳೆದರೂ ಹಿಂಬರಹ ಬಂದಿಲ್ಲ. ಜೊತೆಗೆ ಅಗತ್ಯ ಅನುಮತಿಯೂ ಸಿಕ್ಕಿಲ್ಲ. ಗ್ಯಾರೇಜ್ ನಡೆಸುತ್ತಿರುವ ಬಗ್ಗೆ ದೃಢೀಕರಣವನ್ನು ದೊರೆತಿಲ್ಲ. ಇದರಿಂದ ಕಟ್ಟಡ ನವೀಕರಣಕ್ಕೆ ಸಹ ಸಮಸ್ಯೆಯಾಗಿದೆ. ಈ ಹಿನ್ನಲೆ ಮೂಜಿಬ್ ಉಸ್ಮಾನ್ ಷರೀಫ್ ಅವರು ಶುಕ್ರವಾರ ನೋಂದಾಯಿತ ಅಂಚೆ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.

Advertisement. Scroll to continue reading.

`ತನ್ನ ಗ್ಯಾರೇಜ್ ಬೀಳುವ ಸ್ಥಿತಿಯಲ್ಲಿದೆ. ಇದರ ನವೀಕರಣ ಅಗತ್ಯವಿದ್ದು, ಕಳೆದ 5 ವರ್ಷದಿಂದ ಇದರ ಕಾಗದ ಪತ್ರಕ್ಕಾಗಿ ಓಡಾಟ ನಡೆಸುತ್ತಿದ್ದೇನೆ. ಆದರೆ, ಯಾವುದೇ ಕೆಲಸವಾಗಿಲ್ಲ’ ಎಂದು ಮೂಜಿಬ್ ಉಸ್ಮಾನ್ ಷರೀಫ್ ದೂರಿದರು. `ಫೋನ್ ಮಾಡಿ ಬನ್ನಿ ಎಂದು ಪಿಡಿಓ ಹೇಳುತ್ತಾರೆ. ಆದರೆ, ಗ್ರಾ ಪಂ ಕಚೇರಿಯ ಫೋನ್ ನಂ ಹಾಳಾಗಿದೆ. 08386-220282ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗುತ್ತಿಲ್ಲ. ಪಿಡಿಓ ಕಚೇರಿಯಲ್ಲಿದ್ದಾರೆಯೇ? ಎಂದು ಪ್ರಶ್ನಿಸಿ ಅಲ್ಲಿಗೆ ತೆರಳಲು ತೊಂದರೆಯಾಗಿದೆ’ ಎಂದು ವಿವರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸಹ ದೂರು ನೀಡಿದ್ದಾರೆ. ಈ ಹಿಂದೆ ಸಹ ಈ ಪಿಡಿಓ ಕಾರ್ಯವೈಖರಿ ವಿರುದ್ಧ ಸಾಕಷ್ಟು ದೂರುಗಳು ಕೇಳಿ ಬಂದಿದ್ದವು.

Advertisement. Scroll to continue reading.
Previous Post

ಏಳು ಸಾವಿರ ಹಣ ಬಿಡಿಸಲು 6 ಸಾವಿರ ರೂ ಲಂಚ!

Next Post

ಭಿಕ್ಷುಕಿ ಬದುಕಿಗೆ ಆಧಾರ್ ಭಾಗ್ಯ!

Next Post

ಭಿಕ್ಷುಕಿ ಬದುಕಿಗೆ ಆಧಾರ್ ಭಾಗ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ