ಸಿದ್ದಾಪುರದ ತುಕಾರಾಮ ಗೊಂಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದ ಕಾರಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ದೂರವಾದ ಬೇಸರದಿಂದ ತುಕಾರಾಮ ಗೊಂಡ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಿದ್ದಾಪುರದ ನೀಡಗೋಡದ ಮಂಡ್ಲಿಕೊಪ್ಪದಲ್ಲಿ ತುಕಾರಾಮ ಗೊಂಡ (34) ವಾಸವಾಗಿದ್ದರು. ರೈತರಾಗಿದ್ದ ಅವರು ಸರಾಯಿ ಚಟಕ್ಕೆ ಅಂಟಿಕೊAಡಿದ್ದರು. ಅದು ವಿಕೋಪಕ್ಕೆ ತೆರಳಿದ ಪರಿಣಾಮ ಸಂಸಾರದಲ್ಲಿ ಜಗಳ ಸಾಮಾನ್ಯವಾಗಿತ್ತು.
ತುಕಾರಾಮ ಗೊಂಡ ಅವರ ವರ್ತನೆಯಿಂದ ಬೇಸತ್ತ ಅವರ ಪತ್ನಿ ತವರು ಮನೆಗೆ ಹೋಗಿದ್ದರು. ವರ್ಷ ಕಳೆದರೂ ಅವರು ಮರಳಿ ಬಂದಿರಲಿಲ್ಲ. ಮನವೊಲೈಕೆ ಪ್ರಯತ್ನ ಸಹ ಫಲಿಸಿರಲಿಲ್ಲ. ಇದರಿಂದ ತುಕಾರಾಮ ಗೊಂಡ ಇನ್ನಷ್ಟು ಕುಗ್ಗಿದ್ದರು. ಅದೇ ನೋವಿನಲ್ಲಿ ಫೆ 28ರಂದು ಅವರು ಕಳೆನಾಶಕ ಸೇವಿಸಿದರು.
ಇದನ್ನು ನೋಡಿದ ಅವರ ತಂದೆ ಬೂತಾ ಗೊಂಡ ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಮಾರ್ಚ 1ರಂದು ತುಕಾರಾಮ ಗೊಂಡ ಸಾವನಪ್ಪಿದರು.






