ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿರುವ ಬಗ್ಗೆ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದ್ದು, ಮಾರ್ಚ 2ರಂದು ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ಬಂದಿದೆ. ಅದರ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಬಿಸಿ ಗಾಳಿ ಪರಿಸ್ಥಿತಿಯ ಸಾಧ್ಯತೆಗಳು ಹೆಚ್ಚಿದೆ.
ಈ ಹಿನ್ನಲೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಕೆ ಲಕ್ಷ್ಮಿಪ್ರಿಯ ಜನರ ಸುರಕ್ಷತೆಗೆ ಕರೆ ನೀಡಿದ್ದಾರೆ. `ಮಧ್ಯಾಹ್ನ 12ಗಂಟೆಯಿAದ 3ರವರೆಗೆ ಬಿಸಿಲಿನಲ್ಲಿ ಓಡಾಡಾಡಬೇಡಿ’ ಎಂದವರು ಹೇಳಿದ್ದಾರೆ. `ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ನೀರು ಕುಡಿಯಿರಿ. ಸಾಧ್ಯವಾದಷ್ಟು ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸಿ. ಶ್ರಮದಾಯಿಕ ಚಟುವಟಿಕೆ ಮಾಡುವುದನ್ನು ತಪ್ಪಿಸಿ. ಅನಿವಾರ್ಯವಾಗಿ ಹೊರಗೆ ಹೋಗುವುದಿದ್ದರೂ ತಲೆಗೆ ಟೋಪಿ ಅಥವಾ ಛತ್ರಿ ಬಳಸಿ. ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಉಪಯೋಗಿಸಿ’ ಎಂದವರು ಸಲಹೆ ನೀಡಿದ್ದಾರೆ.
`ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಬಿಡಬೇಡಿ. ಸಾಕುಪ್ರಾಣಿಗಳನ್ನು ವಾಹನದೊಳಗೆ ಬಿಡಬೇಡಿ. ಅನಾರೋಗ್ಯ ಎನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಮನೆಯಲ್ಲಿ ತಯಾರಿಸಿದ ಲಸ್ಸಿ, ನಿಂಬೆ ನೀರು, ಮಚ್ಚಿಗೆಯನ್ನು ಹೆಚ್ಚಿಗೆ ಸೇವಿಸಿ’ ಎಂದು ಅವರು ಹೇಳಿದ್ದಾರೆ. `ಈ ಪಾನೀಯಗಳು ದೇಹವನ್ನು ಮರು-ಜಲೀಕರಣ ಮಾಡಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ. `ಪ್ರಾಣಿಗಳಿಗೆ ನೆರಳಿನಲ್ಲಿ ಆಶ್ರಯ ನೀಡಿ. ಅವುಗಳಿಗೆ ಅಗತ್ಯ ನೀರು ಕೊಡಿ. ಮನೆಯನ್ನು ತಂಪಾಗಿರಿಸಿ. ಪರದೆಗಳು, ಶಟರ್ಗಳು ಅಥವಾ ಸನ್ಶೇಡ್ ಬಳಸಿ. ರಾತ್ರಿ ಕಿಟಕಿ ತೆರೆದಿಡಿ’ ಎಂದು ಕರೆ ನೀಡಿದ್ದಾರೆ.
ಅದಾಗಿಯೂ ಯಾವುದೇ ತೊಂದರೆ ಎದುರಾದಲ್ಲಿ ತುರ್ತು ಸಹಾಯಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ಸಂಖ್ಯೆ 1077 ಅಥವಾ 08382229857ಗೆ ಫೋನ್ ಮಾಡಿ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಕ್ಷೆಯೂ ಆಗಿರುವ ಕೆ ಲಕ್ಷ್ಮಿಪ್ರಿಯ ಹೇಳಿದ್ದಾರೆ.






