6
  • Latest
Road closure due to landslide MLA does not come to listen to people's problems even when they call him!

ಭೂ ಕುಸಿತದ ಜೊತೆ ರಸ್ತೆ ಕಡಿತ: ಜನ ಕರೆದರೂ ಸಮಸ್ಯೆ ಆಲಿಸಲು ಬಾರದ ಶಾಸಕ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಭೂ ಕುಸಿತದ ಜೊತೆ ರಸ್ತೆ ಕಡಿತ: ಜನ ಕರೆದರೂ ಸಮಸ್ಯೆ ಆಲಿಸಲು ಬಾರದ ಶಾಸಕ!

AchyutKumar by AchyutKumar
in ರಾಜಕೀಯ
Road closure due to landslide MLA does not come to listen to people's problems even when they call him!

ಎರಡು ವರ್ಷಗಳ ಹಿಂದೆ ಶಿರಸಿ ದೇವನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಲವು ಕಡೆ ಭೂ ಕುಸಿತವಾಗಿದ್ದು, ರಸ್ತೆಗಳೆಲ್ಲವೂ ಹಾಳಾಗಿದೆ. ಆದರೆ, ಈವರೆಗೂ ಶಾಸಕ ಭೀಮಣ್ಣ ನಾಯ್ಕ ಇಲ್ಲಿ ಭೇಟಿ ನೀಡಿಲ್ಲ!

ADVERTISEMENT

ಶಿರಸಿ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಮತ್ತಿಘಟ್ಟ ಕೆಳಗಿನ ಕೇರಿ ಸಮೀಪದ ಹಲವು ಊರುಗಳು ಕನಿಷ್ಟ ಸೌಕರ್ಯವೂ ಇಲ್ಲದೇ ನಲುಗಿದೆ. ಇಲ್ಲಿನ ಜನ ದಟ್ಟ ಕಾಡಿನೆ ಮಧ್ಯೆ ನಿತ್ಯವೂ ಭಯದ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ನೀಡಿದ ಪುಕ್ಕಟ್ಟೆ ಬಸ್ ಪ್ರಯಾಣಕ್ಕೂ ಇಲ್ಲಿನವರು ಐದು ಕಿಮೀ ಘಟ್ಟ ಹತ್ತಬೇಕು. ಗ್ರಾಮಗಳಿಗೆ ಇರುವ ಒಂದು ರಸ್ತೆ ಕಳೆದ ಮಳೆಗಾಲದಲ್ಲಿ ಭೂ ಕುಸಿತವಾಗಿ ಕಂದಕವಾಗಿ ನಿರ್ಮಾಣಗೊಂಡಿದ್ದರೂ ಜನಪ್ರತಿನಿಧಿಗಳು ಒಬ್ಬರೂ ಬರಲಿಲ್ಲ. ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅರ್ಜಿ ಕೊಟ್ಟರೂ ಯಾರೂ ರಸ್ತೆ ನಿರ್ಮಿಸಿ ಕೊಡಲಿಲ್ಲ.

ಶಾಸಕರು ಭೇಟಿ ನೀಡಿದ ಆ ಊರುಗಳಿಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಗುರುವಾರ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಜನ ಶಾಸಕರ ವಿರುದ್ಧ ಸಾಕಷ್ಟು ಆಕ್ರೋಶವ್ಯಕ್ತಪಡಿಸಿದರು. ಮಾಡನಮನೆ, ಉಂಬಳಗೇರಿ, ಗುಂಡಪ್ಪೆ, ನರಸೆಬೈಲ್ ಮೊದಲಾದ ಗ್ರಾಮಸ್ಥರ ಸಮಸ್ಯೆ ಆಲಿಸಿದ ಅವರು ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

Advertisement. Scroll to continue reading.

`ಮಣ್ಣಿನ ರಸ್ತೆಯಲ್ಲಿ ಭೂ ಕುಸಿತದಿಂದಾಗಿ ಬೃಹತ್ ಕಂದಕ ನಿರ್ಮಾಣವಾಗಿದೆ. ಕಳೆದ ಮಳೆಗಾಲದ 15 ದಿನಗಳ ಕಾಲ ದ್ವೀಪವಾಗಿ, ಬೇರೆ ಸಂಪರ್ಕವೇ ಇಲ್ಲವಾಗಿತ್ತು’ ಎಂದು ಜನ ತಮ್ಮ ಸಮಸ್ಯೆ ಬಿಚ್ಚಿಟ್ಟರು. `ಮರದಿಂದ ಬಿದ್ದವನನ್ನು ಕಂಬಳಿಯಲ್ಲಿ ಹೆಗಲಮೇಲೆ ಹೊತ್ತೊಯ್ದರೂ ಆತ ಬದುಕುಳಿಯಲಿಲ್ಲ. ಶಾಸಕ ಭೀಮಣ್ಣರಿಗೆ ವಿಷಯ ತಿಳಿದಿದ್ದರೂ ಏನೂ ಮಾಡಿಲ್ಲ’ ಎಂದು ದೂರಿದರು.

Advertisement. Scroll to continue reading.

`ಮಾಡನಮನೆ, ಉಂಬಳಕೇರಿ, ಗುಂಡಪ್ಪೆ, ನರಸೇಬೈಲ್ ಸೇರಿದಂತೆ 6 ಕ್ಕೂ ಅಧಿಕ ಹಳ್ಳಿಗಳಿಗೆ ಈ ರಸ್ತೆ ಮಾರ್ಗವೊಂದೇ ಸಂಪರ್ಕ ದಾರಿ. ಮತ್ತಿಘಟ್ಟದಿಂದ ಕಿಮ್ಮಾಣಿ ಮೂಲಕ ಅಂಕೋಲಾ ತಾಲೂಕನ್ನು ಈ ರಸ್ತೆ ಸಂಪರ್ಕಿಸುತ್ತದೆ. ಮಾರ್ಗದ ಅನೇಕ ಕಡೆಗಳಲ್ಲಿ ಸೇತುವೆ ಇರದ ಕಾರಣ ಮಳೆಗಾಲದಲ್ಲಿ ಸಂಪರ್ಕ ಕಡಿತವಾಗುತ್ತದೆ. ಜುಲೈನಲ್ಲಿ ಸುರಿದ ಮಳೆಗೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಜನ ಓಡಾಟಕ್ಕೆ ಇದೀಗ ಸರಿಯಾದ ದಾರಿಯೂ ಇಲ್ಲಿಲ್ಲ’ ಎಂದು ಗೋಪಾಲ ಸಿದ್ಧಿ, ರೇಣುಕಾ ಸಿದ್ದಿ, ಗಣಪತಿ ಸಿದ್ದಿ, ವಿನಯ ಹೆಗಡೆ ಅಳಲು ತೋಡಿಕೊಂಡರು.

ಕರೆದಾಗ ಬರುವ ಶಾಸಕರು ಕೋಳಿಯಲ್ಲ!
`ಸ್ವಲ್ಪ ದಿನದ ಹಿಂದೆ ಶಾಸಕ ಭೀಮಣ್ಣ ನಾಯ್ಕ ಮತ್ತೀಘಟ್ಟಕ್ಕೆ ಭೇಟಿ ನೀಡಿದ್ದರು. ಆಗಲೇ ಇಲ್ಲಿಗೂ ಶಾಸಕರನ್ನು ಕರೆಯಿಸುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಜನ ಮನವಿ ಮಾಡಿದ್ದರು. `ನೀವು ಕರೆದ ಕೂಡಲೇ ಬರಲು ಶಾಸಕರು ಕೋಳಿಯಲ್ಲ’ ಎಂದು ಮರಿ ಪುಡಾರಿಗಳು ಉಡಾಫೆ ಮಾತನಾಡಿದ ಬಗ್ಗೆ ಊರಿನವರು ಆಕ್ರೋಶವ್ಯಕ್ತಪಡಿಸಿದರು.

Previous Post

ಡೀಸಿ ಹೆಸರಿನಲ್ಲಿ ದೇವಿ ಪೂಜೆ!

Next Post

ಹೋರಾಟಗಾರ್ತಿಯ ಮನವಿ ಆಲಿಸಿದ KAS ಅಧಿಕಾರಿ: ತಡರಾತ್ರಿಯ ಹೋರಾಟಕ್ಕೆ ತಾತ್ಕಾಲಿಕ ತಡೆ!

Next Post
KAS officer listens to protester's plea Temporary halt to late-night protest!

ಹೋರಾಟಗಾರ್ತಿಯ ಮನವಿ ಆಲಿಸಿದ KAS ಅಧಿಕಾರಿ: ತಡರಾತ್ರಿಯ ಹೋರಾಟಕ್ಕೆ ತಾತ್ಕಾಲಿಕ ತಡೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ