6
  • Latest
Chicken Anka: The miscreants escaped with the rooster!

ಸ್ಮಶಾನ ಅಂಚಿನಲ್ಲಿ ಕೋಳಿ ಅಂಕ – ನದಿ ಬದಿಯಲ್ಲಿ ಅಂದರ್ ಬಾಹರ್: ಹೊಟೇಲ್ ಎದುರು ಜೋರು ಮಟ್ಕಾ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸ್ಮಶಾನ ಅಂಚಿನಲ್ಲಿ ಕೋಳಿ ಅಂಕ – ನದಿ ಬದಿಯಲ್ಲಿ ಅಂದರ್ ಬಾಹರ್: ಹೊಟೇಲ್ ಎದುರು ಜೋರು ಮಟ್ಕಾ!

AchyutKumar by AchyutKumar
March 7, 2025
in ಸ್ಥಳೀಯ
Chicken Anka: The miscreants escaped with the rooster!
advt advt advt
ADVERTISEMENT

ಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮವಾಗಿದೆ. ಭಟ್ಕಳದಲ್ಲಿ ಮಟ್ಕಾ ಆಡಿಸುವವನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಹೊನ್ನಾವರದ ಭಾಸ್ಕೇರಿ ಗ್ರಾಮದ ಗುಡ್ಡಬಾಳ ಸ್ಮಶಾನದ ಬಳಿ ಮಾರ್ಚ 5ರ ಸಂಜೆ ಹುಂಜಗಳ ಕಾದಾಟಕ್ಕೆ ಬಿಡಲಾಗಿತ್ತು. ಗೆಲ್ಲುವ ಹುಂಜದ ಮೇಲೆ ಕೆಲವರು ಹಣ ಕಟ್ಟಿ ಜೂಜಾಟ ನಡೆಸುತ್ತಿದ್ದರು. ಇದನ್ನು ಅರಿತ ತನಿಖಾ ಪಿಎಸ್‌ಐ ರಾಜಶೇಖರ್ ವಂದಲಿ ದಾಳಿ ನಡೆಸಿದರು. ಆಗ ದೊಡ್ಡಹಿತ್ಲ ಹೊಸಕಾಳಿಯ ಮಾರುತಿ ನಾಯ್ಕ, ಮಹೇಂದ್ರ ಮೊಗೇರ, ಮೇಲಿನ ಇಡಗುಂಜಿಯ ವಿನಾಯಕ ನಾಯ್ಕ, ಜಗದೀಶ ನಾಯ್ಕ, ರಾಘವೇಂದ್ರ ನಾಯ್ಕ, ಭಾಸ್ಕೇರಿಯ ಮಂಜುನಾಥ ಮುಕ್ರಿ ಅಲ್ಲಿ ಕಾಣಿಸಿದರು.

ADVERTISEMENT
ADVERTISEMENT

ಆ ಪೈಕಿ ರಾಘವೇಂದ್ರ ನಾಯ್ಕ, ಭಾಸ್ಕೇರಿಯ ಮಂಜುನಾಥ ಮುಕ್ರಿ ಓಡಿ ಹೋಗಿ ತಪ್ಪಿಸಿಕೊಂಡರು. ಉಳಿದವರು ಹುಂಜದ ಜೊತೆ ಅಲ್ಲಿಯೇ ಸಿಕ್ಕಿಬಿದ್ದರು. 400ರೂ ಮೌಲ್ಯದ ಕೋಳಿಯ ಜೊತೆ ಅವರ ಬಳಿಯಿದ್ದ 3900ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಆ ಆರು ಜನರ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.

Advertisement. Scroll to continue reading.
Advertisement. Scroll to continue reading.

ಮುಂಡಗೋಡದ ಇಂದಿರಾ ನಗರದ ಹಳ್ಳದ ಪಕ್ಕದ ಖಾಲಿ ಜಾಗದಲ್ಲಿ ಅದೇ ಊರಿನ ರಫಿಕ್‌ಸಾಬ್ ಹಿಂಡಿಸಗಿರಿ, ಸಂತೋಷ ಬೋವಿ, ಲಕ್ಷö್ಮಣ ಬೋವಿವಡ್ಡರ್ ಹಾಗೂ ಯಲ್ಲಪ್ಪ ಮಾನೆ ಅಂದರ್ ಬಾಹರ್ ಆಡುತ್ತಿದ್ದರು. ಮಾರ್ಚ 5ರ ರಾತ್ರಿ 1.30ರ ಆಸುಪಾಸಿನಲ್ಲಿ ಅಲ್ಲಿಗೆ ಲಗ್ಗೆಯಿಟ್ಟ ಮುಂಡಗೋಡು ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ ಮೂವರನ್ನು ಬಂಧಿಸಿದರು. ಆದರೆ, ಯಲ್ಲಪ್ಪ ಮಾನೆ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಪರಾರಿಯಾದರು. ಸಿಕ್ಕಿಬಿದ್ದವರ ಬಳಿಯಿದ್ದ 4510ರೂ ಹಣ, 52 ಇಸ್ಪಿಟ್ ಎಲೆಯನ್ನು ಪೊಲೀಸರು ವಶಕ್ಕೆ ಪಡೆದರು. ಎಲ್ಲರ ಹೆಸರು ವಿವರದೊಂದಿಗೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.

ಭಟ್ಕಳದ ಸಂಶುದ್ಧೀನ್ ಸರ್ಕಲ್ ಬಳಿಯ ಹೊಟೇಲ್ ಎದುರು ಮಟ್ಕಾ ಆಡಿಸುತ್ತಿದ್ದ ನಾಗೇಂದ್ರ ಗೊಂಡ ವಿರುದ್ಧ ಪೊಲೀಸರು ಮಾರ್ಚ 6ರಂದು ಪ್ರಕರಣ ದಾಖಲಿಸಿದರು. ಗೊಂಡರಕೇರಿ ಕಾರಗದ್ದೆಯ ನಾಗೇಂದ್ರ ಗೊಂಡ ತಮ್ಮ ಬೀಡಾ ಅಂಗಡಿಯಲ್ಲಿ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದರು. ಅವರ ಬಳಿಯಿದ್ದ 1100ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಪಿಎಸ್‌ಐ ಶಾಂತಿನಾಥ ಪಾಸಾನೆ ಕಾನೂನು ಕ್ರಮ ಜರುಗಿಸಿದರು.

 

ShareSendTweetShare
ADVERTISEMENT
Previous Post

ಸರಸರನೆ ಬಂದವರು ಸರ ಕಿತ್ತು ಓಡಿದರು!

Next Post

ತುಷ್ಠೀಕರಣ ನೀತಿ ವಿರೋಧಿಸಿದ ಬಿಜೆಪಿ ಮಂಡಳಾಧ್ಯಕ್ಷ!

Next Post
BJP Mandal President opposes appeasement policy!

ತುಷ್ಠೀಕರಣ ನೀತಿ ವಿರೋಧಿಸಿದ ಬಿಜೆಪಿ ಮಂಡಳಾಧ್ಯಕ್ಷ!

ಬೈಕಿನಿಂದ ಬಿದ್ದ ರೈಲ್ವೆ ಮಾನ್ ಸಾವು!

Sagavani tree theft: The lawyer who questioned the thieves was threatened!

ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.