6
  • Latest
The District Magistrate did as he was told A municipal officer who did what he was told!

ನುಡಿದಂತೆ ನಡೆದ ಜಿಲ್ಲಾಧಿಕಾರಿ: ಹೇಳಿದ ಕೆಲಸ ಮಾಡಿ ತೋರಿಸಿದ ನಗರಸಭೆ ಅಧಿಕಾರಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನುಡಿದಂತೆ ನಡೆದ ಜಿಲ್ಲಾಧಿಕಾರಿ: ಹೇಳಿದ ಕೆಲಸ ಮಾಡಿ ತೋರಿಸಿದ ನಗರಸಭೆ ಅಧಿಕಾರಿ!

AchyutKumar by AchyutKumar
March 8, 2025
in ಸ್ಥಳೀಯ
The District Magistrate did as he was told A municipal officer who did what he was told!
advt advt advt
ADVERTISEMENT

ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ ಗುಡ್ಡಳ್ಳಿಗೆ ಬಂದ ಬುಲೇರೋ ವಾಹನ ಏರಿದ ಶಾಲಾ ಮಕ್ಕಳು ಕುಣಿದು ಕುಪ್ಪಳಿಸಿದ್ದಾರೆ. ಇನ್ಮುಂದೆ ಪ್ರತಿ ದಿನ ಎರಡು ಬಾರಿ ಗುಡ್ಡಳ್ಳಿಗೆ ಈ ವಾಹನ ಓಡಾಡಲಿದೆ. ಆ ಊರಿನವರ ಸರಕು-ಸಾಮಗ್ರಿಗಳ ಸಾಗಾಣಿಕೆಗೆ ನಗರಸಭೆಯ ಈ ವಾಹನ ವ್ಯವಸ್ಥೆ ನೆರವಾಗಲಿದೆ.

ಗುಡ್ಡಳ್ಳಿ ಗ್ರಾಮಕ್ಕೆ ತೆರಳಲು ಈವರೆಗೂ ಸರಿಯಾದ ರಸ್ತೆ ಸಂಪರ್ಕವಿರಲಿಲ್ಲ. ಕಾಯಿಲೆಯಿಂದ ಬಳಲುತ್ತಿರುವವರು ಆಸ್ಪತ್ರೆ ಸೇರಲು ಸಮಸ್ಯೆ ಅನುಭವಿಸುತ್ತಿದ್ದರು. ಊರಿನಲ್ಲಿ ಸಾವು ಉಂಟಾದಾಗ ಸ್ಮಶಾನಕ್ಕೆ ಶವ ಸಾಗಿಸಲು ಸಹ ಸಮಸ್ಯೆಯಾಗಿತ್ತು. ಈ ಎಲ್ಲಾ ವಿಷಯಗಳ ಬಗ್ಗೆ ಗ್ರಾಮದ ಜನ ಕಂಡ ಕಂಡವರ ಕಾಲಿಗೆ ಬಿದ್ದು ಸಮಸ್ಯೆ ಬಗೆಹರಿಸುವಂತೆ ಅಂಗಲಾಚುತ್ತಿದ್ದರು. ಉತ್ತರ ಕನ್ನಡ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ಬಂದಾಗಲೆಲ್ಲ ಗುಡ್ಡಳ್ಳಿಯ ಜನ ಅಧಿಕಾರಿಗಳನ್ನು ಭೇಟಿ ಮಾಡಿ ಊರಿನ ಸಮಸ್ಯೆ ಹೇಳುತ್ತಿದ್ದರು. ಆದರೆ, ಯಾವ ಅಧಿಕಾರಿಯೂ ಅಲ್ಲಿನವರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ADVERTISEMENT
ADVERTISEMENT

ಅದಾಗಿಯೂ, ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆ ಲಕ್ಷ್ಮೀಪ್ರಿಯಾ ಅವರನ್ನು ಗುಡ್ಡಳ್ಳಿಯ ಜನ ಭೇಟಿ ಮಾಡಿ ಊರಿನ ಬಗ್ಗೆ ಹೇಳಿಕೊಂಡಿದ್ದರು. ಅವರ ಮನವಿ ಸ್ವೀಕರಿಸಿದ ಲಕ್ಷ್ಮೀಪ್ರಿಯಾ ಜನವರಿ 17ರಂದು ದಿಢೀರ್ ಆಗಿ ಆ ಊರಿಗೆ ಭೇಟಿ ನೀಡಿದ್ದರು. ಗುಡ್ಡಳ್ಳಿ ಊರಿನವರ ಸಮಸ್ಯೆಯನ್ನು ಕಂಡ ಅವರು ಅಲ್ಲಿನವರ ಸ್ಥಿತಿ ಕಂಡು ಮರುಕವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿದ್ದರೂ ಕನಿಷ್ಠ ಸಂಪರ್ಕ ವ್ಯವಸ್ಥೆಯೂ ಇಲ್ಲದ ಊರಿನ ಸ್ಥಿತಿ ಸುಧಾರಣೆಗೆ ಶ್ರಮಿಸಿದರು.

ಜನರ ಬೇಡಿಕೆ ಅನ್ವಯ ಊರಿಗೆ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಎಲ್ಲಾ ಬಗೆಯ ಪ್ರಯತ್ನ ನಡೆಸಿದರು. ಅದು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಇದ್ದರೂ ಜನರ ಓಡಾಟಕ್ಕೆ ಅನುಕೂಲವಾಗುವಂತೆ ನಗರಸಭೆ ವಾಹನ ಓಡಾಟಕ್ಕೆ ಸೂಚನೆ ನೀಡಿದರು. ಜೊತೆಗೆ ಅಲ್ಲಿನ ಶಾಲೆಗೆ ಹೊಸ ರೂಪ ನೀಡಲು ಸಂಕಲ್ಪಿಸಿದರು. ಮುಖ್ಯವಾಗಿ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗದ0ತೆ ಮುನ್ನಚ್ಚರಿಕೆವಹಿಸಿದರು.

Advertisement. Scroll to continue reading.

ಇದೆಲ್ಲದರ ಪರಿಣಾಮವಾಗಿ ನಗರಸಭೆ ಪೌರಾಯುಕ್ತ ಜಗದೀಶ ಹುಲಿಗಜ್ಜೆ ಹಂತ ಹಂತವಾಗಿ ಗುಡ್ಡಳ್ಳಿ ಅಭಿವೃದ್ಧಿ ಕೆಲಸಕ್ಕೆ ಮುನ್ನುಡಿಯಾದರು. ಕಾಲುದಾರಿಯಲ್ಲಿನ ಉಬ್ಬು-ತಗ್ಗುಗಳನ್ನು ಸಮದಟ್ಟು ಮಾಡಿದರು. ಲೋಕೋಪಯೋಗಿ ಇಲಾಖೆಯವರನ್ನು ಸಂಪರ್ಕಿಸಿ ಮಂಜೂರಿಯಾದ 1.2ಕಿಮೀ ದೂರದವರೆಗಿನ ರಸ್ತೆ ನಿರ್ಮಾಣವನ್ನು ನೆನಪಿಸಿದರು. ಮುಂದಿನ ಹಾದಿಯಲ್ಲಿ ಅರಣ್ಯ ನಾಶವಾಗದಂತೆ ಎಚ್ಚರವಹಿಸಿ ನಗರಸಭೆಯ ಬುಲೇರೋ ವಾಹನ ಓಡಾಟಕ್ಕೆ ಅಗತ್ಯವಿರುವಷ್ಟು ರಸ್ತೆ ಮಾಡಿಕೊಂಡರು.

Advertisement. Scroll to continue reading.

ಇದರೊ0ದಿಗೆ ನಗರಸಭೆ ಅನುದಾನದಲ್ಲಿ ಶಾಲೆಗೆ ಬಣ್ಣ ಬಡಿದರು. ಜನರ ಅನುಕೂಲಕ್ಕಾಗಿ ಅಲ್ಲಿದ್ದ ಬಾವಿ ಸ್ವಚ್ಛಗೊಳಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದರು. ಸದ್ಯ ನಿತ್ಯ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 5 ಗಂಟೆಗೆ ನಗರಸಭೆ `ನಗರ ರಕ್ಷಕ’ ವಾಹನ ಗುಡ್ಡಳ್ಳಿಗೆ ಹೋಗಿ ಬರಲಿದೆ. ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ತುರ್ತು ಸಮಯದಲ್ಲಿಯೂ ಆ ವಾಹನವನ್ನು ಗುಡ್ಡಳ್ಳಿ ಜನರ ಬಳಕೆಗೆ ನೀಡಲು ಕಾರವಾರ ನಗರಸಭೆ ನಿರ್ಧರಿಸಿದೆ.

 

ShareSendTweetShare
ADVERTISEMENT
Previous Post

ಹರೇ ರಾಮ | ರಾಘವೇಶ್ವರ ಶ್ರೀ ಇನ್ನೂ ನಿರಾಳ!

Next Post

ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!

Next Post
That's a JCB digging the soil.. This is a lorry carrying iron A hawker is bluffing the police!

ಅದು ಮಣ್ಣು ಅಗೆದ ಜೆಸಿಬಿ.. ಇದು ಕಬ್ಬಿಣ ಸಾಗಿಸಿದ ಲಾರಿ: ಪೊಲೀಸರಿಗೆ ಯಾಮಾರಿಸುತ್ತಿರುವ ಗುಜುರಿ ವ್ಯಾಪಾರಿ!

Part-time service in an aided school High Court makes woman's job permanent!

ಅನುದಾನಿತ ಶಾಲೆಯಲ್ಲಿ ಅರೆಕಾಲಿಕ ಸೇವೆ: ಮಹಿಳೆಯ ಕೆಲಸ ಖಾಯಂ ಮಾಡಿದ ಹೈಕೋರ್ಟ ನ್ಯಾಯಮೂರ್ತಿ!

AYUSH Department to work on Sundays Free camp on that day!

ಭಾನುವಾರವೂ ಕೆಲಸ ಮಾಡುವ ಆಯುಷ್ ಇಲಾಖೆ: ಆ ದಿನ ಉಚಿತ ಶಿಬಿರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.