ಅನುದಾನಿತ ಶಾಲೆಯ ಗ್ರಂಥಾಲಯದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ಗ್ರಂಥಪಾಲಕಿಯ ಹುದ್ದೆ ಖಾಯಂ ಮಾಡುವಂತೆ ಹೈಕೋರ್ಟ ನಿರ್ದೇಶನ ನೀಡಿದೆ. ಹೀಗಾಗಿ ಕುಮಟಾದ ಎ ವಿ ಬಾಳಿಗಾ ಕಾಲೇಜಿನಲ್ಲಿ ತಾತ್ಕಾಲಿಕ ಹುದ್ದೆಯ ಅಡಿ ಕೆಲಸ ಮಡೆದಿದ್ದ ನಿರ್ಮಲಾ ಹಿರೇಮಠ ಅವರು ಅಲ್ಲಿನ ಖಾಯಂ ನೌಕರರಾಗಲಿದ್ದಾರೆ.
ಕುಮಟಾದ ನಿರ್ಮಲಾ ಹಿರೇಮಠ ಅವರು ಕುಮಟಾದ ಕೆನರಾ ಕಾಲೇಜ್ ಸೊಸೈಟಿ ನಡೆಸುತ್ತಿದ್ದ ಕಾಲೇಜಿನಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಅವರು 2004ರ ಜುಲೈ 19ರಂದು ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಗ್ರಂಥಪಾಲಕರಾಗಿ ನೇಮಕವಾಗಿದ್ದರು. 2010ರಲ್ಲಿ ಮಂಜೂರಿಯಾದ ಖಾಲಿ ಹುದ್ದೆಗೆ ಅವರು ಅರ್ಜಿ ಸಲ್ಲಿಸಿದ್ದರು. ನಿರ್ಮಲಾ ಅವರ ಸೇವೆಗಳನ್ನು ಕ್ರಮಬದ್ಧಗೊಳಿಸಲು ಸರ್ಕಾರಕ್ಕೆ ಶಿಫಾರಸು ರವಾನೆಯಾದರೂ ಅದು ಪರಿಗಣನೆಗೆ ಬಂದಿರಲಿಲ್ಲ.
ಲೈಬ್ರರಿಯನ್ ಹುದ್ದೆ ಸೇರಿದಂತೆ ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬ0ಧಿಸಿದ0ತೆ 2023ರ ಫೆ 8ರಂದು ನೇಮಕಾತಿ ಅಧಿಸೂಚನೆ ಬಂದಿತು. ಈ ವೇಳೆ ನಿರ್ಮಲಾ ಹಿರೇಮಠ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಮಂಜೂರಾದ ಹುದ್ದೆಯಲ್ಲಿ 21 ವರ್ಷಗಳ ಅವಿರತ ಸೇವೆ ಸಲ್ಲಿಸಿರುವುದನ್ನು ಅವರು ಗಮನಿಸಿದರು. ಅವರ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಪ್ರಕರಣವನ್ನು ಸಕ್ರಮಗೊಳಿಸಲು ಮೂರು ತಿಂಗಳ ಕಾಲಾವಕಾಶ ನೀಡಿದರು.
ಈ ಹಿಂದೆ ನಡೆದಿದ್ದ ಸುಪ್ರೀಂ ಕೋರ್ಟಿನಲ್ಲಿ ನಡೆದ ಉಮಾದೇವಿ ಪ್ರಕರಣವನ್ನು ಅಧ್ಯಯನ ನಡೆಸಿದ ನ್ಯಾಯಮೂರ್ತಿಗಳು `ನಿರ್ಮಲಾ ಹಿರೇಮಠ ಅವರು ಉಮಾದೇವಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನಿಯಮಾವಳಿಯಂತೆ ಕಾಯ್ದಿರಿಸಲು ಅಗತ್ಯವಿರುವ ಎಲ್ಲಾ ಮಾನದಂಡಗಳಿಗೆ ಸರಿಹೊಂದುತ್ತಾರೆ’ ಎಂದು ಹೇಳಿದರು. ಅನುದಾನಿತ ಕಾಲೇಜಿನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಗ್ರಂಥಪಾಲಕಿ ನಿರ್ಮಲಾ ಹಿರೇಮಠ್ ಅವರ ಮನವಿಯನ್ನು ಪರಿಗಣಿಸಿ’ ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.







