ಕುಮಟಾ, ಬನವಾಸಿ ಹಾಗೂ ಸಿದ್ದಾಪುರದಲ್ಲಿ ಅಕ್ರಮ ಮದ್ಯದಂಗಡಿ ಹಾಗೂ ಮಾದಕ ವ್ಯಸನ ಸೇವಿಸಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಸಿದ್ದಾಪುರದ ಕಾನಗೋಡಿನಲ್ಲಿ ಲೋಕೇಶ ರಾಮಾ ನಾಯ್ಕ ತಮ್ಮ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದರು. ಮಾರ್ಚ 13ರಂದು ಸಿದ್ದಾಪುರ ಪಿಎಸ್ಐ ಗೀತಾ ಶಿರ್ಶಿಕರ್ ದಾಳಿ ನಡೆಸಿ ಸರಾಯಿ ಮಾರಾಟಕ್ಕೆ ತಡೆ ಒಡ್ಡಿದರು. ಸರಾಯಿ ಮಾರಾಟದಿಂದ ಗಳಿಸಿದ್ದ ಹಣ, ಟ್ರೆಟ್ರಾ ಪ್ಯಾಕ್ ಸೇರಿ ಹಲವು ಪರಿಕ್ಕರ ವಶಕ್ಕೆ ಪಡೆದ ಅವರು ಪ್ರಕರಣ ದಾಖಲಿಸಿದರು.
ಶಿರಸಿ ಕೋರ್ಲಕಟ್ಟಾದ ಪರಶುರಾಮ ಚಲವಾದಿ ಹುಸೇರಿ-ಅಂಡಗಿ ರಸ್ತೆ ಅಂಚಿನಲ್ಲಿ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದರು. ಬನವಾಸಿ ಪಿಎಸ್ಐ ಚಂದ್ರಕಲಾ ಪತ್ತಾರ್ ಅವರು ಮಾರ್ಚ 13ರಂದು ದಾಳಿ ನಡೆಸಿ ಅಲ್ಲಿನ ವ್ಯಾಪಾರಕ್ಕೆ ತಡೆವೊಡ್ಡಿದರು. ಶೆಡ್ಡಿನಲ್ಲಿದ್ದ ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.
ಇನ್ನೂ ಕುಮಟಾ ಹೊಲನಗದ್ದೆಯ ನಿತಿನ್ ಹರಿಕಂತ್ರ ಮಾರ್ಚ 11ರಂದು ಗಾಂಜಾ ನಶೆಯಲ್ಲಿದ್ದಾಗ ಪಿಎಸ್ಐ ರವಿ ಗುಡ್ಡಿ ಅವರನ್ನು ವಶಕ್ಕೆ ಪಡೆದರು. ಕಡ್ಲೆ ಗೌಂಡಿನ ಒಳಗೆ ತೂರಾಡುತ್ತಿದ್ದ ನಿತಿನ್ ಹರಿಕಂತ್ರರನ್ನು ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢವಾದ ಹಿನ್ನಲೆ ಪೊಲೀಸ್ ಪ್ರಕರಣವನ್ನು ದಾಖಲಿಸಿದರು.






