6
  • Latest
Holi brawl: Cheers for the MLAs.. defiance for the police!

ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಹೋಳಿ ಹೊಡೆದಾಟ: ಶಾಸಕರಿಗೆ ಜೈಕಾರ.. ಪೊಲೀಸರಿಗೆ ಧಿಕ್ಕಾರ!

AchyutKumar by AchyutKumar
in ವಿಡಿಯೋ
Holi brawl: Cheers for the MLAs.. defiance for the police!

ಯಲ್ಲಾಪುರದ ಕಿರವತ್ತಿಯಲ್ಲಿ ಹೋಳಿ ಆಚರಣೆ ವೇಳೆ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಕೊನೆಗೆ ರಾಜಿ-ಸಂದಾನದ ಮೂಲಕ ಅಂತ್ಯವಾಗಿದೆ.

ADVERTISEMENT

ಲಭ್ಯವಿರುವ ಮಾಹಿತಿ ಪ್ರಕಾರ ಹೋಳಿ ಹಬ್ಬದ ವೇಳೆ ದೊಡ್ಡದಾಗಿ ಮೈಕ್ ಹಚ್ಚಲಾಗಿತ್ತು. ಮೈಕಿನ ಸದ್ದು ಕಡಿಮೆ ಮಾಡುವಂತೆ ಪೊಲೀಸರು ತಾಕೀತು ಮಾಡಿದ್ದರು. ಇದೇ ವಿಷಯವಾಗಿ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿಗೆ ಮಾತು ಬೆಳೆಯಿತು. ಕೆಲವರು ಪೊಲೀಸ್ ಅಧಿಕಾರಿಯೊಬ್ಬರನ್ನು ಹಿಡಿದು ತಳ್ಳಾಟ ನಡೆಸಿದರು.

ಪರಿಸ್ಥಿತಿ ಕೈ ಮೀರಿರುವುದನ್ನು ಅರಿತ ಪೊಲೀಸರು ಒಂದಷ್ಟು ಜನರನ್ನು ಹಿಡಿದು ಠಾಣೆಗೆ ತಂದರು. ಗಲಾಟೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಕಾಲು ಮುರಿದ ಬಗ್ಗೆ ಸುದ್ದಿಯಿದೆ. ಆದರೆ, ಖಚಿತವಾಗಿಲ್ಲ. ಈ ನಡುವೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ಜನ ಜಮಾಯಿಸಿದರು. ಈ ವೇಳೆ ಸಾಕಷ್ಟು ಗೊಂದಲದ ವಾತಾವರಣ, ಮಾತಿನ ಚಕಮಕಿ ನಡೆಯಿತು. ಕೆಲವರು ಪೊಲೀಸರಿಗೆ ಧಿಕ್ಕಾರ ಎಂಬ ಘೋಷಣೆಗಳನ್ನು ಮೊಳಗಿಸಿದರು.

Advertisement. Scroll to continue reading.

ಶನಿವಾರ ಸಂಜೆ 5 ಗಂಟೆಯಿoದ ರಾತ್ರಿ 10 ಗಂಟೆಯವರೆಗೂ ಯಲ್ಲಾಪುರ ಪೊಲೀಸ್ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನ ಜಮಾಯಿಸಿದ್ದರು. ಹೊಡೆದಾಟ ಪ್ರಕರಣದಲ್ಲಿ ರಾಜಕೀಯ ದುರಿಣರು-ಪ್ರಭಾವಿಗಳ ಹೆಸರು ಕೇಳಿಬಂದಿದ್ದು, ಕೊನೆಗೆ ರಾಜಿಸೂತ್ರಕ್ಕೆ ಎಲ್ಲರೂ ಒಪ್ಪಿದರು. `ಶಾಂತಿ ಕಾಪಾಡೋಣ’ ಎಂಬ ಸಲಹೆ ನೀಡಿ, ಶಾಸಕ ಶಿವರಾಮ ಹೆಬ್ಬಾರ್ ಈ ಪ್ರಕರಣದ ಮದ್ಯಸ್ಥಿಕೆವಹಿಸಿದರು. ತಡರಾತ್ರಿಯ ವೇಳೆ ಶಾಸಕ ಶಿವರಾಮ ಹೆಬ್ಬಾರ್ ಆಗಮಿಸಿ ರಾಜಿ ಮಾಡಿಸಿದರು. ಅದಾದ ನಂತರವೂ `ಪೊಲೀಸರಿಗೆ ಧಿಕ್ಕಾರ.. ಶಿವರಾಮ ಹೆಬ್ಬಾರ್’ಗೆ ಜೈಕಾರ’ ಎಂಬ ಧ್ವನಿ ಕೇಳಿಸಿತು.

Advertisement. Scroll to continue reading.

`ಪೊಲೀಸರು ಯಾರಿಗೂ ಹೊಡೆದಿಲ್ಲ. ಪೊಲೀಸರ ಮೇಲೆಯೂ ಹಲ್ಲೆ ನಡೆದಿಲ್ಲ’ ಎಂದು ಪೊಲೀಸ್ ಮೂಲಗಳು ಸ್ಪಷ್ಠನೆ ನೀಡಿವೆ. `ಸಣ್ಣ ಪ್ರಮಾಣದ ಗಲಾಟೆ ನಡೆದಿದ್ದು, ಅದು ಬಗೆಹರಿದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Previous Post

ದೇವಿ ಜಾತ್ರೆಗೆ ಹೋದವರಿಗೆ ಪರರ ಲಿಂಗ ದರ್ಶನ: ಪ್ರಶ್ನಿಸಿದ ದಂಪತಿಗೆ ಫೋನ್ ಬೆದರಿಕೆ!

Next Post

ಇಡ್ಲಿ ಕಫೆಗೆ ಗುದ್ದಿದ ಲಾರಿ: ಎರಡು ವಾಹನ ಜಖಂ!

Next Post
Lorry hits Idli cafe Two vehicles damaged!

ಇಡ್ಲಿ ಕಫೆಗೆ ಗುದ್ದಿದ ಲಾರಿ: ಎರಡು ವಾಹನ ಜಖಂ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ