6
  • Latest
A curse on a friend who doesn't cook!

ಬಿಯರ್ ಬಾಟಲಿ ಒಡೆದವನ ವಿರುದ್ಧ ಪೊಲೀಸ್ ದೂರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಯರ್ ಬಾಟಲಿ ಒಡೆದವನ ವಿರುದ್ಧ ಪೊಲೀಸ್ ದೂರು!

AchyutKumar by AchyutKumar
March 18, 2025
in ಸ್ಥಳೀಯ
A curse on a friend who doesn't cook!
advt advt advt
ADVERTISEMENT

ಆರು ತಿಂಗಳ ಹಿಂದೆ ಪತ್ನಿ ಪೀಡಿಸಿದ ಈಶ್ವರ ನಾಯ್ಕರಿಗೆ ವೆಂಕಟೇಶ ನಾಯ್ಕರು ಎಚ್ಚರಿಕೆ ನೀಡಿದ್ದು, ಅದೇ ದ್ವೇಷದಲ್ಲಿದ್ದ ಈಶ್ವರ ನಾಯ್ಕ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರ ತಲೆಗೆ ಹೊಡೆದಿದ್ದಾರೆ. ಇದರಿಂದ ಬಿಯರ್ ಬಾಟಲಿ ಒಡೆದಿದ್ದು, ವೆಂಕಟೇಶ ನಾಯ್ಕರ ತಲೆ ಜೊತೆ ಹಣೆಗೂ ಪೆಟ್ಟಾಗಿದೆ.

ಭಟ್ಕಳದ ಬೈಲೂರು ಗಣಪಯ್ಯನಮನೆ ದೊಡ್ಡಬೆಲಸೆಯ ವೆಂಕಟೇಶ ನಾಯ್ಕರು ವಾಸವಾಗಿದ್ದಾರೆ. ದೊಡ್ಡಬೆಲಸೆಯ ಈಶ್ವರ ನಾಯ್ಕ ಆರು ತಿಂಗಳ ಹಿಂದೆ ವೆಂಕಟೇಶ ನಾಯ್ಕರ ಪತ್ನಿ ಬೇಬಿ ಅವರಿಗೆ ಕಾಟ ಕೊಟ್ಟಿದ್ದರು. ಪತ್ನಿಯನ್ನು ಕೂಗಿ ಕರೆದ ಕಾರಣ ವೆಂಕಟೇಶ ನಾಯ್ಕರು ಈಶ್ವರ ನಾಯ್ಕರಿಗೆ ಅದೇ ದಿನ ಎಚ್ಚರಿಕೆ ನೀಡಿ, ಸುಮ್ಮನೆ ಬಿಟ್ಟಿದ್ದರು.

Advertisement. Scroll to continue reading.
ADVERTISEMENT
ADVERTISEMENT

ಆ ದಿನ ಸುಮ್ಮನೆ ಹೋಗಿದ್ದ ಈಶ್ವರ ನಾಯ್ಕ ಅವರು ವೆಂಕಟೇಶ ನಾಯ್ಕರ ವಿರುದ್ಧ ಕಿಡಿಕಾರುತ್ತಿದ್ದರು. ದ್ವೇಷ ಭಾವನೆಯಲ್ಲಿದ್ದ ಈಶ್ವರ ನಾಯ್ಕ ವೆಂಕಟೇಶ ನಾಯ್ಕರನ್ನು ಗುರಾಯಿಸಿ ನೋಡುವುದು ಸಾಮಾನ್ಯವಾಗಿತ್ತು. ಮಾರ್ಚ 17ರಂದು ವೆಂಕಟೇಶ ನಾಯ್ಕರು ಮಾರುಕಟ್ಟೆ ಹೋಗಲು ಸಿದ್ಧವಾಗಿದ್ದರು. ದೊಡ್ಡ ಬೆಲಸೆ ರಸ್ತೆಯಲ್ಲಿ ನಿಂತ ಅವರಿಗೆ ಈಶ್ವರ ನಾಯ್ಕರು ಎದುರಾದರು.

Advertisement. Scroll to continue reading.

ಗುರಾಯಿಸಿ ನೋಡುತ್ತಿದ್ದ ಈಶ್ವರ ನಾಯ್ಕರನ್ನು ವೆಂಕಟೇಶ ನಾಯ್ಕರು ಮಾತನಾಡಿಸಿದರು. `ಏಕೆ ಹಾಗೇ ಗುರಾಯಿಸುವೆ?’ ಎಂದು ವೆಂಕಟೇಶ ನಾಯ್ಕರು ಪ್ರಶ್ನಿಸಿದ್ದರು. `ನನ್ನ ಕಣ್ಣು ನನ್ನ ಇಷ್ಟ. ನಿನಗೇನು ಸಮಸ್ಯೆ?’ ಎಂದು ಈಶ್ವರ ನಾಯ್ಕ ಎದುರುತ್ತರ ನೀಡಿದ್ದರು. ಇದೇ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಕೆಟ್ಟದಾಗಿ ಬೈದ ಈಶ್ವರ ನಾಯ್ಕರು ರಸ್ತೆಯ ಅಂಚಿನಲ್ಲಿ ಬಿದ್ದಿದ್ದ ಹಸಿರು ಬಣ್ಣದ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರಿಗೆ ಹೊಡೆದರು.

ಇದರಿಂದ ವೆಂಕಟೇಶ ನಾಯ್ಕರ ತಲೆಗೆ ಗಾಯವಾಯಿತು. ಹಣೆಗೆ ಸಹ ಪೆಟ್ಟಾಯಿತು. `ಮತ್ತೊಮ್ಮೆ ತಂಟೆಗೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಸಿ ಈಶ್ವರ ನಾಯ್ಕರು ಅಲ್ಲಿಂದ ಹೊರಟರು. ಅದಾದ ನಂತರ ವೆಂಕಟೇಶ ನಾಯ್ಕರು ಮುರುಡೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ShareSendTweetShare
ADVERTISEMENT
Previous Post

ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!

Next Post

ಮಾ 30ಕ್ಕೆ ಯುಗಾದಿ ಮೆರವಣಿಗೆ: ಮನೆ ಮನೆಗೂ ಅಕ್ಷತೆ-ಭಗವಾನ್ ಧ್ವಜ!

Next Post
Ugadi procession on March 30th Akshate-Bhagavan flag to every house!

ಮಾ 30ಕ್ಕೆ ಯುಗಾದಿ ಮೆರವಣಿಗೆ: ಮನೆ ಮನೆಗೂ ಅಕ್ಷತೆ-ಭಗವಾನ್ ಧ್ವಜ!

Swamiji protests in front of the police station!

ಪೊಲೀಸ್ ಠಾಣೆ ಎದುರು ಸ್ವಾಮೀಜಿ ಪ್ರತಿಭಟನೆ!

ಪೊಲೀಸ್ ಅಧಿಕಾರಿಯ ದುರಂತ ಸಾವು: ಮನೆ ಪ್ರವೇಶ ಸಡಗರದಲ್ಲಿರುವಾಗಲೇ ಸೂತಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.