6
  • Latest
Eating dosa in this town is a festival!

ಈ ಊರಲ್ಲಿ ದೋಸೆ ತಿನ್ನುವುದು ಒಂದೂ ಹಬ್ಬ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಈ ಊರಲ್ಲಿ ದೋಸೆ ತಿನ್ನುವುದು ಒಂದೂ ಹಬ್ಬ!

AchyutKumar by AchyutKumar
in ದೇಶ - ವಿದೇಶ
Eating dosa in this town is a festival!

ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಸಹ ಮಾಗೋಡಿನ ದೋಸೆ ಹಬ್ಬದಲ್ಲಿ ಜನರ ಜೊತೆ ಬೆರೆತು ದೋಸೆ ಸಿದ್ದಪಡಿಸಿ ಬಡಿಸಿದರು. ನಂತರ ಅವರು ಅಲ್ಲಿಯೇ ದೋಸೆ ಸವಿದರು

ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ತಿನಿಸುವಗಳಲ್ಲಿ ದೋಸೆಗೆ ಮುಖ್ಯ ಸ್ಥಾನ. ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ನಸುಕಿನ ವೇಳೆಯಲ್ಲಿಯೇ ದೋಸೆಯ ಕಂಪು ಬಾರದಿದ್ದರೆ ಅನೇಕರಿಗೆ ಬೆಳಗಾಗುವುದೇ ಇಲ್ಲ!

ADVERTISEMENT

ಅಕ್ಕಿ ಉದ್ದುವಿನ ಮಿಶ್ರಣದಿಂದ ಕೂಡಿದ ದೋಸೆ ಪೌಷ್ಠಿಕ ಆಹಾರ. ಮೆಂತೆ, ಕಡಲೆಬೇಳೆ, ಅವಲಕ್ಕಿ ಮಿಶ್ರಣ ಸೇರಿಸಿದ ಹಿಟ್ಟನ್ನು ಕಾದ ಕಾವಲಿ ಮೇಲೆ ಹಾಕುವ ವಿಧಾನ ಸಹ ಒಂದು ಕಲೆ. ತೆಳ್ಳವು, ಚಾಟಿ, ಎರೆಯವು ಸೇರಿ ನಾನಾ ಬಗೆಯ ದೋಸೆಗಳು ಉತ್ತರ ಕನ್ನಡದಲ್ಲಿ ಪ್ರಸಿದ್ಧ. ಚಟ್ನಿ, ಸಾಂಬಾರ್, ಕುರ್ಮಾ ಜೊತೆ ಮನೆಯಲ್ಲಿಯೇ ಲಭ್ಯವಿರುವ ಬೆಲ್ಲ-ತುಪ್ಪ, ಉಪ್ಪಿನಕಾಯಿ-ಎಣ್ಣೆಗೂ ಹೊಂದಿಕೊಳ್ಳಬಹುದಾದ ಏಕೈಕ ಗುಣಹೊಂದಿದ ಆಹಾರ ದೋಸೆ ಮಾತ್ರ. ಹೀಗಾಗಿ ದಿನದ ಮೂರು ಹೊತ್ತು ದೋಸೆ ಬಡಿಸಿದರೂ ಕಿಂಚಿತ್ತು ಬೇಸರಿಸಿಕೊಳ್ಳದೇ ಸವಿಯುವ ಮನಸ್ಸುಗಳು ಇಲ್ಲಿವೆ!

ಯಲ್ಲಾಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಆಲೆಮನೆ ಹಬ್ಬ ಆಯೋಜಿಸಿ ಯಶಸ್ವಿಯಾದ ಮಾಗೋಡಿನ ಜನ ಇದೀಗ ದೋಸೆ ಹಬ್ಬದ ಪ್ರಯೋಗವನ್ನು ನಡೆಸಿ ಮೊದಲ ಹಂತದ ಯಶಸ್ಸು ಕಂಡರು. ದೋಸೆ ರುಚಿಯನ್ನು ಎಲ್ಲಡೆ ಪಸರಿಸುವ ಉದ್ದೇಶದಿಂದ ಗುರುವಾರ ಸಂಜೆ ದೋಸೆ ಹಬ್ಬ ಆಯೋಜಿಸಿದ್ದು, ನಿರೀಕ್ಷೆಗೂ ಮೀರಿ ದೋಸೆ ಅಭಿಮಾನಿಗಳು ಆಗಮಿಸಿದ್ದು ಇಲ್ಲಿನ ವಿಶೇಷ. ಮೂರು ಕಾವಲಿಗಳ ಮೂಲಕ ಮೂರು ಬಗೆಯ ದೋಸೆಗಳನ್ನು ನಿರಂತರ ಮೂರು ತಾಸುಗಳ ಕಾಲ ಊರಿನವರು ಎರೆದರು.

Advertisement. Scroll to continue reading.

ಕಾಕಂಬಿ-ತುಪ್ಪ, ಚಟ್ನಿ, ಉಪ್ಪಿನಕಾಯಿ, ಚಟ್ನಿಪುಡಿ-ಎಣ್ಣೆಯ ಜೊತೆ ಆಗಮಿಸಿದವರು ದೋಸೆ ಸವಿದರು. ಆಗಮಿಸಿದ ಅತಿಥಿಗಳಿಗೆ ಅಲ್ಲಿದ್ದ ಸ್ವಯಂ ಸೇವಕರು ಅಚ್ಚುಕಟ್ಟಾಗಿ ದೋಸೆ ಬಡಿಸಿದರು. ಕಬ್ಬಿನ ಹಾಲಿನ ದೋಸೆ, ಈರುಳ್ಳಿ ದೋಸೆ ಹಾಗೂ ಉದ್ದಿನ ದೋಸೆಯ ಸವಿ ಸವಿದು ನಾಲಿಗೆ ಚಪ್ಪರಿಸಿದರು. ಮನೆಗಳಲ್ಲಿ ನಿತ್ಯ ಒಂದೊAದು ಬಗೆಯ ದೋಸೆ ಮಾಡಿದರೂ, ಇಲ್ಲಿ ಮೂರು ಬಗೆಯ ದೋಸೆಗಳು ಒಂದೇ ಕಡೆ ಸಿಕ್ಕಿರುವುದು ಸಂತಸ ಹೆಚ್ಚಿಸಿತು. ಅದರಲ್ಲಿಯೂ ಎಲ್ಲಿಯೂ ಮಾರಾಟಕ್ಕೆ ಸಿಗದ ಕಬ್ಬಿನ ಹಾಲಿನ ದೋಸೆಯನ್ನು ಮಾಗೋಡಿನಲ್ಲಿ ಉಚಿತವಾಗಿ ಉಣಬಡಿಸಲಾಯಿತು. ಅನೇಕರು ಕುಟುಂಬಸಹಿತವಾಗಿ ಆಗಮಿಸಿ ಹಬ್ಬವನ್ನು ಸಂಭ್ರಮಿಸಿದರು.

Advertisement. Scroll to continue reading.

ಇಲ್ಲಿನ ನಾರಾಯಣ ಭಟ್ಟ ಮೊಟ್ಟೆಪಾಲ್ ಮುಂದಾಳತ್ವದಲ್ಲಿ ಮಾಗೋಡು ಕಾಲೋನಿಯ ವೀರ ಮಾರುತಿ ದೇವಾಲಯದಲ್ಲಿ ಈ ದೋಸೆ ಹಬ್ಬ ಆಯೋಜಿಸಲಾಗಿದ್ದು, ಹಬ್ಬದ ಎಲ್ಲಾ ಖರ್ಚು-ವೆಚ್ಚಗಳನ್ನು ಊರಿನವರೇ ಒಟ್ಟಾಗಿ ಭರಿಸಿದ್ದಾರೆ.

Previous Post

ಮನೆಯೇ ದೊಡ್ಡ ಆಸ್ಪತ್ರೆ: ಅಕ್ಷರ ಓದಲು ಬಾರದವನೇ ಇಲ್ಲಿನ ಡುಪ್ಲಿಕೇಟ್ ಡಾಕ್ಟರ್!

Next Post

ಕಾಲಿಗೆ ಬಿದ್ದರೂ ಕಳ್ಳನನ್ನು ಕ್ಷಮಿಸದ ಶಾಸಕ!

Next Post
The MLA who didn't forgive the thief even after he fell on his feet!

ಕಾಲಿಗೆ ಬಿದ್ದರೂ ಕಳ್ಳನನ್ನು ಕ್ಷಮಿಸದ ಶಾಸಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ