6
  • Latest

ನಾಲ್ಕು ಚಕ್ರದ ವಾಹನಕ್ಕಾಗಿ 4.5 ಲಕ್ಷ ರೂ ಸೊಸೈಟಿ ಸಾಲ: ಸಾಲ ತೀರಿದರೂ ತಪ್ಪದ ಅಲೆದಾಟ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಾಲ್ಕು ಚಕ್ರದ ವಾಹನಕ್ಕಾಗಿ 4.5 ಲಕ್ಷ ರೂ ಸೊಸೈಟಿ ಸಾಲ: ಸಾಲ ತೀರಿದರೂ ತಪ್ಪದ ಅಲೆದಾಟ!

AchyutKumar by AchyutKumar
in ಸ್ಥಳೀಯ

ದಾಂಡೇಲಿಯ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಾಲ ಮಾಡಿದ್ದ ವ್ಯಾಪಾರಿ ಒಬಯ್ಯ ಉಮದಿ ಅವರಿಗೆ ಅನ್ಯಾಯವಾಗಿದೆ. 2017ರಲ್ಲಿಯೇ ಅವರು ಬಡ್ಡಿ ಜೊತೆ ಪೂರ್ತಿ ಸಾಲ ಪಾವತಿ ಮಾಡಿದ್ದರೂ ಮತ್ತೆ 1.46 ಲಕ್ಷ ರೂ ಪಾವತಿಸುವಂತೆ ಸೊಸೈಟಿ ನೋಟಿಸು ನೀಡಿದೆ!

ADVERTISEMENT

ದಾಂಡೇಲಿಯ ಜಿ ಎನ್ ರಸ್ತೆಯಲ್ಲಿ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾರ್ಯ ನಿರ್ವಹಿಸುತ್ತಿದೆ. ದಾಂಡೇಲಿ ವಿಜಯ ನಗರದ ಒಬಯ್ಯ ಉಮದಿ ಅವರು ನಾಲ್ಕು ಚಕ್ರದ ವಾಹನ ಖರೀದಿಗೆ ಈ ಸೊಸೈಟಿಯಲ್ಲಿ 4.5 ಲಕ್ಷ ರೂ ಸಾಲ ಮಾಡಿದ್ದರು. ಸಾಲ ಪಡೆಯುವಾಗ ಸೊಸೈಟಿಯವರು ಠೇವಣಿ, ಶೇರು ಹಾಗೂ LIC ವಿಮೆ, ಕಾಗದಪತ್ರ ಶುಲ್ಕ ಎಂದು 69483 ರೂ ಕಡತ ಮಾಡಿಕೊಂಡಿದ್ದರು.

ಸಾಲ ತೀರಿಸುವ ಹೊಣೆಹೊತ್ತ ಒಬಯ್ಯ ಉಮದಿ ಅವರು ನಿರಂತರವಾಗಿ ಅಸಲು ಹಾಗೂ ಬಡ್ಡಿ ಪಾವತಿಸಿದ್ದರು. 2017ರ ಫೆ 16ರೊಳಗೆ ಸಂಪೂರ್ಣ ಸಾಲವನ್ನು ಬಡ್ಡಿಸಹಿತ ತೀರಿಸಿದ್ದರು. ಜೊತೆಗೆ ಸಾಲ ಮುಗಿದ ಬಗ್ಗೆ ಅವರು ಸೊಸೈಟಿಯಿಂದ ಪ್ರಮಾಣ ಪತ್ರವನ್ನು ಸಹ ಪಡೆದಿದ್ದರು. ಸಾಲ ಚುಕ್ತಾ ಪ್ರಮಾಣ ಪತ್ರದ ಜೊತೆ ಬ್ಯಾಂಕಿಗೆ ತೆರಳಿದ ಅವರು ಸಾಲ ಪಡೆಯುವಾಗ ಕಡತ ಮಾಡಿಕೊಂಡಿದ್ದ ಹಣ ಮರುಪಾವತಿಗೆ ಕೋರಿದರು.

Advertisement. Scroll to continue reading.

ಆದರೆ, ಸೊಸೈಟಿಯವರು ಆ ಹಣ ನೀಡಲು ಒಪ್ಪಲಿಲ್ಲ. ಕಾರಣ ಕೇಳಿದಾಗ ಮತ್ತೆ 146271ರೂ ಪಾವತಿಸುವಂತೆ ಸೂಚನೆ ನೀಡಿದರು. ಈ ಬಗ್ಗೆ ಸೊಸೈಟಿಯವರು ನೋಟಿಸ್ ಸಹ ನೀಡಿದರು. ಈಗಾಗಲೇ ಎಲ್ಲಾ ಹಣ ಪಾವತಿಸಿದ ನಂತರವೂ ಮತ್ತೆ ನೋಟಿಸ್ ನೀಡಿದನ್ನು ಪ್ರಶ್ನಿಸಲು ಒಬಯ್ಯ ಉಮದಿ ಅವರು ಸೊಸೈಟಿಗೆ ಹೋದರು. ಆದರೆ, ಸೊಸೈಟಿ ಸಿಬ್ಬಂದಿ ಹಾರಿಕೆ ಉತ್ತರ ನೀಡಿ ತಪ್ಪಿಸಿಕೊಂಡರು. ಸೊಸೈಟಿಯ ಮ್ಯಾನೇಜರ್ ಅಂತೂ ಒಬಯ್ಯ ಉಮದಿ ಅವರನ್ನು ಕಂಡ ತಕ್ಷಣ ಅಡಗಲು ಶುರು ಮಾಡಿದರು.

Advertisement. Scroll to continue reading.

ಎಷ್ಟು ಸಲ ಪ್ರಯತ್ನಿಸಿದರೂ ಸೊಸೈಟಿ ಮ್ಯಾನೇಜರ್ ಒಬಯ್ಯ ಉಮದಿ ಅವರ ಕೈಗೆ ಸಿಗಲಿಲ್ಲ. ಸಿಬ್ಬಂದಿ ಸಹ ಸರಿಯಾಗಿ ಮಾತನಾಡಿಸಲಿಲ್ಲ. ಹೀಗಾಗಿ ಆಘಾತಕ್ಕೆ ಒಳಗಾದ ಒಬಯ್ಯ ಉಮದಿ ಅವರು ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿದರು. ಎಲ್ಲಾ ದಾಖಲೆಗಳನ್ನು ತೋರಿಸಿ ತಮಗಾದ ಅನ್ಯಾಯವನ್ನು ವಿವರಿಸಿದರು. ಬ್ಯಾಂಕ್ ಮ್ಯಾನೇಜರ್ ಹಾಗೂ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಸಾಲ ವಿಭಾಗ ಸಿಬ್ಬಂದಿ ಕಿಶನ್ ಉಪ್ಪಾರ್ ವಿರುದ್ಧ ಪ್ರಕರಣ ದಾಖಲಿಸಿದರು.

Previous Post

ಮಕ್ಕಳ ವಿದ್ಯಾರ್ಜನೆಗೆ ಜಯ ಕರ್ನಾಟಕ ನೆರವು

Next Post

ಕಳಚೆ ಭೂ ಕುಸಿತ: ಕೆಲವರಿಗೆ ಪರಿಹಾರದ ಬಯಕೆ.. ಉಳಿದವರಿಗೆ ಪುನರ್ವಸತಿಯ ಆಸೆ!

Next Post
Kalache landslide Some want relief others want rehabilitation!

ಕಳಚೆ ಭೂ ಕುಸಿತ: ಕೆಲವರಿಗೆ ಪರಿಹಾರದ ಬಯಕೆ.. ಉಳಿದವರಿಗೆ ಪುನರ್ವಸತಿಯ ಆಸೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ