6
  • Latest
ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

AchyutKumar by AchyutKumar
in ದೇಶ - ವಿದೇಶ, ಸ್ಥಳೀಯ
ಆಧಾರ್ ಕಾರ್ಡಿಗಾಗಿ ಮೋದಿಗೆ ಪತ್ರ ಬರೆದ 80ರ ಅಜ್ಜಿ!

ಕಳೆದ 10 ವರ್ಷಗಳಿಂದ ಆಧಾರ್ ಕಾರ್ಡ ಮಾಡಿಸಲು ಅಲೆದಾಡುತ್ತಿರುವ ಯಲ್ಲಾಪುರ ಕಾನಗೋಡಿನ 80 ವರ್ಷದ ಸರಸ್ವತಿ ಹೆಗಡೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. `ತಾನು ಸಾಯುವುದರ ಒಳಗೆ ಆಧಾರ್ ಕಾರ್ಡ ಮಾಡಿಕೊಡಿ’ ಎಂದವರು ಅಳಲು ತೋಡಿಕೊಂಡಿದ್ದಾರೆ. ಈ ವಿಷಯ ಅರಿತ ಅಧಿಕಾರಿಗಳು ತ್ವರಿತವಾಗಿ ಅವರ ಮನೆಗೆ ದೌಡಾಯಿಸಿದ್ದು, ಆ ಪತ್ರ ಪ್ರಧಾನಿ ಕಚೇರಿಗೆ ತಲುಪುವುದರೊಳಗೆ ಆಧಾರ್ ಸೇವೆ ಒದಗಿಸುವ ಸಿದ್ಧತೆ ಮಾಡಿಕೊಂಡಿದ್ದಾರೆ.

ADVERTISEMENT

ಯಲ್ಲಾಪುರ ಶಿರಸಿ ಗಡಿಭಾಗದಲ್ಲಿ ಕಾನಗೋಡು ಎಂಬ ಊರಿದೆ. ಅಲ್ಲಿನ ಸರಸ್ವತಿ ರಾಮ ಹೆಗಡೆ ಅವರು ಆಧಾರ್ ಕಾರ್ಡ ಮಾಡಿಸುವುದಕ್ಕಾಗಿ ಕಳೆದ 10 ವರ್ಷಗಳಿಂದ ಕಚೇರಿ ಅಲೆದಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತ ವೃದ್ಧರ ಮನೆಗೆ ತೆರಳಿ ಆಧಾರ್ ಕಾರ್ಡ ಮಾಡಿಸುವ ಯೋಜನೆ ರೂಪಿಸಿದರೂ, ಹರಿಯುತ್ತಿರುವ ಹಳ್ಳ ದಾಟಿ ಅಧಿಕಾರಿಗಳು ಸರಸ್ವತಿ ಹೆಗಡೆ ಅವರ ಮನೆಗೆ ಬರಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯ, ಕೊರೊನಾ ಕಾಲಘಟ್ಟ ಎಲ್ಲವನ್ನು ಮೀರಿ ಸರಸ್ವತಿ ಹೆಗಡೆ ಅವರು ಅಂಚೆ ಕಚೇರಿಗೆ ಅಲೆದಾಡಿದರೂ ಆಧಾರ್ ಕಾರ್ಡ ಸೇವೆ ಸಿಗಲಿಲ್ಲ.

ಆಧಾರ್ ಕಾರ್ಡ ಬಗ್ಗೆ ವಿಚಾರಿಸುವುದಕ್ಕಾಗಿ ಸರಸ್ವತಿ ಹೆಗಡೆ ಅವರು ಆಧಾರ್ ಕೇಂದ್ರ, ನಾಡ ಕಚೇರಿ, ತಹಶೀಲ್ದಾರ್ ಕಚೇರಿ, ಅಂಚೆ ಕಚೇರಿ ಸೇರಿ ಎಲ್ಲಾ ಕಚೇರಿಗಳಿಗೂ ಸುತ್ತಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಶಾಲೆಯ ಪ್ರಮಾಣ ಪತ್ರ ತರಬೇಕು ಎಂದು ಅಧಿಕಾರಿಗಳು ಸೂಚಿಸಿದ ಕಾರಣ ಶಾಲೆಗೆ ಭೇಟಿ ನೀಡಿದರು. ಆದರೆ, ಅಲ್ಲಿಯೂ ಸರಸ್ವತಿ ಹೆಗಡೆ ಅವರ ವರ್ಗಾವಣೆ ಪ್ರಮಾಣ ಪತ್ರ ಸರಿಯಾಗಿರಲಿಲ್ಲ. ಶಿಕ್ಷಕರು ನೀಡಿದ ಪ್ರಮಾಣ ಪತ್ರವನ್ನು ಅಧಿಕಾರಿಗಳು ಒಪ್ಪಲಿಲ್ಲ. ಹೀಗಾಗಿ, ಕೊನೆ ಪ್ರಯತ್ನವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದರು. ಅದರ ಪ್ರತಿಯನ್ನು ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸಹ ರವಾನಿಸಿದರು.

Advertisement. Scroll to continue reading.

ಅಜ್ಜಿಮನೆಗೆ ಓಡೋಡಿ ಬಂದ ಅಧಿಕಾರಿಗಳು:

Advertisement. Scroll to continue reading.

ಮಂಚಿಕೇರಿ ಕಂದಾಯ ನಿರೀಕ್ಷಕ ಎನ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರ ಮನೆಗೆ ಭೇಟಿ ನೀಡಿ, ಸಮಸ್ಯೆ ಆಲಿಸಿದರು

ಈ ವಿಷಯ ಅರಿತ ಅಧಿಕಾರಿಗಳು ಸರಸ್ವತಿ ಹೆಗಡೆ ಅವರನ್ನು ಹುಡುಕಿ ಮನೆಗೆ ಬಂದರು. ಮಂಚಿಕೇರಿಯ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಸರಸ್ವತಿ ಹೆಗಡೆ ಅವರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದರು. `ಸರ್ಕಾರದ ಎಲ್ಲಾ ಸೌಲಭ್ಯಗಳಿಗೂ ಆಧಾರ್ ಕೇಳುತ್ತಾರೆ. ಆದರೆ, ಆಧಾರ್ ಕಾರ್ಡ ಮಾತ್ರ ಯಾರೂ ಮಾಡಿಕೊಡುತ್ತಿಲ್ಲ’ ಎಂದು ಸರಸ್ವತಿ ಹೆಗಡೆ ಸಮಸ್ಯೆ ವಿವರಿಸಿದರು. `70 ವರ್ಷ ಹಿಂದಿನ ಶಾಲಾ ದಾಖಲೆ, ಚುನಾವಣಾ ಚೀಟಿ ಹಿಡಿದು ಹೋದರೆ ಈ ದಾಖಲೆ ಸಾಲುವುದಿಲ್ಲ ಎನ್ನುತ್ತಾರೆ. ಉಳಿದ ಯಾವ ದಾಖಲೆಯೂ ನನ್ನಲ್ಲಿಲ್ಲ. ನನ್ನ ಮರಣ ನಂತರ ಮಕ್ಕಳಿಗೆ ಮರಣ ಪತ್ರ ಸಿಗುವುದಕ್ಕಾದರೂ ಆಧಾರ್ ಅಗತ್ಯವಿದೆ’ ಎಂದವರು ಕಣ್ಣೀರಾದರು. ಆಧಾರ್ ಜೋಡಣೆ ಮಾಡದ ಕಾರಣ ರೇಶನ್ ಕಾರ್ಡ ಸಹ ರದ್ಧಾಗಿರುವ ಬಗ್ಗೆ ಅಳಲು ತೋಡಿಕೊಂಡರು.

ಅಜ್ಜಿಗೆ ಸಮಾಧಾನ ಮಾಡಿದ ಉಪತಹಶೀಲ್ದಾರ್ ಎಚ್ ಎನ್ ರಾಘವೇಂದ್ರ ಅವರು ಅಲ್ಲಿಂದಲೇ ಆಧಾರ್ ಸಂಯೋಜಕರಿಗೆ ಫೋನ್ ಮಾಡಿದರು. ಗ್ರಾಮ ಆಡಳಿತಾಧಿಕಾರಿ ಶರಣು ತುಂಬಗಿ ಜೊತೆ ಸೇರಿ ದಾಖಲೆಗಳನ್ನು ಪರಿಶೀಲಿಸಿದರು. ಕೊನೆಗೆ `ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ಆಧಾರ್ ಕೇಂದ್ರಕ್ಕೆ ಬನ್ನಿ. ಆಧಾರ್ ಕಾರ್ಡ ಮಾಡಿಕೊಡಿಸುವೆ’ ಎಂದು ಎಚ್ ಎನ್ ರಾಘವೇಂದ್ರ ಅವರು ಭರವಸೆ ನೀಡಿದರು. ಆಧಾರ್ ಸಂಯೋಜನ ಮಹಾಬಲೇಶ್ವರ ದೇಸಾಯಿ ಅವರಿಗೂ ಪರಿಸ್ಥಿತಿಯ ಬಗ್ಗೆ ವಿವರಿಸಿ, ಶಿರಸಿ ಕೇಂದ್ರದಿoದ ಆಧಾರ್ ಕಾರ್ಡ ಕೊಡಿಸುವ ಬಗ್ಗೆ ನಿರ್ಣಯಿಸಿದರು. ಸದ್ಯ ಮಾರ್ಚ 27ರಂದು ಶಿರಸಿಗೆ ತೆರಳಿ ಆಧಾರ್ ಕಾರ್ಡ ಮಾಡಿಸುವುದಾಗಿ ಸರಸ್ವತಿ ಹೆಗಡೆ ಅವರ ಪುತ್ರ ಪ್ರಸಾದ ಹೆಗಡೆ ಮಾಹಿತಿ ನೀಡಿದ್ದಾರೆ.

Previous Post

ಕರಡಿ ಜೊತೆ ಕುಸ್ತಿಯಾಡಿದ ಕಾವಲುಗಾರ!

Next Post

ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!

Next Post
Don't go to the bridge.. Annoying for riders: Illegal sand swallows half the road!

ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ