6
  • Latest
Police hospitality to thieves who stole areca nuts!

ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಡಿಕೆ ಕದ್ದ ಕಳ್ಳರಿಗೆ ಪೊಲೀಸ್ ಆತಿಥ್ಯ!

AchyutKumar by AchyutKumar
March 22, 2025
in ರಾಜ್ಯ
Police hospitality to thieves who stole areca nuts!
advt advt advt
ADVERTISEMENT

ಕೃಷ್ಣಗದ್ದೆ ವಿಘ್ನೇಶ್ವರ ಭಟ್ಟರ ಅಡಿಕೆ ಕದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಳ್ಳತನವಾದ ಎಲ್ಲಾ ಅಡಿಕೆ ಜೊತೆ ಅಡಿಕೆ ಸಾಗಿಸಿದ್ದ ಕಾರನ್ನು ವಶಕ್ಕೆಪಡೆದಿದ್ದಾರೆ.

ಯಲ್ಲಾಪುರ ತಾಲೂಕಿನ ಹಳಿಯಾಳ ಕ್ರಾಸಿನ ಕೃಷ್ಣಗದ್ದೆಯಲ್ಲಿ ವಿಘ್ನೇಶ್ವರ ತಿಮ್ಮಪ್ಪ ಭಟ್ಟ ಅವರು ಅಡಿಕೆ ಬೆಳೆದಿದ್ದರು. ಹಸಿ ಅಡಿಕೆ ಸಂಸ್ಕರಿಸಿದ್ದ ಅವರು ಅದನ್ನು ಮನೆ ಅಂಗಳದಲ್ಲಿ ಒಣಗಿಸಿದ್ದರು. ಜನವರಿ 14ರ ರಾತ್ರಿ 10 ಗಂಟೆಯವರೆಗೂ ಅಡಿಕೆ ಮನೆ ಅಂಗಳದಲ್ಲಿ ಸುರಕ್ಷಿತವಾಗಿರುವುದನ್ನು ಅವರು ಗಮನಿಸಿದ್ದರು. ಸಂಜೆ ಹೊದಸಿದ ಕಪ್ಪು ಬಣ್ಣದ ತಾಡಪತ್ರೆ ಸಹ ಸರಿಯಾಗಿರುವುದನ್ನು ನೋಡಿದ್ದರು. ಹೀಗಾಗಿ ಆ ದಿನ ಅವರು ನೆಮ್ಮದಿಯ ನಿದ್ದೆ ಮಾಡಿದ್ದರು.

ADVERTISEMENT
ADVERTISEMENT

ಆದರೆ, ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಅಂಗಳದಲ್ಲಿ ಅಡಿಕೆ ಇರಲಿಲ್ಲ. ನಸುಕಿನ 3.30ರೊಳಗೆ ಆಗಮಿಸಿದ ಕಳ್ಳರು ಅಲ್ಲಿದ್ದ ಎಲ್ಲಾ ಅಡಿಕೆ ಅಪಹರಿಸಿ ಪರಾರಿಯಾಗಿದ್ದರು. ಅಂದಾಜು 50 ಸಾವಿರ ರೂ ಮೌಲ್ಯದ 1.30 ಕ್ವಿಂಟಲ್ ಕೆಂಪು ಅಡಿಕೆ ಕಾಣೆಯಾದ ಬಗ್ಗೆ ಅವರು ಮೊದಲು ಬೀಟ್ ಪೊಲೀಸರಲ್ಲಿ ಹೇಳಿಕೊಂಡರು. ಬೀಟ್ ಪೊಲೀಸರ ಸೂಚನೆ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣವನ್ನು ದಾಖಲಿಸಿದರು.

Advertisement. Scroll to continue reading.
Advertisement. Scroll to continue reading.

ಅಡಿಕೆ ಕಳ್ಳತನ ನಡೆದಿರುವ ಬಗ್ಗೆ ಪೊಲೀಸ್ ನಿರೀಕ್ಷಕ ರಮೇಶ ಹಾನಾಪುರ ಅವರು ಪೊಲೀಸ್ ಅಧೀಕ್ಷಕ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಎನ್ ಹಾಗೂ ಶಿರಸಿ ಪೊಲೀಸ್ ಉಪಾಧ್ಯಕ್ಷ ಗಣೇಶ ಕೆ ಎಲ್ ಅವರಿಗೆ ವರದಿ ಒಪ್ಪಿಸಿದರು. ಅದಾದ ನಂತರ ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದರು. ಈ ವೇಳೆ ಪಿಎಸ್‌ಐ ಸಿದ್ದಪ್ಪ ಗುಡಿ ಹಾಗೂ ಮಾಹಾವೀರ ಕಾಂಬ್ಳೆ ಅವರಿಗೆ ಅಡಿಕೆ ಕಳ್ಳರ ಬಗ್ಗೆ ಖಚಿತ ಮಾಹಿತಿಯೊಂದು ಸಿಕ್ಕಿತು.

ಅಡಿಕೆ ಸಾಗಿಸಿದ ಶಿಪ್ಟ್ ಕಾರಿನ ಹಿಂದೆ ಬಿದ್ದ ಪೊಲೀಸ್ ಸಿಬ್ಬಂದಿ ಮಹಮದ್ ಶಫಿ, ಗಿರೀಶ ಲಮಾಣಿ, ಪ್ರವೀಣ ಪೂಜಾರ, ಕರ್ಣಕುಮಾರ ಅಡಿಕೆ ಕದ್ದ ಮೂವರು ಕಳ್ಳರನ್ನು ಹುಡುಕಿದರು. ಪೊಲೀಸ್ ಸಿಬ್ಬಂದಿ ಶೇಷು ಮರಾಠಿ, ನಾಗರಾಜ ನಾಯ್ಕ, ಶೋಭಾ ನಾಯ್ಕ ಹಾಗೂ ರೇಖಾ ಅವರ ನೆರವಿನಿಂದ ದಾಂಡೇಲಿ ಸುನ್ನಿ ಮಸೀದಿ ಬಳಿಯ ಪಟೇಲನಗರದ ಮೌಲಾಲಿ ಸತ್ತರಸಾಬ್ ಜಮಾದಾರ್, ಹಾವೇರಿ ಸವಣೂರಿನ ಸಾಹಿಲ್ ಜಬ್ಬರ್ ಜವಾರಿ, ಹುಬ್ಬಳ್ಳಿಯ ಸಮೀರ್ ಮೆಹಬೂಬಸಾಬ್ ಹವಾಲ್ದಾರ್ ಎಂಬಾತರನ್ನು ವಶಕ್ಕೆಪಡೆದರು. ವಿಚಾರಣೆ ನಡೆಸಿದಾಗ ಅವರ ಬಳಿ ಕದ್ದ ಅಡಿಕೆ ಜೊತೆ ಕೃತ್ಯಕ್ಕೆ ಬಳಸಿದ ಕಾರು ಸಹ ಕಾಣಿಸಿತು. ಅವೆಲ್ಲವನ್ನು ಪೊಲೀಸರು ವಶಕ್ಕೆಪಡೆದು, ಕಳ್ಳರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.

ShareSendTweetShare
ADVERTISEMENT
Previous Post

ಸೇತುವೆಗೆ ಬಾರ.. ಸವಾರರಿಗೆ ಕಿರಿಕಿರಿ: ಅರ್ದ ರಸ್ತೆ ನುಂಗಿದ ಅಕ್ರಮ ಮರಳು!

Next Post

ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!

Next Post
Fire disaster No water no fodder for the cattle!

ಅಗ್ನಿ ಅವಘಡ: ಜಾನುವಾರುಗಳಿಗೆ ನೀರು ಇಲ್ಲ.. ಮೇವು ಇಲ್ಲ!

Society warns of the threat of a nefarious group: Deposits are safe even if you lose crores!

ದುಷ್ಟಕೂಟದ ಕಾಟಕ್ಕೆ ನಲುಗಿದ ಸೊಸೈಟಿ: ಕೋಟಿ ನಷ್ಟ ಮಾಡಿದರೂ ಠೇವಣಿ ಸುಭದ್ರ!

Health tips from doctors This mouth-watering paneer This homemade dish is safe for the body.. and pleasant for the mind!

ವೈದ್ಯರು ಹೇಳಿದ ಆರೋಗ್ಯ ಸೂತ್ರ | ಬಾಯಲ್ಲಿ ನೀರುಣಿಸುವ ಪನೀರ್: ಮನೆಯಲ್ಲಿ ತಯಾರಿಸಿದ ಈ ತಿನಿಸು ದೇಹಕ್ಕೆ ಸುರಕ್ಷಿತ.. ಮನಸಿಗೆ ಆಹ್ಲಾದಕರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.