6
  • Latest
Cigarette aarti to God Khapri.. Sarai Abhishekam!

ಖಾಪ್ರಿ ದೇವರಿಗೆ ಸಿಗರೇಟಿನ ಆರತಿ.. ಸರಾಯಿ ಅಭಿಷೇಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಖಾಪ್ರಿ ದೇವರಿಗೆ ಸಿಗರೇಟಿನ ಆರತಿ.. ಸರಾಯಿ ಅಭಿಷೇಕ!

AchyutKumar by AchyutKumar
in ರಾಜ್ಯ
Cigarette aarti to God Khapri.. Sarai Abhishekam!

ಆಫ್ರಿಕಾ ದೇಶದ ಖಾಪ್ರಿ ದೇವರು ತಲತಲಾಂತರದಿoದ ಕಾಳಿ ಸಂಗಮ ಪ್ರದೇಶದಲ್ಲಿ ವಾಸವಾಗಿದ್ದು, ಈ ದೇವರಿಗೆ ಸಿಗರೇಟಿನ ಆರತಿ, ಸರಾಯಿ ಅಭಿಷೇಕ ಮಾಡುವುದು ವಿಶೇಷ!

ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿರುವ ಖಾಪ್ರಿ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಜಾತ್ರೆ ನಡೆಯುತ್ತದೆ. ಎಲ್ಲಾ ಕಡೆ ಹಾಲು, ಹೂವು, ಹಣ್ಣುಗಳನ್ನು ದೇವರಿಗೆ ಅರ್ಪಿಸಿದರೆ ಖಾಪ್ರಿ ದೇವರು ಅದಕ್ಕಿಂತ ವಿಭಿನ್ನ. ದೇಶ-ವಿದೇಶಗಳಿಂದ ಜಾತ್ರೆಗೆ ಬರುವ ಭಕ್ತರು ಬಗೆ ಬಗೆಯ ಮದ್ಯ ಹಿಡಿದು ತರುತ್ತಾರೆ. ಭಕ್ತಿಯಿಂದ ಅದನ್ನು ದೇವರಿಗೆ ಸಲ್ಲಿಸಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ.

ನಗರದಿಂದ 3ಕಿಮೀ ದೂರದಲ್ಲಿ ಖಾಪ್ರಿ ದೇವರ ದೇಗುಲವಿದೆ. ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿರುವ ಈ ದೇವರು `ಹೆದ್ದಾರಿಯಲ್ಲಿನ ಅಪಘಾತ ಆಗದಂತೆ ನೋಡಿಕೊಳ್ಳುವವ’ ಎಂಬ ನಂಬಿಕೆಯಿದೆ. ಜೊತೆಗೆ `ಮೀನುಗಾರರಿಗೆ ತೆರಳುವ ಮೀನುಗಾರರನ್ನು ರಕ್ಷಣೆ ಮಾಡುವವ’ ಎಂದು ಜನ ನಂಬಿದ್ದಾರೆ.

ಆಫ್ರಿಕಾದ ಖಾಫ್ರಿ ದೇವರು ಕೋಡಿಭಾಗದಲ್ಲಿ ಸ್ಥಾಪನೆಯಾಗುವುದರ ಹಿಂದೆ ದಂತಕಥೆಯೊoದು ಚಾಲ್ತಿಯಲ್ಲಿದೆ. `ಪುರ್ಸಪ್ಪ ಮನೆತನದ ಈ ದೇವರು ಮೊದಲು ಮಾನವನಾಗಿದ್ದರು. 300 ವರ್ಷಗಳ ಹಿಂದೆ ಆಫ್ರಿಕಾದಿಂದ ಬಂದ ವ್ಯಕ್ತಿಯೊಬ್ಬರು ಇಲ್ಲಿ ಪೂಜೆ ಮಾಡುತ್ತಿದ್ದರು. ಒಮ್ಮೆ ಏಕಾಏಕಿ ಆ ವ್ಯಕ್ತಿ ಕಾಣೆಯಾಗಿದ್ದು ನಂತರ ಪರ್ಸಪ್ಪ ಎಂಬಾತರ ಕನಸಿನಲ್ಲಿ ಬಂದು ತಾನು ದೇವರಾಗಿರುವದಾಗಿ ತಿಳಿಸಿದರು. ತನ್ನ ಇಷ್ಟಾರ್ಥದಂತೆ ಪೂಜೆ ಸಲ್ಲಿಸಿದರೆ ನಂಬಿದ ಜನರನ್ನು ಆಶೀರ್ವದಿಸುವದಾಗಿ ಹೇಳಿದ್ದು, ಅಂದಿನಿoದ ಈವರೆಗೂ ಪ್ರತಿ ಭಾನುವಾರ ಹಾಗೂ ಬುಧವಾರ ಇಲ್ಲಿ ಪೂಜೆ ನಡೆಯುತ್ತಿದೆ’ ಎಂದು ಸ್ಥಳೀಯರು ವಿವರಿಸುತ್ತಾರೆ.

`ಖಾಫ್ರಿ ದೇವರು ಪುರ್ಸಪ್ಪ ಮನೆತನದ ದೇವರಾದರೂ ನಂಬಿ ಬಂದ ಎಲ್ಲ ಭಕ್ತಿರಿಗೂ ಆಶೀರ್ವಾದ ಶತಸಿದ್ಧ. ಸಾರಾಯಿ, ಸಿಗರೇಟನ್ನು ಹರಕೆಯಾಗಿ ನೀಡಿದರೆ ಇಷ್ಟಾರ್ಥ ಸಿದ್ದಿ ಖಚಿತ’ ಎಂಬುದು ಅಲ್ಲಿನವರ ಅನುಭವ. ಈ ದೇವಾಲಯಕ್ಕೆ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ನರು ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಭಾನುವಾರ ಈ ದೇವರ ಜಾತ್ರೆ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ಸಿಗರೇಟು-ಸರಾಯಿ ಅರ್ಪಿಸಿ ದೇವರ ಹರಕೆ ತೀರಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಕಿಕ್ಕಿರಿದು ಜನ ಆಗಮಿಸುತ್ತಿದ್ದರು.

ShareSendTweetShare
Previous Post

ವಿದ್ಯಾರ್ಥಿಗಳ ಪಕ್ಷಿ ಪ್ರೇಮ: ರಜೆಯಿದ್ದರೂ ಶಾಲೆಗೆ ಬರುವ ಸದ್ಗುರು ಶಾಲೆ ಮಕ್ಕಳು!

Next Post

ಕಾಟಾಚಾರಕ್ಕೆ ನಡೆಯಿತು ವಿಶ್ವ ಕಪ್ಪೆ ದಿನ!

Next Post
World Frog Day was celebrated with great fanfare!

ಕಾಟಾಚಾರಕ್ಕೆ ನಡೆಯಿತು ವಿಶ್ವ ಕಪ್ಪೆ ದಿನ!

ಬಸ್ ನಿಲ್ದಾಣ: ಶೌಚಕ್ಕೆ ಹೋಗುವವರಿಗೆ ಬಿಸ್ಲರಿ ಬಾಟಲಿಯೇ ಗತಿ!

ಬಸ್ ನಿಲ್ದಾಣ: ಶೌಚಕ್ಕೆ ಹೋಗುವವರಿಗೆ ಬಿಸ್ಲರಿ ಬಾಟಲಿಯೇ ಗತಿ!

Firestorm at the garbage dump!

ಕಸದಗುಡ್ಡೆ ಕಡೆ ಬೆಂಕಿ ಬಿರುಗಾಳಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.