6
  • Latest
Hutakamane | The Ghost of the Hill: Old news.. new content!

ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಹುಟಕಮನೆ | ಗುಡ್ಡದ ಭೂತ: ಹಳೆ ಸುದ್ದಿ.. ಹೊಸ ವಿಷಯ!

AchyutKumar by AchyutKumar
in ಸ್ಥಳೀಯ
Hutakamane | The Ghost of the Hill: Old news.. new content!

ಯಲ್ಲಾಪುರ ತಾಲೂಕಿನ ಹುಟಕಮನೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಗುಡ್ಡ ಅಗೆದಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಶನಿವಾರ ತಹಶೀಲ್ದಾರ್ ಕಚೇರಿಯ ಮೂಲಕ ಅಲ್ಲಿನ ಜನ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. `ಅವೈಜ್ಞಾನಿಕವಾಗಿ ಗುಡ್ಡ ಕೊರೆದ ಪರಿಣಾಮ ಭೂ ಕುಸಿತವಾಗುವ ಸಾಧ್ಯತೆಯಿದ್ದು, ಭೂ ಕುಸಿತ ಆಗದಂತೆ ತಡೆಯಲು ತುರ್ತು ಕ್ರಮ ಜರುಗಿಸಿ’ ಎಂದು ಆ ಭಾಗದ ಜನ ಮನವಿ ಮಾಡಿದ್ದಾರೆ.

`ಹಳವಳ್ಳಿಯ ದೀಪಕ ನಾಯ್ಕ ಎಂಬಾತರು ಹುಟಕಮನೆಯ 61/6ರ ಕ್ಷೇತ್ರವನ್ನು ಖರೀದಿಸಿದ್ದಾರೆ. ಅಲ್ಲಿನ ಗುಡ್ಡ ಪ್ರದೇಶವನ್ನು ಅವರು ಅವೈಜ್ಞಾನಿಕ ರೀತಿಯಲ್ಲಿ ತುಂಡರಿಸಿದ್ದರಿoದ ತಳಭಾಗದ ತೋಟಗಳಿಗೆ ಮಣ್ಣು ಬಿದ್ದಿದೆ. ಇಲ್ಲಿದ್ದ ಕಾಲುವೆ ಸಹ ಮುಚ್ಚಿದ್ದರಿಂದ ಸರಾಗವಾಗಿ ನೀರು ಹೋಗಲು ಜಾಗವಿಲ್ಲ. ಭೂ ಕುಸಿತ ಉಂಟಾದಲ್ಲಿ ಜೀವಹಾನಿ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ’ ಎಂದು ಊರಿನವರು ಹೇಳಿದ್ದಾರೆ.

Advertisement. Scroll to continue reading.

`ಯಲ್ಲಾಪುರ ತಾಲೂಕಿನ ಹಲವು ಕಡೆ ಈಚೆಗೆ ಸಾಕಷ್ಟು ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಹುಟಕಮನೆ ಪ್ರದೇಶದಲ್ಲಿ ಸಹ ಗುಡ್ಡ ಕುಸಿತದ ಆತಂಕ ಎದುರಾಗಿದ್ದು, ಅದನ್ನು ತಡೆಯಲು ಕಾಳಜಿವಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Advertisement. Scroll to continue reading.

ಸುಬ್ರಾಯ ಸಭಾಹಿತ, ಪ್ರಶಾಂತ ಸಭಾಹಿತ, ವಿಶ್ವೇಶ್ವರ ಸಭಾಹಿತ, ತಿಮ್ಮಣ್ಣ ಸಭಾಹಿತ, ನಾಗೇಶ ಗಾಂವ್ಕರ್, ಗಣಪತಿ ಗಾಂವ್ಕರ್, ವಿಶ್ವೇಶ್ವರ ಸಭಾಹಿತ, ಗೋಪಾಲಕೃಷ್ಣ ಸಭಾಹಿತ್ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆ ವಿವರಿಸಿದರು. `ತಮ್ಮ ತೋಟ ಹಾಗೂ ಮನೆಗಳನ್ನು ರಕ್ಷಿಸಿ’ ಎಂದು ಅವರು ಮನವಿ ಮಾಡಿದರು. `ಸಂಭವನೀಯ ಅನಾಹುತವನ್ನು ತಡೆಯಬೇಕು. ಏನಾದರೂ ಅವಘಡ ನಡೆದರೆ ಭೂ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.

Previous Post

ಕಾಳಿಕಾ ಭವಾನಿ ಮೇಲೆ ಕಳ್ಳರ ಕಣ್ಣು!

Next Post

Tv9 ನೆಟ್ವರ್ಕ್ | ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

Next Post
tv9 Network What India Thinks Today Summit PM Modi participates

Tv9 ನೆಟ್ವರ್ಕ್ | ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ