6
  • Latest
ಅದು ನಾನೇ ಮಾಡಿದ್ದು… ಇದೂ ನಾನೇ ಮಾಡಿದ್ದು!

ಅದು ನಾನೇ ಮಾಡಿದ್ದು… ಇದೂ ನಾನೇ ಮಾಡಿದ್ದು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಅದು ನಾನೇ ಮಾಡಿದ್ದು… ಇದೂ ನಾನೇ ಮಾಡಿದ್ದು!

AchyutKumar by AchyutKumar
March 29, 2025
in ರಾಜಕೀಯ, ವಿಡಿಯೋ
advt advt advt
ADVERTISEMENT

ಶಿರಸಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಬಗ್ಗೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದ್ದಾರೆ. `ಆ ಕೆಲಸವನ್ನು ನಾನು ಮಂಜೂರಿ ಮಾಡಿಸಿದ್ದು… ಈ ಕೆಲಸವನ್ನೂ ನಾನೇ ಮಂಜೂರಿ ಮಾಡಿಸಿದ್ದು’ ಎಂದು ಅವರು ಹೇಳಿಕೊಂಡಿದ್ದಾರೆ.

ತಾನೂ ಶಾಸಕನಾಗಿದ್ದ ಅವಧಿಯಲ್ಲಿ ಚಾಲನೆ ನೀಡಿದ ಕೆಲಸಗಳನ್ನು ಈಗ ಮುಗಿಸಿದ ಕಾಂಗ್ರೆಸ್ ಸರ್ಕಾರ ಅದನ್ನು ತನ್ನ ಸಾಧನೆ ಎನ್ನುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ. `ಶಿರಸಿ ಶಾಸಕರು ಹೆಚ್ಚು ಹೆಚ್ಚು ಹೊಸ ಕೆಲಸ ಮಂಜೂರಿ ಮಾಡಿ ತಮ್ಮ ಸಾಧನೆ ಪ್ರದರ್ಶಿಸಲಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದ್ದಾರೆ.

ADVERTISEMENT
ADVERTISEMENT

`ಶಿರಸಿಯಲ್ಲಿನ ಸಂಚಾರಿ ಪೊಲೀಸ್ ಠಾಣೆ, ಪ್ರಾದೇಶಿಕ ಸಾರಿಗೆ ಕಚೇರಿ, ಹೈಟೆಕ್ ಆಸ್ಪತ್ರೆ, ಒಳ ಕ್ರೀಡಾಂಗಣ, ಆಡಳಿತ ಸೌಧ ಸೇರಿ ಇನ್ನು ಹಲವು ಅಭಿವೃದ್ಧಿ ಕೆಲಸವನ್ನು ಬಿಜೆಪಿ ಸರ್ಕಾರ ಮಂಜೂರಿ ಮಾಡಿತ್ತು. ಅಂತೂ ಇಂತೂ ಎರಡು ವರ್ಷ ಗುದ್ದಾಡಿ ಇದೀಗ ಕಾಂಗ್ರೆಸ್ ಸರ್ಕಾರ ಆ ಕೆಲಸ ಮುಗಿಸಿದೆ. ಆದರೆ, ಇದನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ’ ಎಂದು ಕಾಗೇರಿ ಕಿಡಿಕಾರಿದರು.

Advertisement. Scroll to continue reading.
Advertisement. Scroll to continue reading.

`ಮಂಜೂರಿ ಮಾಡಿಸಿದ ಸಾಕಷ್ಟು ಕೆಲಸಗಳು ಈಗಾಗಲೇ ವಿಳಂಬವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆ ಕೆಲಸದ ಗುಣಮಟ್ಟ ಕಳಪೆಯಾಗಿರುವ ಬಗ್ಗೆಯೂ ಜನ ದೂರಿದ್ದಾರೆ. ಹೀಗಿರುವಾಗ ಅದನ್ನು ತಮ್ಮ ಸಾಧನೆ ಎಂದು ಬಣ್ಣಿಸಿಕೊಳ್ಳುವ ನೈತಿಕತೆ ಶಾಸಕರಿಗೆ ಇಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

`ಕೆಲವಡೆ ಕಾಮಗಾರಿ ಮುಗಿದು ಆರು ತಿಂಗಳ ನಂತರ ಜನತೆಗೆ ಲಭ್ಯವಾಗಿದೆ. ನಾನು ಮಂಜೂರಿ ಮಾಡಿಸಿದ್ದ ರಸ್ತೆ ಸೇರಿ ವಿವಿಧ ಕಾಮಗಾರಿಗಳ ಕೆಲಸ ಆಗುವುದು ಇನ್ನೂ ಬಾಕಿಯಿದೆ. ಕೆಲವಡೆ ಮಂಜೂರಿಯಾದ ಹಣವನ್ನು ಬಳಸದೇ ಕೆಲಸಕ್ಕೆ ತಡೆವೊಡ್ಡಲಾಗಿದೆ’ ಎಂದು ದೂರಿದರು.

`ಹೊಸ ಶಾಸಕರು ಹಳೆ ಕೆಲಸವನ್ನು ಮಾಡಲೇಬೇಕು. ಅದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಹೊಸ ಕೆಲಸವನ್ನು ಶುರು ಮಾಡಬೇಕು. ಈ ಹಿಂದೆ ಮಂಜೂರಿ ಮಾಡಿದ್ದ ಕೆಲಸ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. `ಭ್ರಷ್ಟಾಚಾರ, ಬೆಲೆ ಏರಿಕೆ, ಒಲೈಕೆ ರಾಜಕಾರಣದಿಂದ ಕಾಂಗ್ರೆಸ್ ಸರ್ಕಾರ ದಿಕ್ಕೆಟ್ಟಿದೆ. ಆಡಳಿತದ ಮೇಲೆ ಜನರ ಆಕ್ರೋಶ ಹೆಚ್ಚಾಗಿದೆ’ ಎಂದು ದೂರಿದರು.

`ರಾಜ್ಯ ಸರ್ಕಾರದ ಆಡಳಿತದಲ್ಲಿ ಗಂಭೀರತೆ ಇಲ್ಲದ ಕಾರಣ ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಟವರ್ ನಿರ್ಮಾಣ, ಹೆದ್ದಾರಿ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಆಡಳಿತ ಕ್ರಮ ಆಗುತ್ತಿಲ್ಲ. ಇದರಿಂದ ಎಲ್ಲಾ ಕೆಲಸ ವಿಳಂಬವಾಗುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಉಸ್ತುವಾರಿ ಸಚಿವರು ಸಹಕಾರ ಕೊಡಬೇಕು’ ಎಂದು ಆಗ್ರಹಿಸಿದರು. `ಮೋದಿ ಹಾಗೂ ಗಡ್ಕರಿ ಅನುದಾನ ನೀಡಿದ್ದಾರೆ. ಆದರೆ, ಅಭಿವೃದ್ಧಿ ಕೆಲಸ ಆಗದೇ ಜನರಿಗೆ ಸಮಸ್ಯೆ ಆಗಿದೆ. ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ’ ಎಂದು ದೂರಿದರು.
ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದೇನು? ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

Tv9 ನೆಟ್ವರ್ಕ್ | ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

Next Post

ಕಾಳಿ ನದಿಯಲ್ಲಿ ಸರ್ಕಸ್: ಮೊಸಳೆಗೆ ಬೆದರದ ಹೆಸ್ಕಾಂ ಸಿಬ್ಬಂದಿ!

Next Post
Circus in the Kali River HESCOM staff not afraid of crocodiles!

ಕಾಳಿ ನದಿಯಲ್ಲಿ ಸರ್ಕಸ್: ಮೊಸಳೆಗೆ ಬೆದರದ ಹೆಸ್ಕಾಂ ಸಿಬ್ಬಂದಿ!

Appeasement politics by BJP too Injustice to the Hindu community!

ಬಿಜೆಪಿಯಿಂದಲೂ ಓಲೈಕೆ ರಾಜಕಾರಣ: ಹಿಂದು ಸಮುದಾಯಕ್ಕೆ ಅನ್ಯಾಯ!

ಬೈಕಿನಿಂದ ಬಿದ್ದ ಲಕ್ಷ್ಮಣ: 10 ದಿನ ನರಳಾಡಿ ಸತ್ತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.