6
  • Latest
Fair accounting irregularities Chief officer resigns from post without any resolution to investigation!

ಜಾತ್ರೆ ಲೆಕ್ಕ ಅಪರಾತಪರ: ತನಿಖೆ ಠರಾವು ಕಾಣಿಸದೇ ಹುದ್ದೆ ತ್ಯಜಿಸಿದ ಮುಖ್ಯಾಧಿಕಾರಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಜಾತ್ರೆ ಲೆಕ್ಕ ಅಪರಾತಪರ: ತನಿಖೆ ಠರಾವು ಕಾಣಿಸದೇ ಹುದ್ದೆ ತ್ಯಜಿಸಿದ ಮುಖ್ಯಾಧಿಕಾರಿ!

AchyutKumar by AchyutKumar
in ಸ್ಥಳೀಯ
Fair accounting irregularities Chief officer resigns from post without any resolution to investigation!

ಯಲ್ಲಾಪುರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸುನೀಲ ಗಾವಡೆ ಅವರನ್ನು ಸರ್ಕಾರ ಇಲ್ಲಿಂದ ವರ್ಗಾಯಿಸಿದೆ. ಸಾಕಷ್ಟು ಸಾರ್ವಜನಿಕ ದೂರುಗಳ ಹಿನ್ನಲೆ ಅವರನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಎಲ್ಲರ ಜೊತೆ ಸೌಜನ್ಯವಾಗಿ ವರ್ತಿಸುವ ಸುನೀಲ ಗಾವಡೆ ಸಾರ್ವಜನಿಕ ಕೆಲಸವನ್ನು ಮಾತ್ರ ಮಾಡಿಕೊಡುತ್ತಿರಲಿಲ್ಲ. ಸಮಸ್ಯೆ ಹೇಳಿಕೊಂಡು ಬಂದವರನ್ನು ಸಮಾಧಾನ ಮಾಡಿ ಕಳುಹಿಸುವಲ್ಲಿ ಅವರು ಸಾಕಷ್ಟು ನೈಪುಣ್ಯತೆ ಪಡೆದಿದ್ದರು. ಆದರೆ, ಮೂಲ ಸಮಸ್ಯೆ ಮಾತ್ರ ಎಂದಿಗೂ ಬಗೆಹರಿಯುತ್ತಿರಲಿಲ್ಲ. ಸುನೀಲ ಗಾವಡೆ ಸದಾ ಅತ್ಯಂತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಜನ ಬೈದರು ಅದನ್ನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದರು. ಎಂದಿಗೂ ಅವರು ಸಾರ್ವಜನಿಕರನ್ನು ನಿಂದಿಸಿದ ಉದಾಹರಣೆಗಳಿಲ್ಲ.  ಕುಡಿಯುವ ನೀರು, ಒಳಚರಂಡಿ, ಬೀದಿ ಬೀದಿ ಮೀನು ಮಾರಾಟ, ತ್ಯಾಜ್ಯ ನಿರ್ವಹಣೆ ಸೇರಿ ಯಾವ ಸಮಸ್ಯೆ ಬಂದರೂ ಅದನ್ನು ಶಾಂತವಾಗಿ ಆಲಿಸುತ್ತಿದ್ದರು. ಆದರೆ, ಯಾವ ಕ್ರಮವನ್ನು ಸಹ ಸರಿಯಾಗಿ ಕೈಗೊಳ್ಳುತ್ತಿರಲಿಲ್ಲ.`ಕೆಲಸ ಮಾಡಿಕೊಡುವುದಿಲ್ಲ’ ಎಂಬುದು ಅವರ ಮೇಲಿದ್ದ ಬಹುದೊಡ್ಡ ಆರೋಪವಾಗಿದ್ದು, ಅದನ್ನು ಸರಿಪಡಿಸಲು ಪ ಪಂ ಅಧ್ಯಕ್ಷರಿಂದ ಸಹ ಸಾಧ್ಯವಾಗಿರಲಿಲ್ಲ.

ಸುನೀಲ ಗಾವಡೆ ಅವರ ಅವಧಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಆಡಳಿತ ವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ್ದರು. ಕಡತ ಕಳ್ಳತನ, ಅಕ್ರಮ-ಅವ್ಯವಹಾರಗಳ ದೂರುಗಳಿಗೆ ಲೆಕ್ಕವೇ ಇರಲಿಲ್ಲ. ಪಟ್ಟಣ ಪಂಚಾಯತ ಸದಸ್ಯರು ಸಹ ಸುನೀಲ ಗಾವಡೆ ವಿರುದ್ಧ ತಿರುಗಿ ಬಿದ್ದಿದ್ದರು. ಎರಡು ವರ್ಷಗಳಿಂದ ಜಾತ್ರೆ ಲೆಕ್ಕಾಚಾರ ನೀಡುವಂತೆ ಪೀಡಿಸಿದರೂ ಪ ಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಅದನ್ನು ನೀಡಿರಲಿಲ್ಲ. ಕೊನೆಗೆ ಲೆಕ್ಕ ನೀಡಿದಾಗ 11 ಲಕ್ಷಕ್ಕೂ ಅಧಿಕ ಹಣ ಅಪರಾತಪರ ನಡೆದಿರುವುದು ಬೆಳಕಿಗೆ ಬಂದಿತ್ತು. `ಅಕ್ರಮವನ್ನು ತನಿಖೆಗೆ ಒಳಪಡಿಸುವೆ’ ಎಂದು ಭರವಸೆ ನೀಡಿ ಪ ಪಂ ಸದಸ್ಯರನ್ನು ಸುನೀಲ ಗಾವಡೆ ಸುಮ್ಮನಾಗಿಸಿದ್ದರು. ಆದರೆ, ಅಕ್ರಮದ ಬಗ್ಗೆ ಯಾವ ತನಿಖೆಯೂ ಪ್ರಗತಿ ಕಾಣಲಿಲ್ಲ. ಅಕ್ರಮದ ಬಗ್ಗೆ ತನಿಖೆಗಾಗಿ ಅವರು ಠರಾವು ಮಂಡಿಸಬೇಕಿದ್ದು, ಅದನ್ನು ಜಿಲ್ಲಾಡಳಿತದ ಕಚೇರಿಗೆ ರವಾನಿಸಿದ ದಾಖಲೆಯನ್ನು ಮುಂದಿನ ಸಭೆಯ ಮುಂದಿಡಬೇಕಿತ್ತು. ಆದರೆ, ಆ ಕೆಲಸ ಆಗಲಿಲ್ಲ.

Advertisement. Scroll to continue reading.

ಸುನೀಲ ಗಾವಡೆ ವಿರುದ್ಧ ಸಾರ್ವಜನಿಕ ದೂರು ಹೆಚ್ಚಳವಾದ ಕಾರಣ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿತು. ಮಾರ್ಚ 29ರಂದು ಅವರನ್ನು ಕಾರವಾರ ನಗರಸಭೆಯ ಆರೋಗ್ಯ ನಿರೀಕ್ಷಕ ಹುದ್ದೆಗೆ ವರ್ಗಾಯಿಸಿ ಆದೇಶ ಹೊರಡಿಸಿತು. ಯಲ್ಲಾಪುರ ಪಟ್ಟಣ ಪಂಚಾಯತಗೆ ಮುಂಡಗೋಡು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಂದ್ರಶೇಖರ ಬಿ ಅವರನ್ನು ಪ್ರಭಾರಿಯನ್ನಾಗಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತು.

Advertisement. Scroll to continue reading.
Previous Post

ಹೆಸರಿಗೆ ಯೋಗ ಶಿಕ್ಷಕ: ಆತ ಮಾಡಿದ್ದು ನಶೆ ಏರಿಸುವ ಕೆಲಸ!

Next Post

ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!

Next Post

ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ