6
  • Latest
Obstruction of police duty Police arrest police officer without releasing him!

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

AchyutKumar by AchyutKumar
March 31, 2025
in ಸ್ಥಳೀಯ
Obstruction of police duty Police arrest police officer without releasing him!
advt advt advt
ADVERTISEMENT

ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ ದಾರಿ ತೋರಿಸಿದ್ದಾರೆ.

ಮಾರ್ಚ 31ರಂದು ನಸುಕಿನ 2.30ಕ್ಕೆ ಕಾರವಾರದ ಗುನಗಿವಾಡದಲ್ಲಿ ದೊಡ್ಡದಾಗಿ ಮೈಕ್ ಅಳವಡಿಸಲಾಗಿತ್ತು. ಗಿಂಡಿ ದೇವಸ್ಥಾನದ ಬಳಿಯ ಸದ್ದು ಕೇಳಿ ಅಲ್ಲಿ ಪೊಲೀಸರು ಧಾವಿಸಿದ್ದರು. 112 ವಾಹನದ ಜೊತೆ ಪಿಎಸ್‌ಐ ಗಜೇಂದ್ರ ಅವರು ಅಲ್ಲಿಗೆ ತೆರಳಿದ್ದರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿoದ ಧ್ವನಿವರ್ಧಕ ಬಂದ್ ಮಾಡುವಂತೆ ಅವರು ತಾಕೀತು ಮಾಡಿದರು. ಸ್ವತಃ ಮುಂದೆ ನಿಂತು ಧ್ವನಿವರ್ಧಕವನ್ನು ಬಂದ್ ಮಾಡಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಅದಾದ ನಂತರ ಮುಂದಿನ ಕರ್ತವ್ಯಕ್ಕೆ ತೆರಳುತ್ತಿದ್ದ ಪಿಎಸ್‌ಐ ಗಜೇಂದ್ರ ಅವರಿಗೆ ಕರಾವಳಿ ಕಾವಲುಪಡೆಯ ಪೊಲೀಸ್ ಸಿಬ್ಬಂದಿ ಕೃಷ್ಣಾನಂದ ಗುನಗಿ ಎದುರಾದರು. `ಧ್ವನಿವರ್ಧಕ ಹಚ್ಚಿದ ಬಗ್ಗೆ ದೂರು ನೀಡಿದವರು ಯಾರು?’ ಧ್ವನಿ ವರ್ಧಕ ಬಂದ್ ಮಾಡಿಸಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದರು. `ನಾನು ಪೊಲೀಸ್ ಇದ್ದೇನೆ. ನನಗೂ ಕಾನೂನು ಗೊತ್ತಿದೆ’ ಎಂದು ಜೋರಾಗಿ ಮಾತನಾಡಿದರು. ಇದರೊಂದಿಗೆ ಅಲ್ಲಿದ್ದ ಇನ್ನಿತರರಿಗೂ `ಪೊಲೀಸರನ್ನು ಪ್ರಶ್ನಿಸಿ’ ಎಂದು ಪ್ರಚೋದನೆ ನೀಡಿದರು.

Advertisement. Scroll to continue reading.

ಆಗ, ಅಲ್ಲಿದ್ದ ಜನ ಪೊಲೀಸ್ ವಾಹನವನ್ನು ಅಡ್ಡಗಟ್ಟಿದರು. ಪೊಲೀಸರ ಜೊತೆ ಜಗಳ ಮಾಡಿ ಕೆಟ್ಟದಾಗಿ ಬೈದರು. ಅದರಲ್ಲಿಯೂ ಮುಖ್ಯವಾಗಿ ಪ್ರದೀಪ ಶಿವಾ ಗುನಗಿ, ರಾಜೇಶ ಸುಧಾಕರ ಗುನಗಿ ಹಾಗೂ ಪ್ರದೀಪ ದುರ್ಗಿ ಗುನಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಹೀಗಾಗಿ ಪೊಲೀಸರು ಆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.

ನ್ಯಾಯಾಲಯವೂ ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರನ್ನು ಸೇರಿ ಸರ್ಕಾರಿ ನೌಕರರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ, ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ.

ShareSendTweetShare
ADVERTISEMENT
Previous Post

ಪ್ರವಾಸಿ ಬೋಟಿನವರ ರಂಪಾಟ: ಅಮಾಯಕ ಚಾಲಕನಿಗೆ ಥಳಿತ!

Next Post

ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!

Next Post

ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!

Scissors experiment for Pukkatte campaign A picture parade of female students in a garbage truck!

ಪುಕ್ಕಟ್ಟೆ ಪ್ರಚಾರಕ್ಕೆ ಕತ್ತರಿ ಪ್ರಯೋಗ: ತ್ಯಾಜ್ಯ ತುಂಬುವ ತೆರೆದ ವಾಹನದಲ್ಲಿ ವಿದ್ಯಾರ್ಥಿನಿಯರ ಚಿತ್ರ ಮೆರವಣಿಗೆ!

Outcry against the innocent.. Riots at the police station too Bhupa finally goes to jail!

ಅಮಾಯಕರ ವಿರುದ್ಧ ಕೂಗಾಟ.. ಪೊಲೀಸ್ ಠಾಣೆಯಲ್ಲಿಯೂ ರಂಪಾಟ: ಕೊನೆಗೂ ಜೈಲು ಸೇರಿದ ಭೂಪ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.