6
  • Latest
Obstruction of police duty Police arrest police officer without releasing him!

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪೊಲೀಸಪ್ಪನನ್ನು ಬಿಡದೇ ಬಂಧಿಸಿದ ಪೊಲೀಸರು!

AchyutKumar by AchyutKumar
in ಸ್ಥಳೀಯ
Obstruction of police duty Police arrest police officer without releasing him!

ದೊಡ್ಡದಾಗಿ ಧ್ವನಿವರ್ಧಕ ಹಚ್ಚುವ ವಿಷಯದಲ್ಲಿ ಪೊಲೀಸರ ಜೊತೆ ಜಗಳ ಮಾಡಿ ಹೊಡೆದಾಟ ನಡೆಸಿದ ಪೊಲೀಸ್ ಸಿಬ್ಬಂದಿಯನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಮೂವರು ಸಹಚರರಿಗೂ ಜೈಲಿನ ದಾರಿ ತೋರಿಸಿದ್ದಾರೆ.

ADVERTISEMENT

ಮಾರ್ಚ 31ರಂದು ನಸುಕಿನ 2.30ಕ್ಕೆ ಕಾರವಾರದ ಗುನಗಿವಾಡದಲ್ಲಿ ದೊಡ್ಡದಾಗಿ ಮೈಕ್ ಅಳವಡಿಸಲಾಗಿತ್ತು. ಗಿಂಡಿ ದೇವಸ್ಥಾನದ ಬಳಿಯ ಸದ್ದು ಕೇಳಿ ಅಲ್ಲಿ ಪೊಲೀಸರು ಧಾವಿಸಿದ್ದರು. 112 ವಾಹನದ ಜೊತೆ ಪಿಎಸ್‌ಐ ಗಜೇಂದ್ರ ಅವರು ಅಲ್ಲಿಗೆ ತೆರಳಿದ್ದರು. ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿoದ ಧ್ವನಿವರ್ಧಕ ಬಂದ್ ಮಾಡುವಂತೆ ಅವರು ತಾಕೀತು ಮಾಡಿದರು. ಸ್ವತಃ ಮುಂದೆ ನಿಂತು ಧ್ವನಿವರ್ಧಕವನ್ನು ಬಂದ್ ಮಾಡಿಸಿದರು.

ಅದಾದ ನಂತರ ಮುಂದಿನ ಕರ್ತವ್ಯಕ್ಕೆ ತೆರಳುತ್ತಿದ್ದ ಪಿಎಸ್‌ಐ ಗಜೇಂದ್ರ ಅವರಿಗೆ ಕರಾವಳಿ ಕಾವಲುಪಡೆಯ ಪೊಲೀಸ್ ಸಿಬ್ಬಂದಿ ಕೃಷ್ಣಾನಂದ ಗುನಗಿ ಎದುರಾದರು. `ಧ್ವನಿವರ್ಧಕ ಹಚ್ಚಿದ ಬಗ್ಗೆ ದೂರು ನೀಡಿದವರು ಯಾರು?’ ಧ್ವನಿ ವರ್ಧಕ ಬಂದ್ ಮಾಡಿಸಿದ್ದು ಏಕೆ?’ ಎಂದು ಅವರು ಪ್ರಶ್ನಿಸಿದರು. `ನಾನು ಪೊಲೀಸ್ ಇದ್ದೇನೆ. ನನಗೂ ಕಾನೂನು ಗೊತ್ತಿದೆ’ ಎಂದು ಜೋರಾಗಿ ಮಾತನಾಡಿದರು. ಇದರೊಂದಿಗೆ ಅಲ್ಲಿದ್ದ ಇನ್ನಿತರರಿಗೂ `ಪೊಲೀಸರನ್ನು ಪ್ರಶ್ನಿಸಿ’ ಎಂದು ಪ್ರಚೋದನೆ ನೀಡಿದರು.

Advertisement. Scroll to continue reading.

ಆಗ, ಅಲ್ಲಿದ್ದ ಜನ ಪೊಲೀಸ್ ವಾಹನವನ್ನು ಅಡ್ಡಗಟ್ಟಿದರು. ಪೊಲೀಸರ ಜೊತೆ ಜಗಳ ಮಾಡಿ ಕೆಟ್ಟದಾಗಿ ಬೈದರು. ಅದರಲ್ಲಿಯೂ ಮುಖ್ಯವಾಗಿ ಪ್ರದೀಪ ಶಿವಾ ಗುನಗಿ, ರಾಜೇಶ ಸುಧಾಕರ ಗುನಗಿ ಹಾಗೂ ಪ್ರದೀಪ ದುರ್ಗಿ ಗುನಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿದರು. ಹೀಗಾಗಿ ಪೊಲೀಸರು ಆ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು.

Advertisement. Scroll to continue reading.

ನ್ಯಾಯಾಲಯವೂ ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪೊಲೀಸರನ್ನು ಸೇರಿ ಸರ್ಕಾರಿ ನೌಕರರ ಮೇಲೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ, ನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಪೊಲೀಸರು ಹೇಳಿದ್ದಾರೆ.

Previous Post

ಪ್ರವಾಸಿ ಬೋಟಿನವರ ರಂಪಾಟ: ಅಮಾಯಕ ಚಾಲಕನಿಗೆ ಥಳಿತ!

Next Post

ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!

Next Post

ಕಳ್ಳ ಬಂದ ಕಳ್ಳ: ಗ್ರಾಸೀಂ ಮ್ಯಾನೇಜರ್ ಮನೆಯಲ್ಲಿ ಕೈ ಚಳಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ