6
  • Latest
Uttara Kannada A new path for forest transportation!

ಉತ್ತರ ಕನ್ನಡ: ಕಾಡು ಸಂಚಾರಕ್ಕೆ ಹೊಸ ಪಥ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಉತ್ತರ ಕನ್ನಡ: ಕಾಡು ಸಂಚಾರಕ್ಕೆ ಹೊಸ ಪಥ!

AchyutKumar by AchyutKumar
April 13, 2025
in ರಾಜ್ಯ
Uttara Kannada A new path for forest transportation!
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಸಂಚಾರಕ್ಕೆ ಜಿಲ್ಲಾಡಳಿತ ಸ್ಪಷ್ಠ ಮಾರ್ಗಸೂಚಿ ರಚನೆಗೆ ಸಿದ್ಧತೆ ನಡೆಸಿದೆ. ಎಲ್ಲೆಂದರಲ್ಲಿ ಕಾಡು ಸುತ್ತಿ ದಾರಿ ತಪ್ಪುವವರ ಸಂಖ್ಯೆ ತಪ್ಪಿಸುವುದಕ್ಕಾಗಿ 32 ಚಾರಣ ದಾರಿಯ ನಕ್ಷೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಪ್ರವಾಸೋದ್ಯಮ ಅಭಿವೃದ್ದಿಯ ಜೊತೆ ಸುರಕ್ಷಿತ ಚಾರಣ ನಡೆಸುವವರಿಗೆ ಉತ್ತೇಜನ ನೀಡಲು ಜಿಲ್ಲಾಡಳಿತ ಆಸಕ್ತಿವಹಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಸಾಹಸ ಪ್ರವಾಸೋದ್ಯಮಗಳಿಗಾಗಿ ಇಲ್ಲಿ ಸಾವಿರಾರು ಜನ ಬರುತ್ತಾರೆ. ಆದರೆ, ಕಾಡಿನ ದಾರಿ ಅರಿವಿಲ್ಲದಿರುವಿಕೆ, ಸೂಕ್ತ ಮಾರ್ಗದರ್ಶಿಗಳ ಕೊರತೆ, ಮಾಹಿತಿ ನೀಡುವವರ ಅಭಾವದಿಂದ ಪ್ರವಾಸೋದ್ಯಮದ ಮುಖ ತೆರೆದುಕೊಂಡಿಲ್ಲ. ಈ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೆ ಅಪಾರ ಅವಕಾಶವಿದ್ದರೂ, ಅದಕ್ಕೆ ಯಾರೂ ಒತ್ತು ನೀಡಿಲ್ಲ.

ADVERTISEMENT
ADVERTISEMENT

ಸದ್ಯ, ಉತ್ತರ ಕನ್ನಡ ಜಿಲ್ಲಾಡಳಿತ ಪರಿಸರ ಪ್ರವಾಸೋದ್ಯಮದ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ತಯಾರಿ ನಡೆಸಿದೆ. ವಿವಿಧ ಅರಣ್ಯ ವಿಭಾಗಗಳಲ್ಲಿ ಒಟ್ಟು 32 ಚಾರಣ ಪಥಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಚಾರಣಿಗರ ಸಂಚಾರಕ್ಕೆ ಅಧಿಕೃತವಾಗಿ ಅವಕಾಶ ಮಾಡಿಕೊಡುವ ಸಂಬoಧ ಯೋಜನೆ ಸಿದ್ಧಗೊಂಡಿದೆ. ಪಶ್ಚಿಮ ಘಟ್ಟದ ಗಿರಿ ಕಂದರಗಳು, ಬೇಸಿಗೆಯಲ್ಲೂ ಹರಿಯುವ ನದಿಗಳು, ಸಮುದ್ರದ ತಡಿ ವಿಶಿಷ್ಟ ಜೀವ ಸಂಕುಲಗಳನ್ನು ಪ್ರಪಂಚಕ್ಕೆ ಪರಿಚಯಿಸುವ ತಯಾರಿ ಜೋರಾಗಿ ನಡೆದಿದೆ.

Advertisement. Scroll to continue reading.

ಸಾತೊಡ್ಡಿ ಜಲಪಾತ, ಯಾಣ, ಸಿಂಥೇರಿ ರಾಕ್’ನ್ನು ಒಳಗೊಂಡು ಕರಾವಳಿಯ ಕಡಲತೀರಗಳು ಜಗತ್ತಿನ ಎಲ್ಲಡೆ ಪ್ರಸಿದ್ಧಿ ಪಡೆದಿದೆ. ಇವುಗಲ ವೀಕ್ಷಣೆಗೆ ಪ್ರವಾಸಿಗರು ಆಗಮಿಸಿದರೂ, ಪರಿಸರ ಪೂರಕ ಚಟುವಟಿಕೆಗಳು ಸರಿಯಾಗಿಲ್ಲ. ಅವುಗಳನ್ನು ಶಿಸ್ತುಬದ್ಧವನ್ನಾಗಿಸುವ ಜೊತೆ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶ ಜಿಲ್ಲಾಡಳಿತಕ್ಕಿದೆ.

ಪ್ರವಾಸಿಗರು ಯಾವುದೇ ಇಲಾಖೆಗಳಿಗೆ ಮಾಹಿತಿ ನೀಡದೇ ಕಾಡಿನಲ್ಲಿ ಚಾರಣ ಮಾಡುವುದು ಸಹ ವಿವಿಧ ಇಲಾಖೆಗೆ ದೊಡ್ಡ ತಲೆನೋವಾಗಿದೆ. ಅದನ್ನು ತಪ್ಪಿಸಲು ಮಾರ್ಗದರ್ಶಿ ಕೈಪಿಡಿ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ. ಜಲಪಾತಗಳಲ್ಲಿ ಬಿದ್ದು ಪ್ರವಾಸಿಗರು ಸಾವನ್ನವುವುದು, ಕಾಡಿನ ನಡುವೆ ಸಿಲುಕಿ ಮರಳಲು ಮಾರ್ಗ ತಿಳಿಯದೇ ತೊಂದರೆಗಾಗುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗುತ್ತಿದೆ. ಕಾಡಿನಲ್ಲಿ ಗಿಡ, ಮರಗಳಿಗೆ ಹಾನಿ ಮಾಡುವುದು, ಕಾಡು ಪ್ರಾಣಿಗಳ ಬೇಟೆ, ಬೆಂಕಿ ಹಚ್ಚುವುದು, ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗಳನ್ನು ಎಸೆಯುವುದು, ಜಲಮೂಲಗಳನ್ನು ಮಲಿನ ಮಾಡುವುದು, ಬಂಡೆಗಳ ಮೇಲೆ ಚಿತ್ರಕಲೆ ಮುಂತಾದ ಹಲವು ವಿಕೃತಿಗಳ ತಡೆಯ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.

Advertisement. Scroll to continue reading.

ಇನ್ನೂ ದಾಂಡೇಲಿ, ಶಿರಸಿ, ಯಲ್ಲಾಪುರ ಸೇರಿ ಹಲವೆಡೆ ರೆಸಾರ್ಟ್, ಹೋಂ ಸ್ಟೇ ಮುಂತಾದವುಗಳ ಪ್ರವಾಸೋದ್ಯಮಿಗಳು ಕಾಡಿನಲ್ಲಿ ಪ್ರವಾಸಿಗರಿಗೆ ಚಾರಣ ಮಾಡಿಸುತ್ತಿದ್ದಾರೆ. ಆದರೆ, ಇದರಿಂದ ಸರ್ಕಾರಕ್ಕೆ ದೊಡ್ಡ ಆದಾಯವೂ ಇಲ್ಲ. ಅವರ ಮೇಲೆ ನಿಯಂತ್ರಣವೂ ಇಲ್ಲ. ಚಾರಣಿಗರು ಅಪಾಯಕ್ಕೆ ಸಿಲುಕಿದಾಗ ಮಾತ್ರ ಸರ್ಕಾರಿ ನೆರವು ಯಾಚಿಸುತ್ತಿದ್ದು, ಅರಣ್ಯ ಇಲಾಖೆ ಗುರುತಿಸಿದ ಚಾರಣ ಪಥದಲ್ಲಿ ಮಾತ್ರ ಚಾರಣ ನಡೆಸಲು ಅವಕಾಶ ನೀಡುವ ಸಿದ್ಧತೆ ನಡೆದಿದೆ. ಇದರಿಂದ ಪ್ರತಿ ಪ್ರವಾಸಿಗರ ಚಲನ-ವಲನದ ಬಗ್ಗೆ ಸರ್ಕಾರಕ್ಕೂ ಲೆಕ್ಕ ಸಿಗಲಿದೆ.

ಪ್ರವಾಸಿ ಮಾರ್ಗದರ್ಶಿ ನೇಮಕಕ್ಕಾಗಿ ಈಗಾಗಲೇ ಹಲವು ಪರಿಸರಾಸಕ್ತರಿಗೆ ಅರಣ್ಯ ಇಲಾಖೆಯಿಂದ ತರಬೇತಿ ನೀಡಲಾಗಿದೆ. `ನೇಚರ್ ಗೈಡ್’ ಹೆಸರಿನ ಈ ಮಾರ್ಗದರ್ಶಕರು ಈ ಚಾರಣ ಮಾರ್ಗದಲ್ಲಿ ಅರಿವು ಮೂಡಿಸಲಿದ್ದಾರೆ. ಅರಣ್ಯದ ವಿಶೇಷಗಳ ಬಗ್ಗೆಯೂ ಅವರು ಚಾರಣಿಗರಿಗೆ ಮಾಹಿತಿ ನೀಡಲಿದ್ದಾರೆ. ಇನ್ನೂ, ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಸಹ ಚಾರಣ ಪಥಗಳನ್ನು ಗುರುತಿಸಿ, ಅಲ್ಲಿ ಪ್ರವಾಸಿಗರ ಸಂಚಾರಕ್ಕೆ ಅನುಮತಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಒಪ್ಪಿಗೆ ಕೊಟ್ಟಿಲ್ಲ.

ShareSendTweetShare
ADVERTISEMENT
Previous Post

ಅರಬ್ಬಿ ಅಲೆ: ನೀರಿನಲ್ಲಿ ಕೊಚ್ಚಿ ಹೋದವರಿಗೆ ಮರು ಜೀವ!

Next Post

ದುಡಿಯುವ ಮಗನ ದುಡುಕು ನಿರ್ಧಾರ: ಸಿದ್ದಿ ಹುಡುಗನ ಸಾವಿನಲ್ಲಿ ಅನುಮಾನ!

Next Post
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ದುಡಿಯುವ ಮಗನ ದುಡುಕು ನಿರ್ಧಾರ: ಸಿದ್ದಿ ಹುಡುಗನ ಸಾವಿನಲ್ಲಿ ಅನುಮಾನ!

Halakki scandal A foreign puppet who stepped with a puppet!

ಹಾಲಕ್ಕಿ ಹಗರಣ: ಬೊಂಬೆ ಜೊತೆ ಹೆಜ್ಜೆ ಹಾಕಿದ ವಿದೇಶಿ ಬೊಂಬೆ!

Dangerous driving A legal lesson for those who went to make reels!

ಅಪಾಯಕಾರಿ ಕಾರು ಚಾಲನೆ: ರೀಲ್ಸ್ ಮಾಡಲು ಹೋದವರ ವಿರುದ್ಧ ಕೇಸು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.