6
  • Latest
Foreign ship enters Karwar Pakistani citizen trapped at sea!

ಕಾರವಾರ ಪ್ರವೇಶಿಸಿದ ವಿದೇಶಿ ಹಡಗು: ಸಮುದ್ರದಲ್ಲಿ ಸಿಕ್ಕಿಬಿದ್ದ ಪಾಪಿಸ್ತಾನದ ಪ್ರಜೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕಾರವಾರ ಪ್ರವೇಶಿಸಿದ ವಿದೇಶಿ ಹಡಗು: ಸಮುದ್ರದಲ್ಲಿ ಸಿಕ್ಕಿಬಿದ್ದ ಪಾಪಿಸ್ತಾನದ ಪ್ರಜೆ!

AchyutKumar by AchyutKumar
in ದೇಶ - ವಿದೇಶ
Foreign ship enters Karwar Pakistani citizen trapped at sea!

ಪಾಕಿಸ್ತಾನದ ಪ್ರಜೆಯೊಬ್ಬರು ಹಡಗಿನ ಮೂಲಕ ಕಾರವಾರ ಪ್ರವೇಶಿಸಿದ್ದು, ಈ ನೆಲದ ಮೇಲೆ ಕಾಲಿಡಲು ಅವರಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಸಮುದ್ರದಲ್ಲಿಯೇ ಸಂಚರಿಸುತ್ತಿರುವ ಅವರು ಕಾರವಾರ ಬಿಟ್ಟು ತೊಲಗುವ ಸಿದ್ಧತೆ ನಡೆಸಿದ್ದಾರೆ!

ADVERTISEMENT

ಕಾರವಾರದ ವಾಣಿಜ್ಯ ಬಂದರಿಗೆ ಸೋಮವಾರ ಎಂ ಟಿ ಆರ್ ಓಶಿಯನ್ ಎಂಬ ಹಡಗು ಆಗಮಿಸಿತ್ತು. ಬಿಟಮಿನ್ ತುಂಬಿದ ಈ ಹಡಗು ಇರಾನ್ ದೇಶದಿಂದ ಹೊರಟಿದ್ದರೂ ಅದರಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬರು ಇದ್ದರು. ಜೊತೆಗೆ ಭಾರತದ 12, ಸಿರಿಯಾದ ಇಬ್ಬರು ಸಿಬ್ಬಂದಿ ಹಡಗಿನಲ್ಲಿ ಕೆಲಸಕ್ಕಿದ್ದರು. ಹಡಗು ಬಂದ ನಂತರ ಅಲ್ಲಿನ ಸಿಬ್ಬಂದಿ ಬಗ್ಗೆ ಕರಾವಳಿ ಕಾವಲು ಪಡೆ, ಪೊಲೀಸರು ಹಾಗೂ ಭದ್ರತಾ ಎಜನ್ಸಿಯವರು ವಿಚಾರಣೆ ನಡೆಸಿದರು. ಆಗ, ಪಾಕಿಸ್ತಾನದ ಒಬ್ಬ ಸಿಬ್ಬಂದಿ ಅಲ್ಲಿರುವುದು ಖಚಿತವಾಯಿತು.

ಪಾಕಿಸ್ತಾನದ ಪ್ರಜೆಯನ್ನು ಕಾರವಾರದ ನೆಲ ಸ್ಪರ್ಶಿಸಲು ಅಧಿಕಾರಿಗಳು ಬಿಡಲಿಲ್ಲ. ಜೊತೆಗೆ ಪಾಕಿಸ್ತಾನಿ ಪ್ರಜೆಯ ಮೊಬೈಲನ್ನು ವಶಕ್ಕೆಪಡೆಯುವಂತೆ ಅಧಿಕಾರಿಗಳು ಹಡಗಿನ ಕ್ಯಾಪ್ಟನಿಗೆ ಸೂಚನೆ ನೀಡಿದರು. ಮೊಬೈಲಿನಲ್ಲಿ ಇಲ್ಲಿನ ಫೋಟೋ-ಮಾಹಿತಿ ಹಂಚಿಕೊಳ್ಳುವ ಆತಂಕದ ಹಿನ್ನಲೆ ಹಡಗು ಕಾರವಾರ ಬಿಟ್ಟು ಹೊರ ಹೋದ ನಂತರವೇ ಅದನ್ನು ಮರಳಿಸಲು ಸೂಚನೆಯನ್ನು ನೀಡಿದರು.

Advertisement. Scroll to continue reading.

ಇನ್ನೂ, ಭಾರತ-ಪಾಕಿಸ್ತಾನದ ಕದನದ ನಂತರ ಕಾರವಾರಕ್ಕೆ ಎರಡು ವಿದೇಶಿ ಹಡಗು ಬಂದಿದ್ದು, ಈ ಅವಧಿಯಲ್ಲಿ ಪಾಕಿಸ್ತಾನದ ಪ್ರಜೆಯನ್ನು ತಂದ ಹಡಗು ಬಂದಿದ್ದು ಇದೇ ಮೊದಲು. ಬಿಣಗಾದ ಗ್ರಾಸಿಂ ಘಟಕಕ್ಕೆ ಅಗತ್ಯವಿರುವ ಸರಕು ತಂದಿದ್ದ ಇನ್ನೊಂದು ಹಡಗಿನಲ್ಲಿ ಇಂಡೋನೇಶಿಯಾ, ಮಯನ್ಮಾರ್ ಹಾಗೂ ಕೋರಿಯಾದ ಪ್ರಜೆಗಳಿದ್ದರು.

Advertisement. Scroll to continue reading.

ಇನ್ನೂ ಮಂಗಳವಾರ ಪಾಕಿಸ್ತಾನಿ ಪ್ರಜೆಯಿದ್ದ ಹಡಗು ಹೊರಡುವ ಸಿದ್ಧತೆ ನಡೆಸಿದೆ. ಅಗತ್ಯ ಕಾಗದಪತ್ರಗಳು ಸಿದ್ಧವಾಗುತ್ತಿದೆ. ಬುಧವಾರ ಕಾರವಾರ ಬಂದರು ವ್ಯಾಪ್ತಿಯಿಂದ ಸಂಪೂರ್ಣವಾಗಿ ಈ ಹಡಗು ಹೊರ ಹೋಗಲಿದೆ. ಇದರೊಂದಿಗೆ ಪಾಕಿಸ್ತಾನಿ ಪ್ರಜೆಯೂ ಹಡಗಿನ ಜೊತೆ ಈ ದೇಶ ಬಿಟ್ಟು ಹೋಗಲಿದ್ದಾರೆ. ಸದ್ಯ ಪಾಕಿಸ್ತಾನಿ ಪ್ರಜೆಗೆ ಅಗತ್ಯವಿರುವ ಊಟೋಪಚಾರದ ವ್ಯವಸ್ಥೆಯನ್ನು ಹಡಗಿನ ಸಿಬ್ಬಂದಿ ಸಮುದ್ರದ ನಡುವೆಯೇ ಮಾಡಿದ್ದಾರೆ.

Previous Post

ಬೈಕಿಗೆ ಗುದ್ದಿದ ಬುಲೆರೋ: ಸ್ಥಳದಲ್ಲಿಯೇ ಸಾವನಪ್ಪಿದ ಬೈಕ್ ಸವಾರ

Next Post

ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

Next Post
ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

ಉತ್ತರ ಕನ್ನಡ: ಬಿಸಿಲಿನ ಜೊತೆ ವಿದ್ಯುತ್ ಅವಘಡ ಪ್ರಮಾಣವೂ ಹೆಚ್ಚಳ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ