6
  • Latest
Congress minister falls at the feet of BJP!

ಬಿಜೆಪಿಗನ ಕಾಲಿಗೆ ಬಿದ್ದ ಕಾಂಗ್ರೆಸ್ ಸಚಿವ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಬಿಜೆಪಿಗನ ಕಾಲಿಗೆ ಬಿದ್ದ ಕಾಂಗ್ರೆಸ್ ಸಚಿವ!

AchyutKumar by AchyutKumar
in ರಾಜಕೀಯ
Congress minister falls at the feet of BJP!

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಜೆಪಿ ನಾಯಕ ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಅಧಿಕಾರದಲ್ಲಿರುವ ನಾಯಕರು ಎದುರಾಳಿ ಪಕ್ಷದ ಮುಖಂಡರ ಕಾಲಿಗೆ ಬೀಳುವುದು ರಾಜಕೀಯ ವಿದ್ಯಮಾನದಲ್ಲಿ ಅಪರೂಪದಲ್ಲಿಯೇ ಅಪರೂಪದ ದೃಶ್ಯ!

ADVERTISEMENT

ಮೊನ್ನೆ ಉಡುಪಿಯಲ್ಲಿ ನಡೆದ ಸಮಾವೇಶಕ್ಕೆ ಬಿಜೆಪಿ ಮುಖಂಡ ಪ್ರಮೋದ ಮದ್ವರಾಜ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಆ ಕಾರ್ಯಕ್ರಮಕ್ಕೆ ಹೋಗಿದ್ದರು. ಪ್ರಮೋದ ಮದ್ವರಾಜ್ ಅವರು ಕಾರಿನಿಂದ ಇಳಿದ ಕೂಡಲೇ ಅಲ್ಲಿಗೆ ಧಾವಿಸಿದ ಮಂಕಾಳು ವೈದ್ಯ ಅವರು ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು. ಈ ವೇಳೆ ಪ್ರಮೋದ ಮದ್ವರಾಜ್ ಅವರು ಮಂಕಾಳು ವೈದ್ಯ ಅವರ ಕೈ ಹಿಡಿದು ಪೂರ್ಣ ಪ್ರಮಾಣದಲ್ಲಿ ಕಾಲಿಗೆ ಬೀಳುವುದನ್ನು ತಡೆದರು.

ಬಿಜೆಪಿ ಮುಖಂಡ ಪ್ರಮೋದ ಮಧ್ವರಾಜ್ ಅವರು ಈ ಹಿಂದೆ ಮೀನುಗಾರಿಕಾ ಸಚಿವರಾಗಿದ್ದರು. ಸದ್ಯ ಮಂಕಾಳು ವೈದ್ಯ ಅವರು ಮೀನುಗಾರಿಕಾ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಈ ಇಬ್ಬರು ಒಂದೇ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಇಲಾಖೆಯಲ್ಲಿನ ಆಳ-ಅಗಲವನ್ನು ಬಲ್ಲವರಾಗಿದ್ದಾರೆ. ಮಂಕಾಳು ವೈದ್ಯ ಹಾಗೂ ಪ್ರಮೋದ ಮದ್ವರಾಜ್ ಬೇರೆ ಬೇರೆ ಪಕ್ಷದಲ್ಲಿದ್ದರೂ ವೈರತ್ವ ಹೊಂದಿಲ್ಲ. ಅವರಿಬ್ಬರ ನಡುವೆ ವಾಗ್ವಾದ-ಜಟಾಪಟಿ ನಡೆದ ನಿದರ್ಶನಗಳು ಇಲ್ಲ. ಅವರಿಬ್ಬರ ಕ್ಷೇತ್ರ ಬೇರೆ ಬೇರೆಯಾಗಿದ್ದರಿಮದ ಚುನಾವಣಾ ರಾಜಕೀಯದಲ್ಲಿಯೂ ಅವರ ನಡುವೆ ವೈಮನಸ್ಸು ಕಾಣಿಸಿಲ್ಲ.

Advertisement. Scroll to continue reading.

`ಮಂಕಾಳು ವೈದ್ಯ ಅವರಿಗಿಂತ ಪ್ರಮೋದ ಮದ್ವರಾಜ್ ಅವರು 4 ವರ್ಷ ಹಿರಿಯರು. ಹಿರಿಯರಾದ ಕಾರಣ ಗೌರವ ಸೂಚಿಸುವುದಕ್ಕಾಗಿ ಮಂಕಾಳು ವೈದ್ಯ ಅವರು ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ’ ಎಂದು ಕೆಲವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ನಡುವೆ `ಬಿಜೆಪಿ-ಕಾಂಗ್ರೆಸ್ ನಡುವೆ ನಿತ್ಯ ಕಚ್ಚಾಟ ನಡೆಯುತ್ತಿದ್ದು, ಈ ಅವಧಿಯಲ್ಲಿ ಮಂಕಾಳು ವೈದ್ಯ ಅವರು ಬಿಜೆಪಿಗರ ಕಾಲಿಗೆ ಬೀಳುವುದು ಸರಿಯಲ್ಲ’ ಎಂಬ ಅನಿಸಿಕೆಗಳು ವ್ಯಕ್ತವಾಗಿದೆ. ಸಾರ್ವಜನಿಕವಾಗಿ ಬಿಜೆಪಿಗನ ಕಾಲಿಗೆ ಬಿದ್ದ ಮಂಕಾಳು ವೈದ್ಯ ಅವರ ನಡೆಯನ್ನು ಕೆಲ ಕಾಂಗ್ರೆಸ್ಸಿಗರು ಕಟುವಾಗಿ ಟೀಕಿಸಿದ್ದಾರೆ.

Advertisement. Scroll to continue reading.
Previous Post

ಅರಣ್ಯ ಹೋರಾಟ: ಮಹಿಳೆಯರಿಗೆ ಪ್ರತ್ಯೇಕ ಘಟಕ!

Next Post

ಸಕ್ರೀಯ ರಾಜಕಾರಣಕ್ಕೆ ಆಮಂತ್ರಣ: ಹಿಂದು ಹುಲಿಯನ್ನು ಬಡಿದೆಬ್ಬಿಸಿದ ಮೈಸೂರು ಸಿಂಹ

Next Post
An invitation to active politics The Mysore Lion who roused the Hindu Tiger

ಸಕ್ರೀಯ ರಾಜಕಾರಣಕ್ಕೆ ಆಮಂತ್ರಣ: ಹಿಂದು ಹುಲಿಯನ್ನು ಬಡಿದೆಬ್ಬಿಸಿದ ಮೈಸೂರು ಸಿಂಹ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ