6
  • Latest
ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

AchyutKumar by AchyutKumar
in ರಾಜ್ಯ
ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಪುರಾತನ ಕಾಲದಿಂದಲೂ ಇದ್ದ ಮಳೆ ಮಾಪನ ಕೇಂದ್ರಗಳಲ್ಲಿ ಮಾತ್ರ ಮಳೆ ಪ್ರಮಾಣ ಸರಿಯಾಗಿ ದಾಖಲಾಗುತ್ತಿಲ್ಲ!

ADVERTISEMENT

ಮೊದಲು ಅಂಕಿ-ಸoಖ್ಯೆ ಇಲಾಖೆ ಮೂಲಕ ಈ ಮಳೆ ಮಾಪನದ ನಿರ್ವಹಣೆ ನಡೆಯುತ್ತಿತ್ತು. ಆದರೆ, 2024ರ ಜೂನ್ ಅವಧಿಯಲ್ಲಿ ಸರ್ಕಾರ ಅಂಕಿ-ಸoಖ್ಯೆ ಇಲಾಖೆಗೆವಹಿಸಿದ್ದ ಮಳೆ ಮಾಪನಾ ಕಾರ್ಯವನ್ನು ಹಿಂಪಡೆಯಿತು. ಅದಾದ ನಂತರ ಆ ಹಳೆಯ ಯಂತ್ರಗಳ ನಿರ್ವಹಣೆ ಹೊಣೆಯನ್ನು ಸರ್ಕಾರ ಯಾರಿಗೂವಹಿಸಿಲ್ಲ. ಹೀಗಾಗಿ ಹಳೆಯ ಯಂತ್ರಗಳು ಇದೀಗ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಹಳೆಯ ಯಂತ್ರಗಳ ನಿರ್ವಹಣೆ ಹೊಣೆ ಯಾರದ್ದು? ಎಂಬುದು ಇದೀಗ ಯಾರಿಗೂ ಗೊತ್ತಿಲ್ಲ. ಗ್ರಾಮ ಪಂಚಾಯತದವರನ್ನು ಪ್ರಶ್ನಿಸಿದರೆ `ನಮಗೆ ಆ ಜವಾಬ್ದಾರಿವಹಿಸಿಲ್ಲ’ ಎನ್ನುತ್ತಾರೆ. ತಹಶೀಲ್ದಾರ್ ಕಚೇರಿಯವರನ್ನು ಕೇಳಿದರೆ `ನಮಗೂ ಆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ. ಸಾಂಖಿಕ ಇಲಾಖೆಯವರನ್ನು ಕೇಳಿದರೆ `ಕಳೆದ ವರ್ಷವೇ ಆ ಹೊಣೆಯಿಂದ ನಾವು ಮುಕ್ತರಾಗಿದ್ದೇವೆ’ ಎನ್ನುತ್ತಾರೆ. ಇನ್ನೂ, ಕೃಷಿ-ತೋಟಗಾರಿಕೆ ಇಲಾಖೆಯವರು ಸಹ `ಆ ಮಳೆ ಮಾಪನ ಯಂತ್ರಕ್ಕೂ ನಮಗೂ ಸಂಬAಧ ಇಲ್ಲ’ ಎನ್ನುತ್ತಿದ್ದಾರೆ.

Advertisement. Scroll to continue reading.

ಹಾಗಾದರೆ, ಸದ್ಯ ಸರ್ಕಾರ ಮಳೆ ಮಾಪನ ವರದಿಯನ್ನು ಹೇಗೆ ಪಡೆಯುತ್ತದೆ? ಎಂಬ ಪ್ರಶ್ನೆಗೆ ರಾಜ್ಯ ವಿಪತ್ತು ನಿರ್ವಹಣಾ ಕೋಶದವರು ಉತ್ತರ ನೀಡಿದ್ದಾರೆ. `15 ವರ್ಷಗಳ ಹಿಂದೆಯೇ ಗ್ರಾಮ ಪಂಚಾಯತ ಮಟ್ಟದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಕೋಶದ ಯಂತ್ರಗಳನ್ನು ಅಳವಡಿಸಲಾಗಿದೆ. ಗ್ರಾ ಪಂ ಕಚೇರಿ, ಆಸ್ಪತ್ರೆ, ಶಾಲೆ ಸೇರಿ ವಿವಿಧ ಮುಖ್ಯ ಪ್ರದೇಶಗಳ ಕಚೇರಿ ಮೇಲ್ಬಾಗ ಮಳೆ ಮಾಪನ ಯಂತ್ರಗಳಿದ್ದು, ಅವುಗಳ ಆಧಾರದಲ್ಲಿ ಸರ್ಕಾರ ಮಳೆ ವರದಿ ಪಡೆಯುತ್ತಿದೆ. ಕೆಲ ತಾಂತ್ರಿಕ ತೊಂದರೆಗಳಿoದ ಮಳೆ ವರದಿ ಸ್ವೀಕಾರವಾಗದೇ ಇದ್ದಾಗ ಸಮೀಪದ ಇನ್ನೊಂದು ಯಂತ್ರದ ವರದಿಯ ಆಧಾರದಲ್ಲಿ ಮಳೆ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೋಶದ ಅಧಿಕಾರಿ ರಮೇಶ್ ಅವರು ಮಾಹಿತಿ ನೀಡಿದರು.

Advertisement. Scroll to continue reading.

`ಈಗಿರುವ ಮಳೆ ಮಾಪನ ಯಂತ್ರಗಳು ಸ್ವಯಂ ಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. ಮಳೆ ಮಾಪನ ಯಂತ್ರೋಪಕರಣಗಳನ್ನು ಖರೀದಿಸುವ ವೇಳೆ ವೆಂಡರ್’ಗಳಿಗೆ ಅದರ ನಿರ್ವಹಣೆಯ ಹೊಣೆವಹಿಸಲಾಗಿದೆ. ಅದಾಗಿಯೂ ಆಗಾಗ ವಿಪತ್ತು ನಿರ್ವಹಣಾ ಕೋಶದ ವಿಜ್ಞಾನಿಗಳು ಯಂತ್ರಗಳ ಪರಿಶೀಲನೆ ಮಾಡುತ್ತಿದ್ದಾರೆ’ ಎಂದು ಅವರು ವಿವರಿಸಿದರು.

ಸದ್ಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೈ ಅಳತೆ ಮೂಲಕ ಮಳೆ ಅಳೆಯುವ ಮಾಪನಗಳಿದ್ದರೂ ಅಲ್ಲಿನ ಮಾಹಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ವಿಪತ್ತು ನಿರ್ವಹಣಾ ಕೋಶದ ಅತ್ಯಾಧುನಿಕ ಯಂತ್ರದ ಮೂಲಕ ಮಾಹಿತಿ ಸಿಗುತ್ತಿರುವುದರಿಂದ ಹಳೆಯ ಯಂತ್ರಗಳು ಹಾಳಾಗಿದ್ದರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಿಪತ್ತು ನಿರ್ವಹಣಾ ಕೋಶ ನೀಡುವ ವರದಿ ಆಧಾರದಲ್ಲಿಯೇ ಬೆಳೆ ವಿಮೆ ಕಂಪನಿಗಳು ನಷ್ಟದ ಪರಿಹಾರ ನೀಡಬೇಕಾಗಿದ್ದರಿಂದ ಹವಾಮಾನ ಆಧಾರಿತ ಬೆಳೆ ವಿಮೆ ಮಾಡಿಸುವವರು ಆತಂಕಪಡಬೇಕಾಗಿಲ್ಲ.

2025ರ ಮೇ 24ರಂದು ಯಾವ ಊರಿನಲ್ಲಿ ಎಷ್ಟು ಮಳೆಯಾಗಿದೆ? ಮುಂದಿನ ದಿನಗಳಲ್ಲಿ ಎಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ? ವಿಪತ್ತು ನಿರ್ವಹಣಾ ಕೋಶದ  ಮಳೆ ವರದಿ ಇಲ್ಲಿ ಡೌನ್‌ಲೋಡ್ ಮಾಡಿ ಓದಿ

 ಮಳೆ ವರದಿ24-05-2025

Previous Post

ಮಹಿಳಾ ಸತ್ಯಾಗ್ರಹ ಸ್ಮಾರಕದ ವ್ಯವಸ್ಥೆ.. ಸಂಪೂರ್ಣ ಅವ್ಯವಸ್ಥೆ!

Next Post

ಕೆನರಾ ಎಕ್ಸಲೆನ್ಸ್ ಕಾಲೇಜು: ಕೆಸಿಇಟಿ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ

Next Post
Canara Excellence College Children's performance in KCET exam

ಕೆನರಾ ಎಕ್ಸಲೆನ್ಸ್ ಕಾಲೇಜು: ಕೆಸಿಇಟಿ ಪರೀಕ್ಷೆಯಲ್ಲಿ ಮಕ್ಕಳ ಸಾಧನೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ