6
  • Latest
Dakota Express bus.. Notice to Durgamba!

ಡಕೋಟಾ ಎಕ್ಸಪ್ರೆಸ್ ಬಸ್ಸು.. ದುರ್ಗಾಂಬೆಗೆ ನೋಟಿಸ್ಸು!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಡಕೋಟಾ ಎಕ್ಸಪ್ರೆಸ್ ಬಸ್ಸು.. ದುರ್ಗಾಂಬೆಗೆ ನೋಟಿಸ್ಸು!

AchyutKumar by AchyutKumar
in ರಾಜ್ಯ
Dakota Express bus.. Notice to Durgamba!

ಮಳೆಗಾಲದಲ್ಲಿ ಸೋರುವ ದುರ್ಗಾಂಬಾ ಬಸ್ಸಿನಲ್ಲಿ 2 ವರ್ಷದ ಮಗುವಿನ ಜೊತೆ ಪ್ರಯಾಣ ಬೆಳಸಿದ ಮಹಿಳೆಯೊಬ್ಬರು ತಮಗೆ ಆದ ಕೆಟ್ಟ ಅನುಭವಗಳ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಧೈರ್ಯದಿಂದ ಬರೆದುಕೊಂಡಿದ್ದಾರೆ. ಆ ಬಸ್ಸಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಸೂಚನೆ ನೀಡಿದ್ದಾರೆ.

ADVERTISEMENT

2025ರ ಮೇ 20ರಂದು ಶಿರಸಿ ಮೂಲದ ಶೃದ್ಧಾ ಭಟ್ಟ ಅವರು ಅವರ ಸಹೋದರಿ ಮೇಧಾ ಭಟ್ಟ ಅವರ ಜೊತೆ ದುರ್ಗಾಂಬಾ ಬಸ್ಸು ಏರಿದ್ದರು. ಮೇಧಾ ಭಟ್ಟ ಅವರ 2 ವರ್ಷದ ಮಗು ಸಹ ಆ ಬಸ್ಸಿನಲ್ಲಿದ್ದು, ಮಳೆ ಬಂದ ಕಾರಣ ಬಸ್ಸು ಪೂರ್ತಿಯಾಗಿ ಒದ್ದೆಯಾಗಿತ್ತು. ಬಸ್ಸು ಚಲಿಸುವ ವೇಳೆ ಒಳಗೆ ಸಹ ನೀರು ತುಂಬಿತ್ತು. ಬಸ್ಸಿನ ಮೇಲ್ಚಾವಣಿಯಿಂದ ನೀರು ನುಗ್ಗುತ್ತಿತ್ತು. ಕಿಟಕಿ ಅಂಚಿನ ಪರದೆಯಿಂದಲೂ ನೀರು ಜಿನುಗುತ್ತಿತ್ತು. ಬಸ್ಸಿನ ಒಳಗಿದ್ದವರ ಆಸನಗಳು ನೆನೆದಿದ್ದವು. ಹೀಗಾಗಿ 1700ರೂ ಹಣ ಪಾವತಿಸಿ ಆ ಮೂವರು ದೇರಳಕಟ್ಟೆಯಿಂದ ಶಿರಸಿಗೆ ಬರುವಷ್ಟರಲ್ಲಿ ಬಸ್ಸಿನ ಒಳಗೆ ನರಕ ಅನುಭವಿಸಿದ್ದರು.

ಆ ಬಸ್ಸಿನಲ್ಲಿ ಪ್ರಯಾಣಿಕರ ಬ್ಯಾಗ್ ಇಡಲು ಜಾಗವಿರಲಿಲ್ಲ. ಜಾಗ ಇದ್ದರೂ ಶೃದ್ಧಾಭಟ್ಟ ಅವರಿಗೆ ಅಲ್ಲಿ ಬ್ಯಾಗ್ ಇಡಲು ಸಾರಿಗೆ ಸಿಬ್ಬಂದಿ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ಅವರು ತಮ್ಮ ಆಸನದ ಬಳಿಯೇ ಬ್ಯಾಗುಗಳನ್ನು ಇರಿಸಿಕೊಂಡರು. ಜೊತೆಗೆ ಮಳೆಗಾಲದಲ್ಲಿ ಬಸ್ಸು ಸೋರಿ ತೊಂದರೆಯಾದ ಬಗ್ಗೆ ಶಾರದಾ ಭಟ್ಟ ಅವರು ಚಾಲಕ ಅಬುಬಕ್ಕರ್ ಸಾಬ್ ಅವರಲ್ಲಿ ವಿವರಿಸಿದರು. ಇಬ್ಬರು ಹೆಣ್ಣು ಮಕ್ಕಳನ್ನು ನೋಡಿದ ಚಾಲಕ ಅವರ ಬಳಿ ನಿಂದನಾರ್ಹವಾಗಿ ಮಾತನಾಡಿದರು. `ಸಮಸ್ಯೆ ಇದ್ದರೆ ಆಫೀಸಿಗೆ ಸಂಪರ್ಕಿಸಿ’ ಎಂದು ನುಣಚಿಕೊಂಡರು.

Advertisement. Scroll to continue reading.

ಆ ಬಸ್ಸಿನಲ್ಲಿ ಸುರಕ್ಷತೆಯ ಯಾವ ಮಾರ್ಗಗಳು ಶೃದ್ಧಾ ಭಟ್ಟ ಅವರಿಗೆ ಕಾಣಲಿಲ್ಲ. ಬಸ್ಸಿಗೆ ಬಾಗಿಲು ಸಹ ಇರಲಿಲ್ಲ. ಎಲ್ಲಾ ಕಡೆಯಿಂದ ನೀರು ಒಳನುಗ್ಗಿದ ಪರಿಣಾಮ 2 ವರ್ಷದ ಮಗು ಸಂಪೂರ್ಣವಾಗಿ ನೆನೆದಿತ್ತು. ಈ ಬಗ್ಗೆ ಚಾಲಕನಿಗೆ ಹೇಳಿದಾಗ ಜವಾಬ್ದಾರಿಯಿಂದ ವರ್ತಿಸಲಿಲ್ಲ. ಆ ವೇಳೆ ಅಲ್ಲಿದ್ದ ಇನ್ನೊಬ್ಬ ಚಾಲಕರು ಬಸ್ಸಿನಲ್ಲಿದ್ದವರನ್ನು ಹೊನ್ನಾವರ ಪೊಲೀಸ್ ಠಾಣೆಗೆ ತಲುಪಿಸಿದರು. ಅಲ್ಲಿನ ಪೊಲೀಸರು ಪ್ರಯಾಣಿಕರ ಅಳಲು ಆಲಿಸುವಾಗ ಚಾಲಕ ಅಬ್ಬು ಬಕ್ಕರ್ ಅಲ್ಲಿಂದ ಓಡಿ ಪರಾರಿಯಾದರು. ಬಸ್ಸಿನ ಮಾಲಕರಿಗೆ ಫೋನ್ ಮಾಡಿದಾಗ ಪೊಲೀಸರ ಹೆಸರು ಕೇಳಿದ ತಕ್ಷಣ ಅವರು ಸ್ವಿಚ್ ಆಫ್ ಮಾಡಿದರು.

Advertisement. Scroll to continue reading.

ಶೃದ್ಧಾ ಹಾಗೂ ಮೇಧಾ ಭಟ್ಟ ಅವರು ಮಗುವಿನ ಜೊತೆ ರಾತ್ರಿ 1ಗಂಟೆಯಿ0ದ ಬೆಳಗ್ಗೆ 5ಗಂಟೆಯವರೆಗೂ ಪೊಲೀಸ್ ಠಾಣೆಯಲ್ಲಿಯೇ ಆಶ್ರಯಪಡೆದರು. ತಮಗಾದ ಅನುಭವ ಹಾಗೂ ಬಸ್ಸಿನ ಅವ್ಯವಸ್ಥೆಯ ಬಗ್ಗೆ ಶೃದ್ಧಾ ಭಟ್ಟ ಅವರು ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡರು. ದೇರಳಕಟ್ಟೆಯ ಆಸ್ಪತ್ರೆಗಳಿಗೆ ಹೋಗುವ ಅನೇಕ ರೋಗಿಗಳು ಈ ಮಾರ್ಗ ಬಳಸುತ್ತಿದ್ದು, ಅವರಿಗೆ ಸಮಸ್ಯೆಯಾದರೆ ಗತಿ ಏನು? ಎಂದು ಅವರು ಪ್ರಶ್ನಿಸಿದ್ದರು. ಸಾಕಷ್ಟು ಜನ ಬಸ್ ಸೇವೆಯ ಬಗ್ಗೆ ಕಮೆಂಟ್ ಮೂಲಕ ದೂರಿದರು.

ಈ ಎಲ್ಲಾ ವಿಷಯ ಗಮನಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಬಸ್ಸಿನ ಬಗ್ಗೆ ತನಿಖೆಗೆ ಸೂಚನೆ ನೀಡಿದರು. ಹೊನ್ನಾವರದ ಸಾರಿಗೆ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ, ಆ ಬಗ್ಗೆ ಶಾರದಾ ಭಟ್ಟ ಅವರ ಪೊಸ್ಟಿನ ಕಮೆಂಟ್ ಬಾಕ್ಸಿನಲ್ಲಿಯೇ ಅದರ ಮಾಹಿತಿ ನೀಡಿದರು.

Previous Post

ಕನ್ನಡವಾಣಿ: ಪೊಲೀಸ್ ತನಿಖೆಗೆ ನ್ಯಾಯಾಲಯದ ತಡೆ!

Next Post

ಕೈಗಾ: ಅಡುಗೆ ಮನೆಗೆ ಬಂದ ನಾಗ!

Next Post
Kaiga The snake came to the kitchen!

ಕೈಗಾ: ಅಡುಗೆ ಮನೆಗೆ ಬಂದ ನಾಗ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ