6
  • Latest
Vijay Mallya Airlines scam: Naval Commandant's account also affected!

ವಿಜಯಮಲ್ಯಾ ಏರ್‌ಲೈನ್ಸಿನಲ್ಲಿ ಅವ್ಯವಹಾರ: ಹಳಿಯಾಳದ ನೇವಲ್ ಕಮಾಡೆಂಟ್ ಖಾತೆಗೂ ಕನ್ನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಿಜಯಮಲ್ಯಾ ಏರ್‌ಲೈನ್ಸಿನಲ್ಲಿ ಅವ್ಯವಹಾರ: ಹಳಿಯಾಳದ ನೇವಲ್ ಕಮಾಡೆಂಟ್ ಖಾತೆಗೂ ಕನ್ನ!

AchyutKumar by AchyutKumar
May 27, 2025
in ಸ್ಥಳೀಯ
Vijay Mallya Airlines scam: Naval Commandant's account also affected!
advt advt advt
ADVERTISEMENT

ಹಳಿಯಾಳದಲ್ಲಿ ವಾಸವಾಗಿರುವ ನಿವೃತ್ತ ನೇವಲ್ ಕಮಾಡೆಂಟ್ ಉಮಾಕಾಂತ ದೇಶಪಾಂಡೆ ಅವರು ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಉಮಾಕಾಂತ ದೇಶಪಾಂಡೆ ಅವರಿಗೆ ಅವರ ಮಗಳು ಹೇಳಿದ ನಂತರವೇ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಹಳಿಯಾಳದ ತಿಲಕ್ ರೋಡಿನಲ್ಲಿ ಉಮಾಕಾಂತ ದೇಶಪಾಂಡೆ ಅವರು ಮನೆ ಮಾಡಿಕೊಂಡಿದ್ದಾರೆ. ಅವರಿಗೆ ಸಿಬಿಐ ಅಧಿಕಾರಿ ಎಂಬ ಹೆಸರನಲ್ಲಿ ಫೋನ್ ಮಾಡಿದ ಮಹಿಳೆ 15 ಲಕ್ಷ ರೂ ಹಣ ಎಗರಿಸಿದ್ದು, ಇನ್ನಷ್ಟು ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ವೇಳೆ ಉಮಾಕಾಂತ ದೇಶಪಾಂಡೆ ಅವರ ಪುತ್ರಿ ಆಗಮಿಸಿ ಡಿಜಿಟಲ್ ಅರೆಸ್ಟ್ ಹಾಗೂ ಸೈಬರ್ ಅಪರಾಧದ ಬಗ್ಗೆ ಅರಿವು ಮೂಡಿಸಿ, ತಂದೆಯ ಬಳಿಯಿದ್ದ ಉಳಿದ ಹಣವನ್ನು ಉಳಿಸಿದ್ದಾರೆ.

ADVERTISEMENT
ADVERTISEMENT

`ವಿಜಯಮಲ್ಯಾ ಏರ್‌ಲೈನ್ ಕೋಟಿ ಕೋಟಿ ಅವ್ಯವಹಾರ ನಡೆದಿದೆ. ಅದರಲ್ಲಿ ನೀವು ಸಹ ಭಾಗಿಯಾಗಿದ್ದೀರಿ’ ಎಂದು ಮುಂಬೈ ಡೆಪ್ಯುಟಿ ಕಮಿಶನರ್ ಎಂದು ಪರಿಚಯಿಸಿಕೊಂಡವರೊಬ್ಬರು ಉಮಾಕಾಂತ ದೇಶಪಾಂಡೆ ಅವರಿಗೆ ಫೋನ್ ಮಾಡಿದ್ದರು. `ನಿಮ್ಮ ವಿರುದ್ಧ ಮನಿ ಲಾಂಡರಿoಗ್ ಪ್ರಕರಣ ದಾಖಲಾಗಿದೆ. ನಾವು ಹೇಳಿದ ಖಾತೆಗೆ 15 ಲಕ್ಷ ರೂ ಹಣ ಹಾಕಿ. ವೆರಿಪಿಕೇಶನ್ ನಂತರ ಹಣ ಮರಳಲಿದೆ’ ಎಂದು ಅವರು ಸೂಚಿಸಿದ್ದರು. ಇದನ್ನು ನಂಬಿ ಉಮಾಕಾಂತ ದೇಶಪಾಂಡೆ ಅವರು 15 ಲಕ್ಷ ರೂ ಹಾಕಿದ್ದರು. ಮರು ದಿನವೇ ಆ ಹಣ ಅವರ ಖಾತೆಗೆ ಮರಳಿ ಬಂದಿತ್ತು.

Advertisement. Scroll to continue reading.

ಅದಾದ ನಂತರ ಸಿಬಿಐ ಅಧಿಕಾರಿ ಎಂದು ಪರಿಚಯಿಸಿಕೊಂಡು ರಶ್ಮಿ ಶುಲ್ಕ ಎಂಬಾತರು ಫೋನ್ ಮಾಡಿದ್ದು, ಮತ್ತೆ ಹಳೆಯ ವಿಷಯವನ್ನು ಪ್ರಸ್ತಾಪಿಸಿದ್ದರು. `ಈ ಪ್ರಕರಣದ ಬಗ್ಗೆ ಇಡಿ ಹಾಗೂ ಸಿಬಿಐ ವಿಚಾರಣೆ ನಡೆಸಲಿದೆ. ಈ ವಿಷಯವನ್ನು ಹೊರಗೆ ಹೇಳಿದರೆ ಪೊಲೀಸರು ಬಂದು ನಿಮ್ಮನ್ನು ಬಂದಿಸಲಿದ್ದಾರೆ. 15 ಲಕ್ಷ ರೂ ಹಣ ತಾನು ಸೂಚಿಸುವ ಖಾತೆಗೆ ಹಾಕಿ. ತಾವು ತಪ್ಪು ಮಾಡಿಲ್ಲ ಎಂದಾದರೆ 24 ತಾಸಿನಲ್ಲಿ ಆ ಹಣ ಮರಳಿ ಜಮಾ ಆಗಲಿದೆ’ ರಶ್ಮಿ ಶುಲ್ಕ ನಂಬಿಸಿದ್ದರು. ಕಳೆದ ಬಾರಿ ಹಣ ಮರಳಿ ಬಂದಿರುವುದನ್ನು ನೆನಪಿಸಿಕೊಂಡ ಉಮಾಕಾಂತ ದೇಶಪಾಂಡೆ ಈ ಬಾರಿಯೂ ಅವರು ಸೂಚಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು.

Advertisement. Scroll to continue reading.

`ಹೇಗೂ ತಾನೂ ತಪ್ಪು ಮಾಡಿಲ್ಲ. ತನ್ನ ಹಣ ಎಲ್ಲಿಯೂ ಹೋಗುವುದಿಲ್ಲ’ ಎಂದು ಉಮಾಕಾಂತ ದೇಶಪಾಂಡೆ ಕಾದು ಕುಳಿತಿದ್ದರು. ಮಾರ್ಚ 13ರಂದು ಅವರು ಹಣ ಜಮಾ ಮಾಡಿದ್ದು, ಈವರೆಗೂ ಅದು ಮರಳಲಿಲ್ಲ. ಈ ನಡುವೆ ರಶ್ಮಿ ಶುಲ್ಕ ಎಂಬಾತರು ಮೇ 14ರಂದು ಮತ್ತೆ ಫೋನ್ ಮಾಡಿ, `ಎಲ್ಲಾ ಶೇರುಗಳನ್ನು ಮಾರಿ ಆ ಹಣವನ್ನು ಜಮಾ ಮಾಡಿ’ ಎಂದು ಪೀಡಿಸಲು ಶುರು ಮಾಡಿದ್ದರು. ಈ ಬಗ್ಗೆ ಉಮಾಕಾಂತ ದೇಶಪಾಂಡೆ ಅವರು ಮಗಳ ಜೊತೆ ಚರ್ಚಿಸಿದಾಗ `ಅವರೆಲ್ಲರೂ ನಕಲಿ ಅಧಿಕಾರಿಗಳು’ ಎಂದು ಗೊತ್ತಾಯಿತು.

ಹೀಗಾಗಿ ಉಮಾಕಾಂತ ದೇಶಪಾಂಡೆ ಅವರು ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ಈ ಎಲ್ಲಾ ವಿಷಯದ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡರು.

ShareSendTweetShare
ADVERTISEMENT
Previous Post

ಉತ್ತರ ಕನ್ನಡ | ಸಮಸ್ಯೆಗಳ ನಿವಾರಣೆಗೆ ನೂರಾರು ಸಲಹೆ!

Next Post

ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!

Next Post
Illegal sand: Beat police complaint against the tipper that fell into the river!

ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!

Tobacco sales around schools Rs 200 fine for selling Rs 1000 worth of tobacco!

ಶಾಲೆ ಸುತ್ತ ತಂಬಾಕು ಮಾರಾಟ: ಸಾವಿರ ರೂ ತಂಬಾಕು ಮಾರುವವನಿಗೆ 200 ರೂ ದಂಡ!

Let the IT park come... let the sector develop'

ಐಟಿ ಪಾರ್ಕ ಬರಲಿ.. ಕ್ಷೇತ್ರದ ಅಭಿವೃದ್ಧಿ ಆಗಲಿ'

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.