6
  • Latest
Yellapur Tobacco use is prohibited in both these towns!

ಯಲ್ಲಾಪುರ: ಈ ಎರಡೂ ಊರುಗಳಲ್ಲಿ ತಂಬಾಕು ಬಳಕೆಯೇ ನಿಷಿದ್ಧ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಯಲ್ಲಾಪುರ: ಈ ಎರಡೂ ಊರುಗಳಲ್ಲಿ ತಂಬಾಕು ಬಳಕೆಯೇ ನಿಷಿದ್ಧ!

AchyutKumar by AchyutKumar
in ರಾಜ್ಯ
Yellapur Tobacco use is prohibited in both these towns!

ಯಲ್ಲಾಪುರ ತಾಲೂಕಿನ ಶೀಗೆಪಾಲ್ ಹಾಗೂ ಅಣಲಗಾರ್ ಊರಿನಲ್ಲಿ ಯಾರೂ ತಂಬಾಕು ಬಳಕೆ ಮಾಡುವುದಿಲ್ಲ. ತಂಬಾಕು ಉತ್ಪನ್ನಗಳಾದ ಗುಟ್ಕಾ, ಬೀಡಿ-ಸಿಗರೇಟು ಬಳಸುವವರು ಸಹ ಇಲ್ಲಿಲ್ಲ!

ADVERTISEMENT

ಯಲ್ಲಾಪುರ ತಾಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಶೀಗೆಪಾಲ್ ಊರು ಬರುತ್ತದೆ. ಅಣಲಗಾರವೂ ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುತ್ತದೆ. ಅಡಿಕೆ ಬೆಳೆ ಇಲ್ಲಿನವರ ಪ್ರಮುಖ ಆದಾಯ. ಅದಾಗಿಯೂ ಅಡಿಕೆ ಜೊತೆ ನಂಟು ಹೊಂದಿದ ತಂಬಾಕು ಇಲ್ಲಿನವರಿಗೆ ಎಂದಿಗೂ ಮುಖ್ಯ ಎನಿಸಿಲ್ಲ!

ಶೀಗೆಪಾಲ್ ಹಾಗೂ ಅಣಲಗಾರಿನ ಬಹುತೇಕ ಜನ ಸುಶಿಕ್ಷಿತರು. ತಂಬಾಕು ಹಾಗೂ ಅದರ ಬಳಕೆಯಿಂದ ಆಗುವ ಆರೋಗ್ಯ ಹಾನಿಯ ಬಗ್ಗೆ ಅಲ್ಲಿನವರಿಗೆ ಅರಿವಿದೆ. ಹೀಗಾಗಿ ಅನಾಧಿಕಾಲದಿಂದಲೂ ಆ ಊರಿನವರು ತಂಬಾಕಿನಿoದ ದೂರವೇ ಉಳಿದಿದ್ದಾರೆ. ಅಲ್ಲಿ-ಇಲ್ಲಿ ಒಂದಿಬ್ಬರು ತಂಬಾಕು ಉಪಯೋಗ ಮಾಡಿದ್ದು ಗಮನಕ್ಕೆ ಬಂದಾಗಲೂ ಊರಿನ ಹಿರಿಯರು ಅವರಿಗೆ ಬುದ್ದಿ ಹೇಳಿ ದುಶ್ಚಟ ಬಿಡಿಸಿದ್ದಾರೆ.

Advertisement. Scroll to continue reading.

ಇನ್ನೂ, ಕೃಷಿ-ಹಾಗೂ ತೋಟಗಾರಿಕೆಯನ್ನು ನಂಬಿಕೊoಡಿರುವ ಈ ಎರಡು ಗ್ರಾಮಗಳಿಗೆ ಕೂಲಿ ಕೆಲಸಕ್ಕೆ ಬೇರೆ ಬೇರೆ ಊರುಗಳಿಂದ ಕಾರ್ಮಿಕರು ಬರುತ್ತಾರೆ. ಅವರಿಗೆ ಸಹ ಇಲ್ಲಿನವರು ಎಲೆ-ಅಡಿಕೆ ಜೊತೆ ತಂಬಾಕು ಕೊಡುವುದಿಲ್ಲ. ಮುಂಜಿ-ಮದುವೆ ಸೇರಿ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅತಿಥಿಗಳು ಆಗಮಿಸಿದರೂ ಅವರ ಸತ್ಕಾರದ ನೆಪದಲ್ಲಿ ತಂಬಾಕು ತರುವವರು ಕಾಣುವುದಿಲ್ಲ. ಮನೆಯಲ್ಲಿರುವ ಕವಳದ ಡಬ್ಬಿಗೂ ತಂಬಾಕಿನ ಕಂಪಿಲ್ಲ.

Advertisement. Scroll to continue reading.

`ತಂಬಾಕು ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣ. ಹಿರಿಯರಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ತಂಬಾಕು ದುಷ್ಪರಿಣಾಮದ ಬಗ್ಗೆ ಅರಿವಿದೆ. ಹೀಗಾಗಿ ನಮ್ಮ ಊರಿನಲ್ಲಿ ಯಾರೂ ತಂಬಾಕು ಸೇವಿಸುವುದಿಲ್ಲ’ ಎಂದು ಶೀಗೆಪಾಲಿನ ರಾಮಕೃಷ್ಣ ಭಾಗ್ವತ್ ಹೆಮ್ಮೆಯಿಂದ ಹೇಳಿದರು. `ಆರೋಗ್ಯ ಇಲಾಖೆಯಿಂದ ಅಣಲಗಾರಿನ ಮನೆ ಮನೆ ಸಮೀಕ್ಷೆ ನಡೆಸಿದ್ದು, ಇಲ್ಲಿ ಯಾರೂ ತಂಬಾಕು ವ್ಯಸನಿಗಳಿಲ್ಲ ಎಂಬುದು ಖಚಿತವಾಗಿದೆ’ ಎಂದು ನಂದೂಳ್ಳಿ ಗ್ರಾ ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್ ಶೇಟ್ ದೃಢಪಡಿಸಿದರು.

ಅಣಲಗಾರ ಊರು 76.41 ಹೆಕ್ಟರ್ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ ಒಟ್ಟು 19 ಮನೆಗಳಿವೆ. ಈಚೆಗಿನ ಮಾಹಿತಿ ಪ್ರಕಾರ ಆ ಊರಿನಲ್ಲಿ 56 ಜನ ವಾಸಿಸುತ್ತಿದ್ದಾರೆ. ಇನ್ನೂ ಶೀಗೆಪಾಲ್ ಗ್ರಾಮ 62 ಎಕರೆ ವಿಸ್ತೀರ್ಣದಲ್ಲಿದ್ದು, ಅಲ್ಲಿ ಏಳು ಮನೆಗಳಿವೆ. ಇಲ್ಲಿ 32 ಜನ ವಾಸವಾಗಿದ್ದಾರೆ. ಈ ಎರಡು ಊರಿನ ಜನ ಉದ್ಯೋಗಕ್ಕಾಗಿ ಬೇರೆ ಬೇರೆ ಊರುಗಳಲ್ಲಿದ್ದರೂ ಅವರೂ ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಬಹುದೂರ.

ಈ ಎಲ್ಲಾ ಹಿನ್ನಲೆ ಸರ್ಕಾರ `ಅಣಲಗಾರ್ ಹಾಗೂ ಶೀಗೆಪಾಲ್ ಗ್ರಾಮವನ್ನು ತಂಬಾಕು ಮುಕ್ತ ಊರು’ ಎಂದು ಘೋಷಿಸಲಿದೆ. ಶೀಘ್ರದಲ್ಲಿಯೇ ಸರ್ಕಾರದಿಂದ ಈ ಘೋಷಣೆ ಹೊರಬರಲಿದೆ.

Previous Post

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

Next Post

ಪುಣ್ಯಕೋಟಿ ಗೋಶಾಲೆಗೆ ಹೊಸ ಅತಿಥಿ: ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳಿಗೆ ಮರುಜೀವ!

Next Post
A new guest at the Punyakoti cowshed Cows on their way to the slaughterhouse are brought back to life!

ಪುಣ್ಯಕೋಟಿ ಗೋಶಾಲೆಗೆ ಹೊಸ ಅತಿಥಿ: ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳಿಗೆ ಮರುಜೀವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ